ಚಿತ್ರದುರ್ಗ | ಜಂಬೂದ್ವೀಪ ಹಾಗೂ ಅಂಬೇಡ್ಕರ್ ವಿಚಾರ ವೇದಿಕೆಯಿಂದ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ

Date:

ಚಿತ್ರದುರ್ಗದ ಮಹಾತ್ಮ ಜ್ಯೋತಿಬಾ ಪುಲೆ ಸ್ಪರ್ಧಾತ್ಮಕ ಕೇಂದ್ರದಲ್ಲಿ ಜಂಬೂದ್ವೀಪ ಕರ್ನಾಟಕ ಹಾಗೂ ಚಿತ್ರದುರ್ಗದ ಅಂಬೇಡ್ಕರ್ ವಿಚಾರ ವೇದಿಕೆ ಜಂಟಿಯಾಗಿ ಸಾವಿತ್ರಿಬಾ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರದುರ್ಗದ ಬುದ್ಧನಗರ ಮಾರ್ಗದಲ್ಲಿನ ಸಾವಿತ್ರಿ ಬಾಪುಲೆ ವೃತ್ತದ ನಾಮಫಲಕಕ್ಕೆ ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರು ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ವೇದಾಂತ ಏಳಂಜಿ ಮಾತನಾಡಿ “ಸಾವಿತ್ರಿಬಾ ಪುಲೆ ಮತ್ತು ಜ್ಯೋತಿಬಾ ಪುಲೆ ದಂಪತಿಗಳನ್ನು ಒಬ್ಬರು ಮತ್ತೊಬ್ಬರನ್ನು ಹೊರತು ಪಡಿಸಿ ನೋಡಲು ಸಾಧ್ಯವಿಲ್ಲ. ದೇಶದ ಎಲ್ಲಾ ಸಮುದಾಯಗಳು ಸಾವಿತ್ರಿ ಬಾಪುಲೆ ಅವರ ಜೀವನವನ್ನು ಅರಿಯಬೇಕು. ಕುಟುಂಬ ಮೇಲ್ವರ್ಗದ ವಿರೋಧದ ನಡುವೆ ಸ್ವತಃ ಗಂಡನಿಂದ ಅಕ್ಷರ ಕಲೆತು ದೇಶದ ಪ್ರಥಮ ಶಿಕ್ಷಕಿಯಾದರು. ಅಸ್ಪೃಶ್ಯರ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶಾಲೆಗಳನ್ನು ತೆರೆದು ಸಾವಿರಾರು ಜನರಿಗೆ ಅಕ್ಷರ ಕಲಿಸುವ ಜೊತೆಗೆ ಸ್ವಾಭಿಮಾನದ ಘನತೆಯ ಬದುಕನ್ನು ಕಲಿಸಿಕೊಟ್ಟವರು ಸಾವಿತ್ರಿ ಭಾಪುಲೆ” ಎಂದು ಸ್ಮರಿಸಿದರು.

1003449882

“ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ, ವಿದ್ಯಾರ್ಥಿ ಭತ್ಯೆ, ಬಟ್ಟೆಗಳನ್ನು ನೀಡಿದರು. ಮನೆಮನೆಗಳಿಗೆ ತೆರಳಿ ತಂದೆ-ತಾಯಿಯರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಒಳಜಾತಿ, ವೈವಿವಾಹಿಕ ಕಟ್ಟುಪಾಡುಗಳು ಜಾತಿಯತೆಗೆ ಮೂಲ ಕಾರಣವೆಂದು ಅರಿತು ಅಂತರ್ಜಾತಿ ವಿವಾಹಗಳನ್ನು ಮಾಡಿದರು. ಪುರೋಹಿತರಿಲ್ಲದ, ಮಂತ್ರಘೋಷಗಳಿಲ್ಲದ ಕಡಿಮೆ ಖರ್ಚಿನ ಸರಳ ವಿವಾಹಗಳನ್ನು ಮಾಡಿಸಿದರು. ಜ್ಯೋತಿಬಾ ಪುಲೆ ಸ್ವತಃ ಮಂಗಳಷ್ಟಾಕಗಳನ್ನು ಬರೆದು ಓದಿಸಿದರು. ಗಂಡು-ಹೆಣ್ಣಿನ ಸಮಾನತೆಯನ್ನು ಸಾರಿದರು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿ ಹಲವು ಮಹಿಳೆಯರಿಗೆ ಪ್ರೇರಣೆಯಾದರು. ಪುಲೆ ದಂಪತಿಗಳ ಸತ್ಯಶೋಧಕ ಸಮಾಜದಿಂದ ಮೌಢ್ಯ ನಿರ್ಮೂಲನೆ, ವಿಧವಾ ಪುನರ್ ವಿವಾಹ ಮಾಡಿದರು. ಕ್ಷಾಮ ಬರಗಾಲದ ಪರಿಸ್ಥಿತಿಯಲ್ಲಿಯೂ ದೀನದಲಿತರ ಪರವಾಗಿದ್ದು ಜೀವತೆತ್ತರು” ಎಂದು ಹೇಳಿದರು.

