ಉದ್ಯಮ ಮಂಡಳಿ ಮತ್ತು ಜೀವನ ಉಪಯೋಗ ಇಲಾಖೆಯಿಂದ ಇಂದು ಚಿಂತಾಮಣಿ ಬೀದಿಬದಿ ವ್ಯಾಪಾರಸ್ಥರ ತಾತ್ಕಾಲಿಕ ಮಾರಾಟ ಸಮಿತಿ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಅನ್ಸರ್ ಪಾಷಾ ಅವರನ್ನು ಆಯ್ಕೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭಾ ಸಭಾಂಗಣದಲ್ಲಿ ಇಂದು ನಗರಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯನ್ನು ರಚನೆ ಮಾಡುವ ಸಲುವಾಗಿ ಇಂದು ನಗರಸಭೆ ಪೌರಾಯುಕ್ತ ಜಿ ಎನ್ ಚಲಪತಿ ಹಾಗೂ ಪಟ್ಟಣ ಮಾರಾಟ ಸಮಿತಿಯವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು.
ನಗರಸಭೆ ಪೌರಾಯುಕ್ತರ ಜಿ ಎನ್ ಚಲಪತಿಯವರು ಈ ವೇಳೆ ಮಾತನಾಡಿ, “ಉದ್ಯಮ ಮಂಡಳಿ ಮತ್ತು ಜೀವನ ಉಪಯೋಗ ಇಲಾಖೆಯಿಂದ ಸ್ಥಳೀಯ ಸಂಸ್ಥೆಗಳು ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯ ಆದೇಶದಂತೆ ನಾವು 12 ಗಂಟೆಗೆ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಅದರಂತೆ ಸದಸ್ಯರು ಬಂದಿದ್ದರು. ಈ ಹಿಂದೆ ಸೂಫಿ ಸಲೀಂ ಅಧ್ಯಕ್ಷರಾಗಿದ್ದರು. ಅವರೂ ಕೂಡ ಇಂದು ಸಭೆಗೆ ಗೈರು ಹಾಜರಾಗಿದ್ದರು. ಕೆಲವು ಸದಸ್ಯರೂ ಕೂಡ ಗೈರು ಹಾಜರಾಗಿದ್ದರು. ಅದರಂತೆ ಇಂದು ನೂತನವಾಗಿ ಅನ್ಸರ್ ಪಾಷಾ ಅಧ್ಯಕ್ಷರಾಗಿ ಮತ್ತು ಕೆಲ ಸದಸ್ಯರನ್ನು ತಾತ್ಕಾಲಿಕವಾಗಿ ಸಮಿತಿಯ ಸದಸ್ಯರನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶದಂತೆ ನಾವು ಚುನಾವಣೆ ನಡೆಸಿಸುತ್ತೇವೆ” ಎಂದು ಹೇಳಿದರು.
“ಈಗ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಸದಸ್ಯರು ಕಮಿಟಿಯ ಎಲ್ಲ ಸದಸ್ಯರನ್ನೂ ಒಗ್ಗೂಡಿಸಿ ಸರ್ಕಾರದಿಂದ ಬರುವ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅನ್ಸರ್ ಪಾಷಾ, ಸದ್ಯಸರಾಗಿ ರಾಣಿಯಮ್ಮ, ಸುಧಾಕರ್, ಇರ್ಫಾನ್, ಬಾಬು, ಮೋಹನ್ ಬಾಬು, ನಯಾಜ್, ರೇಷ್ಮಾ, ಪರ್ವೀನ್ ತಾಜ್ ಆಯ್ಕೆಗೊಂಡರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗಣೇಶಮೂರ್ತಿ ಬಳಿ ಅಳವಡಿಸಿದ್ದ ವಿವಾದಿತ ಫ್ಲೆಕ್ಸ್ ತೆರವು: ಪೊಲೀಸರ ಕಾರ್ಯ ಯಶಸ್ವಿ
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನ್ಸರ್ ಪಾಷಾ ಮಾತನಾಡಿ, “ಈಗ ನನ್ನನ್ನು ಆಯ್ಕೆ ಮಾಡಿರುವ ಎಲ್ಲ ಸದಸ್ಯರಿಗೂ ಕೃತಜ್ಞೆ ಸಲ್ಲಿಸುತ್ತೇನೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ಎಲ್ಲರಿಗೂ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನನ್ನು ಅಧ್ಯಕ್ಷನಾಗಿ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರಿಗೆ ನನ್ನ ಅಭಿನಂದನೆಗಳು” ಎಂದರು.





