ಚಿತ್ರದುರ್ಗ | ಬಸವ ಸಂಸ್ಕೃತಿ ಅಭಿಯಾನ: ಕನೇರಿ ಶ್ರೀಗಳ ಹೇಳಿಕೆಗೆ ಪಂಡಿತಾರಾಧ್ಯ ಶ್ರೀ ಆಕ್ಷೇಪ

Date:

“ಒಬ್ಬ ಗುರುವಿನ ಲಕ್ಷಣ ಕೇವಲ ಕಾವಿ, ಮಠ, ಹೊಗಳುಭಟ್ಟರು ಅಲ್ಲ, ಅರಿವು, ಆಚಾರ, ಅನುಭಾವ. ಆಕಾಶಕ್ಕೆ ಉಗುಳಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆ ಇಲ್ಲದಿದ್ದರೆ ಏನಾಗುತ್ತದೆ ಎಂದು ಅರಿಯಬೇಕು. ‘ಬಸವ ಸಂಸ್ಕೃತಿ ಅಭಿಯಾನ‘ದ ಯಶಸ್ಸು ಕೆಲವು ಬಸವ ವಿರೋಧಿಗಳ ನಿದ್ರೆ ಕೆಡಿಸಿರುವುದು, ಉಂಡ ಅನ್ನ ಅರಗದೆ ಹೊಟ್ಟೆ ಬೇನೆಗೆ ಕಾರಣವಾಗಿರುವುದು ಸತ್ಯವಾದರೂ ಅವರಾರೂ ಕನೇರಿ ಕಾಡಸಿದ್ದೇಶ್ವರ ಶ್ರೀಗಳಂತೆ ವಿಷವನ್ನು ಕಕ್ಕಿಲ್ಲ” ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.‌

ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀಗಳು “ಒಬ್ಬ ವ್ಯಕ್ತಿಗೆ ಸಾರ್ವಜನಿಕ ಮನ್ನಣೆ, ಮಠಾಧಿಕಾರ, ಅದಕ್ಕೆ ತಕ್ಕ ಸಂಪತ್ತು ಬಂದಾಗ ಅವರು ಬಸವಣ್ಣನವರಂತೆ ‘ಮುಗಿದ ಕೈ, ಬಾಗಿದ ತಲೆಯ‘ ಭೃತ್ಯಾಚಾರಿಗಳಾಗಿರಬೇಕಿತ್ತು. ಬದಲಾಗಿ ಅಹಂಕಾರ, ಅವಿವೇಕದ ಮೊಟ್ಟೆಯಂತಾದರೆ ಹೇಗೆ? ಅವರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲ ಸ್ವಾಮಿಗಳ ಬಗ್ಗೆ ಆಡಿರುವ ಅಸಂವಿಧಾನಾತ್ಮಕ ಕೀಳು ಪದಗಳು ಅವರ ನೈಜ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಇವರು ಯಾವುದರಿಂದ ಹೊಡೆಯಬೇಕೆಂದು ಅಪ್ಪಣೆ ಕೊಡಿಸಿದ್ದಾರೋ ಅವುಗಳ ಪ್ರಯೋಗ ಅವರ ಮೇಲೆಯೇ ಆದರೆ ಗತಿ ಏನು ಎನ್ನುವ ಆತಂಕ ನಮಗಿದೆ” ಕಳವಳ ವ್ಯಕ್ತಪಡಿಸಿದ್ದಾರೆ.

“ನಮ್ಮ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದವರಲ್ಲಿ ಕನೇರಿ ಶ್ರೀಗಳೂ ಒಬ್ಬರು. ಆದರೆ ಇಂದು ಅವರ ಆಶೀರ್ವಚನದ ನುಡಿಮುತ್ತುಗಳ ವಾಟ್ಸಪ್ ವೀಡಿಯೋದ ಕೀಳು ಭಾಷೆಯ ನುಡಿಗಳನ್ನು ಕೇಳಿದಾಗ ನಮ್ಮ ಗೌರವಕ್ಕೆ ಪಾತ್ರರಾದವರು ಇವರೇನ ಎನ್ನುವ ಸಂಶಯ, ಅನುಮಾನ ಬಂದಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈಗ ಅವರಿಗೆ ಮಠಾಧೀಶರ ಭಕ್ತರು ಮತ್ತು ಸಾರ್ವಜನಿಕರೇ ಬುದ್ಧಿ ಕಲಿಸುವ ಕಾಲ ಬಂದಿದೆ. ಅವರು ಕಾನೂನು ಕೈಗೆ ತೆಗೆದುಕೊಂಡು ಬಂಡೇಳುವ ಮುನ್ನ ಸರ್ಕಾರ ಮತ್ತು ಆರಕ್ಷಕ ಇಲಾಖೆಯವರು ತಕ್ಷಣ ಆ ಸ್ವಾಮಿಗಳ ಮೇಲೆ ಉಗ್ರಕ್ರಮ ಜರುಗಿಸಬೇಕು. ಸ್ವಾಮಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಸಾರ್ವಜನಿಕವಾಗಿಯೇ ಮಠಾಧೀಶರ ಕ್ಷಮೆ ಕೇಳುವ ವಿವೇಕ ತೋರಬೇಕು. ಅವರ ಬಾಯಿಂದ ಬಂದಿರುವ ಬಿರುನುಡಿಗಳು ಅವರ ಸ್ವಾಮಿತನವನ್ನೇ ಹರಾಜಿಗಿಟ್ಟಿವೆ. ಅವರೊಬ್ಬ ಬಸವ ಪರಂಪರೆಯ ಸ್ವಾಮಿಗಳಾಗಿ ಬಸವ ತತ್ವಕ್ಕೆ ದ್ರೋಹ ಬಗೆದು ತಮ್ಮ ಕರಾಳ ಮುಖದ ದರ್ಶನ ಮಾಡಿಸಿದ್ದಾರೆ. ಅವರ ಸ್ವಾಮಿತನದ ಹಿಂದಿರುವ ಮುಖವಾಡವನ್ನು ಅವರೇ ಅನಾವರಣ ಮಾಡಿಕೊಂಡಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಮಾಳ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ, ಸ್ಥಳೀಯ ಆಡಳಿತದ ದೌರ್ಜನ್ಯ ಆರೋಪ

“ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಆತ್ಮಾವಲೋಕನ ಮಾಡಿಕೊಂಡು ಬಸವಣ್ಣನವರಂತೆ ‘ಎನ್ನತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎಂದುಕೊಂಡು ತಪ್ಪನ್ನು ತಿದ್ದಿಕೊಳ್ಳುವ ಸದ್ಬುದ್ಧಿಯನ್ನು ಬಸವಾದಿ ಶರಣರು ಕನೇರಿ ಸ್ವಾಮಿಗಳಿಗೆ ಕರುಣಿಸಲಿ ಎಂದು ಆಶಿಸುತ್ತೇವೆ” ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...