ಚಿಂತಾಮಣಿ ತಾಲೂಕಿನ ಕೆ ದೇವಗಾನಹಳ್ಳಿ ಗ್ರಾಮದವರಾದ ಡಿ ಎನ್ ಶೇಖರ್ ರೆಡ್ಡಿಯವರು ತಮ್ಮ ತಂದೆಯಾದ ದಿ. ಡಿ ಎಂ ನಾರಾಯಣ್ ರೆಡ್ಡಿಯಾದ 7ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಚಿಲಕಲನೆರ್ಪು ಹೋಬಳಿಯ ಬುರುಡುಗುಂಟೆ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರಹ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಸುಮಾರು ವರ್ಷಗಳಿಂದ ಡಿ ಎನ್ ಶೇಖರರೆಡ್ಡಿರವರು ರಾಜ್ಯದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು. ಮುಂದುವರೆದ ಭಾಗವಾಗಿ ಇವರ ಸೇವೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ.
ಬುರುಡುಗುಂಟೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಡಿ ಎನ್ ಶೇಖರ್ ರೆಡ್ಡಿರವರು, “ಸರ್ಕಾರ ನೀಡುವ ಸೌಲಭ್ಯಗಳ ಜತೆಗೆ ದಾನಿಗಳು ನೀಡುವ ಎಲ್ಲ ಸೌಲಭ್ಯಗಳನ್ನು ಪಡೆದು ಶೈಕ್ಷಣಿಕ ಪ್ರಗತಿಯನ್ನು ಹೊಂದಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮುಂದಿನ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸರ್ಕಾರದ ಉದ್ದೇಶ: ಸಚಿವ ಎಸ್ ಮಧು ಬಂಗಾರಪ್ಪ
“ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುವ ಮೂಲಕ ಸಮಾಜ, ಹೆತ್ತವರು ಹಾಗೂ ಗುರು ಹಿರಿಯರ ಋಣವನ್ನು ತೀರಿಸಬೇಕು” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿರಿಷಾ, ಡಾ. ಶ್ರೀಕಾಂತ್, ರಾಜೇಶ್, ಮುಖ್ಯ ಶಿಕ್ಷಕ ಶಬೀರ್ ಪಾಷಾ, ಮುಖಂಡರಾದ ಕೃಷ್ಣಾರೆಡ್ಡಿ, ಅಶೋಕ್, ಶಿಕ್ಷಕರಾದ ವೆಂಕಟರೆಡ್ಡಿ, ಸುಮಾ, ಫರಹತ್ ಭಾನು, ಗುರುಪ್ರಸಾದ್, ನರೇಂದ್ರ, ಚಂದ್ರು, ಪೊಲೀಸ್ ಸಿಬ್ಬಂದಿ ರಾಮಕೃಷ್ಣ, ಪದ್ಮಾವತಿ, ಗಾಯಿತ್ರಿ, ವೆಂಕಟೇಶ್ ಸೇರಿದಂತೆ ಇತರರು ಇದ್ದರು.