ಶಿಕ್ಷಕ ಪ್ರದೀಪ್ ಮಾತನಾಡಿ “ಶಾಲೆಗಳಲ್ಲಿ ಸರಸ್ವತಿ ಪೂಜಿಸುತ್ತೇವೆ. ಸರಸ್ವತಿ ಪುಸ್ತಕ ಬರೆದವರು ಅಲ್ಲ ಶಾಲೆಗಳನ್ನು ಕಟ್ಟಿಸಿದವರು ಅಲ್ಲ. ನಿಜವಾಗಿ ಶಾಲೆ ಕಟ್ಟಿಸಿ ಪುಸ್ತಕ ಕೊಟ್ಟವರು ಫುಲೆ ದಂಪತಿಗಳು. ಮೇಲ್ವರ್ಗಗಳ ಮೋಸಕ್ಕೆ ಸಿಲುಕಿ ಪಶುಗಳಂತೆ ದುಡಿವ ಶೂದ್ರಾತಿಶೂದ್ರರಿಗೆ ಯೋಚಿಸಲು ಕಲಿಸಿದರು. ಸ್ವತಃ ಅಂಬೇಡ್ಕರರಿಗೆ ಸ್ಫೂರ್ತಿಯಾದರು” ಎಂದು ಅಭಿಪ್ರಾಯಪಟ್ಟರು.

1003449885

ಸಾವಿತ್ರಮ್ಮ ಸಾವಿತ್ರಮ್ಮ ಸಾಟಿಯುಂಟೆ ಅಕ್ಷರದಮ್ಮ ಎಂಬ ಸ್ವರಚಿತ ಪದ್ಯವನ್ನು ಹಾಡಿ ಮಾತನಾಡಿದ ಕವಿ ಶಿವಶಂಕರ ಸೀಗೆಹಟ್ಟಿ “ಜ್ಯೋತಿಬಾ ಪುಲೆ ಅವರನ್ನು ಇತಿಹಾಸ ಸದಾ ಸ್ಮರಿಸಬೇಕು. ಅವರನ್ನು ಕೊಲ್ಲಲು ೫೦ ರೂ.ಗಳನ್ನು ನೀಡಿದ್ದ ವ್ಯಕ್ತಿ ಅಸ್ಪೃಶ್ಯರಿಗಾಗಿ ಜೀವನವನ್ನು ಮೂಡುಪಾಗಿಟ್ಟಿದ್ದನ್ನು ಕೇಳಿ ಪರಿವರ್ತನೆಯಾದನು. ತನ್ನನ್ನು ಕೊಲ್ಲಲು ಬಂದವರನ್ನು ಮನಃ ಪರಿವರ್ತನೆ ಮಾಡಿದ್ದು ಚರಿತ್ರೆಯಲ್ಲಿ ಬುದ್ಧ ಗುರು.‌ ಸಾವಿತ್ರಿ ಭಾಪುಲೆ ದೇಶದ ಪ್ರಥಮ ಶಿಕ್ಷಕಿಯಾಗಿ ಅಂದಿನ ಬ್ರಾಹ್ಮಣರ ವಿರೋಧದ ನಡುವೆಯೂ ಅಸ್ಪೃಶ್ಯರು, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟು ದಲಿತ ಸಮಾಜಕ್ಕೆ ತಾಯಿಯಂತೆ ಸಲುಹಿದರು” ಎಂದರು.

ಅಧ್ಯಕ್ಷತೆ ವಹಿಸಿದ್ದ ಜಂಬೂದ್ವೀಪ ರಾಮಣ್ಣ “ಅನಕ್ಷರಸ್ಥ ಸಾವಿತ್ರಿ ಬಾಪುಲೆ, ಅಕ್ಷರಸ್ಥೆಯಾಗಿ ದೇಶದ ಪ್ರಥಮ ಶಿಕ್ಷಕಿಯಾಗಿ ದೇಶಕ್ಕೆ ಮಾದರಿಯಾದರು. ಸದಾ ಪುಸ್ತಕಗಳನ್ನು ಓದುವಂತೆ. ಕಷ್ಟಕಾಲದಲ್ಲೂ ಕೈಬಿಡದೆ ಓದಿದರೆ ಉತ್ತಮ ಜೀವನ ಕಟ್ಟಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಮಾಜಿಕ ಪರಿವರ್ತನಾ ಚಳುವಳಿಯ ಮಹಾಚೇತನ ಮಾತೆ ಸಾವಿತ್ರಿ ಭಾಪುಲೆ ಜನ್ಮದಿನಾಚರಣೆ

ಕಾರ್ಯಕ್ರಮದಲ್ಲಿ ಸಾವಿತ್ರಿಬಾ ಪುಲೆ ಸರ್ಕಲ್ ಸ್ಥಾಪಕರಾದ ಚಕ್ರವರ್ತಿ, ಶ್ರೀನಿವಾಸರಾಜು, ವಿಶ್ವಾನಂದ(ವಿಕೆವಿ), ಶಿಕ್ಷಕ ಸಿದ್ದೇಶ್.ಕೆ. ಪ್ರಾಧ್ಯಾಪಕರಾದ ಮಂಜುನಾಥ ಆರ್, ಕುಮಾರ್ ಹೆಚ್, ಶಿಕ್ಷಕ ಯಾದಲಗಟ್ಟೆ ಪ್ರಕಾಶ್, ವಾರ್ಡನ್ ರುದ್ರಮುನಿ, ಸಮಯ ಏಳಂಜಿ ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...