ಚಿಕ್ಕಬಳ್ಳಾಪುರ : ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರ ದೂರದೃಷ್ಟಿಯ ಕಾರಣ ಇಂದು ಚಿಮುಲ್ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಚಿಂತಾಮಣಿ-ಕಸಬಾ ಕ್ಷೇತ್ರದಿಂದ ಚಿಮುಲ್ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ವೈ.ಬಿ.ಅಶ್ವತ್ಥನಾರಾಯಣ ಬಾಬು ಹೇಳಿದರು.
ಚಿಮುಲ್ ಆವರಣದಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ಚಿಮುಲ್ ಗೆ ಸಚಿವರಾದ ಸುಧಾಕರ್ ಅವರು 9 ಎಕರೆ 15 ಗುಂಟೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟಿದ್ದಾರೆಂದರು.ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಬೇರ್ಪಟ್ಟ ಜಿಲ್ಲೆಗೆ ಚಿಮುಲ್ ಪ್ರತ್ಯೇಕಗೊಂಡಿದ್ದು ಅವರ ಅಭಿವೃದ್ಧಿ ಕಾರ್ಯಗಳಿಗೆ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಶ್ರೀರಕ್ಷೆ ಎಂದರು.
ಅಲ್ಲದೇ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬರಲಿದೆ ಎಂದು ಅಶ್ವತ್ಥನಾರಾಯಣ ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಜಿಲ್ಲೆಗಿಂತ ಆರ್ಥಿಕವಾಗಿ ರೈತ ಸ್ನೇಹಿ ಆಡಳಿತ ನೀಡುವ ಕನಸನ್ನು ನಾವು ಹೊಂದಿದ್ದೇವೆ.ಆ ನಿಟ್ಟಿನಲ್ಲಿ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರು ಚಿಮುಲ್ ವತಿಯಿಂದ ಸರ್ಕಾರಕ್ಕೆ 1ರೂ.ಕಟ್ಟಿಸಿಕೊಳ್ಳದೇ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಚಿಮುಲ್ಗೆ ಮಂಜೂರು ಮಾಡಿಸಿದ್ದಾರೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ಈ ಹಿಂದೆ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಸಹಕಾರದೊಂದಿಗೆ ಚಿಮುಲ್ ಅನ್ನು ಕಾನೂನು ಕಾನೂನು ಬದ್ದವಾಗಿ ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಇದನ್ನು ಓದಿದ್ದೀರಾ…? ಗಣಿಗಾರಿಕೆ ಚಾಲಕ ಸಾವು ದೂರಿಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ
ಪ್ರಪ್ರಥಮ ಬಾರಿಗೆ ಚಿಮುಲ್ ಚುನಾವಣೆ ಎದುರಿಸುತ್ತಿದೆ. ಚುನಾವಣೆಯಲ್ಲಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆಂದರು.ಈ ವೇಳೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಸ್.ಎನ್.ಚಿನ್ನಪ್ಪ, ಮುರುಗಮಲ್ಲ ಲಕ್ಷ್ಮಿ ನಾರಾಯಣರೆಡ್ಡಿ,ಕೃಷ್ಣಮೂರ್ತಿ, ಚೆನ್ನಸಂದ್ರ ನಾರಾಯಣಸ್ವಾಮಿ,ಆರ್ ಎಂ ಜಿ ಶ್ರೀನಿವಾಸ್,ಚಂದ್ರಶೇಖರ್,ಶ್ರೀರಾಮರೆಡ್ಡಿ,ಏಜಾಜ್, ಅನೇಕ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಇದ್ದರು.





