ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣ ಹಿಂಬಾಗದ ರಸ್ತೆಯಲ್ಲಿರುವ ಚರಂಡಿಯಲ್ಲಿ ಪ್ಲಾಸ್ಟಿಕ್, ಕಸ, ಕವರ್, ತ್ಯಾಜ್ಯಗಳು ಸೇರಿದಂತೆ ಹೂಳು ತುಂಬಿಕೊಂಡಿದ್ದು ತ್ಯಾಜ್ಯ ನೀರು ಮುಂದೆ ಹೋಗಲಾರದೆ ನಿಂತಿದ್ದು ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದು ಸ್ವಚ್ಛತೆ ಕಾಪಾಡದ ಚಳ್ಳಕೆರೆ ನಗರಸಭೆ ಇಲಾಖೆ ವಿರುದ್ಧ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಸ್ಥಳೀಯರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿಯಲ್ಲಿ ಕಸ ತುಂಬಿ ತ್ಯಾಜ್ಯ ನೀರು ಹರಿಯದೇ ನಿಂತು ಕೊಳೆತ ವಾಸನೆ ಹರಡುತ್ತಿದೆ. ಆಲ್ಲಿ ಓಡಾಡುವ ಬಸ್ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.

ವಿಕಾಸ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ “ಈ ಮುಂಚೆ ನಗರಸಭೆಯವರು ವಾರಕೊಮ್ಮೆ ಕ್ಲೀನ್ ಮಾಡುತ್ತಿದ್ದರು. ಈಗ ತಿಂಗಳಿಗೊಮ್ಮೆ ಬರುತ್ತಿದ್ದಾರೆ ಅಥವಾ ಅವರಿಗೆ ತಿಳಿದಾಗ ಬರುತ್ತಾರೆ. ಈ ಚರಂಡಿಯ ದುಸ್ಥಿತಿ ನೋಡಿ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಬೇಕೆಂದು ಕಿಡಿ ಕಾರಿದ್ದಾರೆ.
ಅಲ್ಲಿರುವ ಸುತ್ತಮುತ್ತಲಿನ ಹೋಟೆಲ್ ನವರು ಕಸ ಎಲ್ಲಾ ದಿನಾಲೂ ಪಕ್ಕದ ಚರಂಡಿಯಲ್ಲಿ ತಂದು ಹಾಕುತ್ತಾರೆ. ಸುತ್ತಮುತ್ತಲಿನ ಬಹಳಷ್ಟು ಜನ ಯಾರು ಕಸ ಸಂಗ್ರಹಣೆ ವ್ಯಾನ್ ಗೆ ಹಾಕುವುದಿಲ್ಲ. ಜೊತೆಗೆ ಈ ರೋಡ್ ಗೆ ಕಸದ ವ್ಯಾನ್ ಬರುವುದೇ ಇಲ್ಲಾ. ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

“ಯಾರಿಗೂ ಹೇಳಲಾಗದ ದುರ್ವಾಸನೆಯ ಸ್ಥಿತಿ ನಿರ್ಮಾಣವಾಗಿದೆ. ನಾನು ತುಂಬಾ ಸಾರಿ ಮನವಿ ಮಾಡಿದ್ದೇನೆ. ನಗರಸಭೆಯವರು ತಿಳಿಸಿದಾಗ ಮಾಡಿದಾಗ ಮಾತ್ರ ಬಂದು ಮಾಡುತ್ತಾರೆ ಮತ್ತೆ ಅದೇ ಪರಿಸ್ಥಿತಿ ಮುಂದುವರಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲುದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು
“ಹೋಟೆಲಿನವರು ಮಾತ್ರ ಕಸಹಾಕಲ್ಲ. ಅಲ್ಲಿರುವ ಬೇಕರಿಯವರು, ಮೊಟ್ಟೆ ಗಾಡಿ ಅಂಗಡಿಯವರು, ಕಾಂಪ್ಲೆಕ್ಸ್ ಹಿಂದಿನ ಮನೆಯವರು ಎಲ್ಲರೂ ಹಾಕುತ್ತಾರೆ. ಕೂಡಲೇ ನಗರಸಭೆಯವರು ಕ್ರಮ ಕೈಗೊಂಡು ನೈರ್ಮಲ್ಯ ಕಾಪಾಡಲು ಮುಂಜಾಗ್ರತೆ ವಹಿಸಬೇಕು” ಎಂದು ಸ್ಥಳೀಯರಾದ ಹಕೀಬ್ ಆರೋಪಿಸಿದ್ದಾರೆ.





