ಚಿಕ್ಕಮಗಳೂರು ನಗರದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳಿಂದ ರಾಜ್ಯದಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹಾಗೂ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾಲ್ನಡಿಗೆ ಜಾಥಾ ನಡೆಸಿ, ಮೂಡಿಗೆರೆ ರಸ್ತೆಯಲ್ಲಿರುವ ಬೋಳರಾಮೇಶ್ವರ ದೇವಸ್ಥಾನದ ಹತ್ತಿರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ನಡೆಸಲಾಯಿತು.

ಶ್ರೀಮತಿ ಅಂಜು ಅವರು ಮಾತಾಡಿ,”ನನಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಅದು ಬರೀ ಹೆಸರಿಗಷ್ಟೇ, ನಮಗೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಹಕ್ಕು ನೀಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮುಖ್ಯವಾಗಿ ವಸತಿ, ಉದ್ಯೋಗವಕಾಶ ನೀಡಿ ಎಂದು ಸರಕಾರಕ್ಕೆ ಆಗ್ರಹಿಸಿದರು. ನನಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಸರಕಾರ ನೀಡಿಲ್ಲ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲು ಹೋಗಿ, ಬಳಿಕ ಆ ಜಿಲ್ಲಾಧಿಕಾರಿಗಳೇ ಇರುವುದಿಲ್ಲ ಎಂದು ನೋವು ತೋಡಿಕೊಂಡರು. ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಸ್ವಾಭಿಮಾನಿ ಬದುಕು ನಡೆಸುವಂತೆ ಆಗಬೇಕು.ಬಾಡಿಗೆ ಮನೆ ಸಿಗುವುದಿಲ್ಲ ಎಂದು ಕೇಳ್ಪಟ್ಟೆ ಇಂತಹ ಸಾಮಾಜಿಕ ಅಸ್ಪಶ್ಯತೆಯಿಂದ ನಾವು ಮುಕ್ತವಾಗಬೇಕು. ಇಲ್ಲಿ ನಾವು ಮನುಷ್ಯ ಜಾತಿ ಎಂದು ಬದುಕುವ ಮನೋಭಾವ ಮೂಡಿಸಬೇಕು ಎಂದರು.
ನಿಶಾ ಅವರು ಮಾತಾಡಿ, “ಲಿಂಗತ್ವ ಅಲ್ಪಸಂಖ್ಯಾತರಲ್ಲಿ ವೈವಿಧ್ಯತೆ ಹಾಗೂ ಪ್ರತಿರೋಧ ಕೂಡ ಇದೆ. ಕಾಂಗ್ರೆಸ್ ಸರಕಾರ ವಸತಿ ನೀಡಲು ಹಿಂದೇಟು ಹಾಕುತ್ತಿದೆ. ಪ್ರಣಾಳಿಕೆಯಲ್ಲಿ ವರ್ಷಕ್ಕೆ ೨೦೦ ಕೊ.ರೂ ಕೊಟ್ಟಿದೆ ಎಲ್ಲಿ ಕೊಟ್ಟಿದೆ ಎಂದು ಪ್ರಶ್ನಿಸಿದರು. ಸಮಾಜ ಬದಲಾವಣೆ ಆಗಬೇಕಾದರೆ ಶೋಷಿತರ, ಸಮಾನ ಮನಸ್ಕರೊಂದಿಗೆ ಅಲ್ಪಸಂಖ್ಯಾತರು ಕೈಜೋಡಿಸಬೇಕು. ದಲಿತ, ಶೋಷಿತರ ಪರವಾಗಿಯೂ ನ್ಯಾಯಕ್ಕಾಗಿ ಪ್ರತಿಭಟಿಸಬೇಕಾಗಿದೆ. ಮಾನವ ಹಕ್ಕುಗಾಗಿ ಅವರು ಕೂಡ ನಮ್ಮೊಂದಿಗೆ ಜೊತೆಯಾಗುತ್ತಾರೆ. ಸಮಾಜದೊಂದಿಗೆ ಘಣತೆಯನ್ನು ಕಳೆದು ಕೊಳ್ಳುವ ಯಾವುದೇ ಕಾರ್ಯಕ್ಕೆ ಲಿಂಗತ್ವ ಅಲ್ಪಸಂಖ್ಯಾತರು ಇಳಿಯಬಾರದು ಎಂದು ಕಿವಿಮಾತು ಹೇಳಿದರು.
ಪತ್ರಕರ್ತೆ ಎಸ್. ಜಿ ಗಿರಿಜಾ ಮಾತನಾಡಿ,” ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಹಾದಿಯಲ್ಲಿ ನಡೆಯಬೇಕು. ಹುಟ್ಟಿನಿಂದ ಬಂದಿದ್ದ ನ್ಯೂನತೆಯನ್ನು ಶಾಪ ಎಂದು ಪ್ರತಿ ನಿಧಿಸುವುದು ತಪ್ಪು. ಎಲ್ಲರಿಗೂ ಬದುಕುವ ಹಕ್ಕು ಇದೆ. ಸಾಮಾಜಿಕವಾಗಿ, ರಾಜಕೀಯ, ಹಣಕಾಸಿನ ಪರಿಸ್ಥಿಯಲ್ಲಿ ಕೂಡ ಸ್ನೇಹಿತರು ಸಮಸ್ಯೆ ಎದುರಿಸುತ್ತಿದ್ದಾರೆ. ಸಣ್ಣ ಹಣದಲ್ಲಿಯೇ, ಸ್ವಂತ ಉದ್ದಿಮೆಯನ್ನು ಮಾಡಲು ಪ್ರಯತ್ನಿಸಬೇಕು. ಜೊತೆ ಮನುಷ್ಯರಾಗಿ ಬಾಳಬೇಕು ಎಂದು ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಾ.11ರಂದು ಕರ್ನಾಟಕ ಸ್ವಾಭಿಮಾನ ನಡಿಗೆ
2026 – 27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಯಾವುದೇ ಹೊಸ ಅನುದಾನ ಅಥವಾ ಸಮಗ್ರ ಕಾರ್ಯಕ್ರಮವನ್ನು ಘೋಷಿಸದೇ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿಸಲಾಗಿದೆ ಎಂದು ಸಂಘಟಕರ ಆರೋಪವಾಗಿದೆ. ಈ ವೇಳೆ ಮೇಘ ಮಲ್ನಾಡ್, ಮೋಹನ್ಗ, ಲಕ್ಷ್ಮಣ್, ಕಾವ್ಯ, ಸಹನಾ ಹಾಗೂ ಅನೇಕ ಸಂಘಟನೆಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.





