ಮೊಳಕಾಲ್ಮೂರು ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ೧೪ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ತಂಡ ೨೦೨೫-೨೬ರ ಆಯ್ಕೆಗೆ ೧೨೪ ಕಾಲೇಜುಗಳು ಭಾಗವಹಿಸಿದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಒಟ್ಟು ೫೦ ಅಂಕಗಳೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದ ಸಮಗ್ರ ಪ್ರಶಸ್ತಿ ಮತ್ತು ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
ಅಖಿಲಾ ೧೫೦೦ಮೀ ಓಟ ಪ್ರಥಮ, ೧೦೦೦೦ ಮೀ ಓಟದಲ್ಲಿ ಸಂತೋಷ್ ಪ್ರಥಮ, ದರ್ಶನ್ ದ್ವಿತೀಯ, ಹೈ ಜಂಪ್ ನಲ್ಲಿ ಆಕಾಶ್ ದ್ವಿತೀಯ, ಚಂದ್ರಕಲಾ- ೧೦೦೦೦ ಮೀ. ತೃತೀಯ, ಚಂದ್ರಿಕ ೫ ಕಿಮೀ ನಡಿಗೆ ಪ್ರಥಮ, ಶಿವಮ್ಮ ದ್ವಿತೀಯ, ೨೦ ಕಿಮೀ ನಡಿಗೆ ತಿಪ್ಪೇಶ್ ದ್ವಿತೀಯ, ದರ್ಶನ್ ತೃತೀಯ, ಶಾಂತಮ್ಮ ೮೦೦ಮೀ ತೃತೀಯ, ಮುರುಳಿ ಟ್ರಿಪಲ್ ಜಂಪ್ ತೃತೀಯ, ಅಖಿಲಾ/ಶಾಂತಮ್ಮ/ಚಂದ್ರಕಲಾ/ಗೀತಾಂಜಲಿ ೪೦೦೧೦೦ ಮಹಿಳಾ ರಿಲೇ ಪ್ರಥಮ, ತಿಪ್ಪೇಶ್ ಬಿ ೫೦೦೦ಮೀ ಪ್ರಥಮ, ಚಂದ್ರಕಲಾ ೫೦೦೦ಮೀ ತೃತೀಯ, ೨೧ ಕಿ ಮೀ ಹಾಫ್ ಮ್ಯಾರಥಾನ್ ದರ್ಶನ್ ಪ್ರಥಮ, ಸಂತೋಷ್ ದ್ವಿತೀಯ, ದರ್ಶನ್/ಜೋಗೇಶ್/ಆಂಜನೇಯ/ತಿಪ್ಪೇಶ್ ೪೦೦೧೦೦ ಪುರುಷ ರಿಲೇ ಪ್ರಥಮ ಸೇರಿದಂತೆ ಒಟ್ಟು ೨೩ಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ನೆಲಕಚ್ಚಿದ ಮೆಕ್ಕೆಜೋಳದ ಇಳುವರಿ ಕುಸಿತ: ನಷ್ಟದಲ್ಲಿರುವ ರೈತರನ್ನು ಮೇಲೆತ್ತುವವರು ಯಾರು?
ವಿಜೇತ ವಿದ್ಯಾರ್ಥಿಗಳನ್ನು ನಗರದ ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಮೆರವಣಿಗೆ ಮೂಲಕ ಕರೆತಂದು ಶುಭಕೋರಲಾಯಿತು. ಪದಕ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಮೊಳಕಾಲ್ಮೂರು ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿರುವ ಎನ್ ವೈ ಗೋಪಾಲಕೃಷ್ಣ ಹಾಗೂ ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಲಿಂಗೇಶ್ವರ ವೈ, ಕ್ರೀಡಾ ಸಂಚಾಲಕ ವಿಶ್ವರಾಜ್ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.





