ಕಾಂಗ್ರೆಸ್ ಸರ್ಕಾರ ವಿರುದ್ಧ ಜಾತ್ಯತೀತ ತಿಲಾಂಜಲಿ ನೀಡುತ್ತಿದೆ ಎಂದು ಚಿಕ್ಕಮಗಳೂರು ನಗರದಲ್ಲಿ ಗುರುವಾರ ಪ್ರತಿಭಟನೆಯನ್ನು ಎದ್ದೇಳು ಕರ್ನಾಟಕ ಸಂಘಟನೆ ಕೈಗೊಂಡಿತ್ತು.

ಪ್ರತಿಭಟನೆ ಮಾಡುವ ಮೊದಲೇ ಸಂಘಟನೆಯ ಮುಖಂಡರನ್ನು ವಶಕ್ಕೆ ಪಡಿಸಿಕೊಂಡಿರುವ ಕುರಿತಾಗಿ ಶೃಂಗೇರಿ ಕ್ಷೇತ್ರ ಶಾಸಕ ಟಿ. ಡಿ ರಾಜೇಗೌಡ ಮಾತನಾಡಿ “ಸಂವಿಧಾನದಲ್ಲಿ ಯಾವುದೇ ಒಂದು ಪ್ರತಿಭಟನೆಯನ್ನು ನಡೆಸುವ ಹಕ್ಕು ಜನರಿಗಿದೆ. ಯಾರ ವಿರುದ್ಧವಾಗಿ ಯಾರೇ ಆಗಿರಬಹುದು ಪ್ರತಿಭಟನೆ ಮಾಡುವುದು ಸಂವಿಧಾನದಲ್ಲಿ ಹಕ್ಕು ಇದೆ. ನಮಗೆ ಹೋರಾಟ ಮಾಡಿಯೇ ಸ್ವಾತಂತ್ರ್ಯ ದೊರಕಿರುವುದು.ಇಂತಹ ಸಂದರ್ಭದಲ್ಲಿ ಹತ್ತಿಕ್ಕುವಂತಹ ಕೆಲಸವನ್ನು ಯಾರು ಮಾಡಬಾರದು. ಯಾವುದೇ ಪ್ರತಿಭಟನೆ ಶಾಂತಿಯುತವಾಗಿ ಸಾಂವಿಧಾನಿಕವಾಗಿಯೇ ಇರಬೇಕು ಹಾಗೆಯೇ, ಎದ್ದೇಳು ಕರ್ನಾಟಕ ಕೂಡ ಅದೇ ರೀತಿ ಪ್ರತಿಭಟನೆಯನ್ನು ಮಾಡಿದ್ದೀರಿ. ಅಗತ್ಯ ಮೀರಿ ಪೊಲೀಸರು ಹಲ್ಲೆ ಮಾಡಿದರೆ ಅದು ಕಾನೂನು ರೀತಿಯಲ್ಲಿ ತಪ್ಪುಆಗುತ್ತದೆ. ಹಾಗಾಗಿ ಇಂತಹ ಘಟನೆಗಳು ನಡೆದಿದ್ದರೆ ಅದನ್ನು ನಾನು ಖಂಡಿಸುತ್ತೇನೆ” ಎಂದು ಈ ದಿನ.ಕಾಂ ಜೊತೆ ಮಾತನಾಡಿದ್ದಾರೆ.




