“ಮೊಗಳ್ಳಿ ಗಣೇಶ ಅವರ ಸಾವಿನ ನಂತರ ಯಾವುದೇ ಸರಕಾರಿ ಸೌಲಭ್ಯಗಳು ಇಲ್ಲದೆ ಹೋದರು. ನನ್ನನ್ನು ಭೇಟಿ ಮಾಡಿದಾಗ ‘ನನ್ನ ಕೃತಿಗಳನ್ನು ಯಾರು ಓದುತ್ತಿಲ್ಲ’ ಎಂಬ ಮಾತುಗಳನ್ನು ಹೇಳಿದ್ದರು. ಸಾಹಿತ್ಯ ವಲಯದಲ್ಲಿ ಪಿ. ಲಂಕೇಶ ನಿಷ್ಠುರವಾಗಿ ಮಾತನಾಡುತ್ತಿದ್ದರು. ಇವರನ್ನು ಬಿಟ್ಟರೆ ಮೊಗಳ್ಳಿ ಗಣೇಶ ಅವರು ನೇರ ಮಾತು, ನಿಷ್ಠುರವಾಗಿ ಮಾತನಾಡುತ್ತಿದ್ದರು “ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಹೇಳಿದರು.
ಗದಗ ಪಟ್ಟಣದ ನಿಸರ್ಗ ಬಡಾವಣೆ ಬಸವ ಸದನದಲ್ಲಿ ಲಡಾಯಿ ಪ್ರಕಾಶನ, ದಲಿತ ಕಲಾ ಮಂಡಳಿ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕತೆಗಾರ, ಚಿಂತಕಮೊಗಳ್ಳಿ ಗಣೇಶ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮೊಗಳ್ಳಿ ಗಣೇಶ್ ಅವರ ಕತೆಗಳನ್ನು ಹಿರಿಯ ತಲೆಮಾರು, ಕಿರಿಯ ತಲೆಮಾರು ಸ್ವಲ್ಪ ಸ್ವಲ್ಪ ಓದಿದ್ದೀವಿ ಎಂದು ಹೇಳುವರು. ಅವರು ಏಳು ಕಥಾ ಸಂಕಲನ, ಕಾವ್ಯ, ವಿಮರ್ಶೆ ಎಷ್ಟೆಲ್ಲ ಬರೆದರೂ ಸಂಪೂರ್ಣವಾಗಿ ಓದಲಿಕ್ಕೆ ಆಗಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಮೊಗಳ್ಳಿ ಗಣೇಶ ಅವರ ತಕರಾರು ಇರುವುದು ಸಾಹಿತಿಗಳೊಂದಿಗೆ ಅಷ್ಟೇ ಇರಲಿಲ್ಲ. ನನ್ನ ಸಾಹಿತ್ಯ ಓದದ ಜನಸಾಮಾನ್ಯರು, ನನ್ನ ಬಗ್ಗೆ ಪ್ರೀತಿ ಇಲ್ಲದೆ ಇರುವುದು, ನನ್ನ ಸಾಹಿತ್ಯದ ಕುರಿತು ಚರ್ಚೆ ನಡೆಸದೆ ಇರುವುದರಿಂದ ಅವರು ಈ ತಲೆಮಾರಿನೊಂದಿಗೆ ಅಡ್ಡಗೋಡೆಯನ್ನು ನಿರ್ಮಿಸಿಕೊಂಡಿದ್ದರು” ಎಂದು ಅಭಿಪ್ರಾಯ ಪಟ್ಟರು.
“ಮೊಗಳ್ಳಿ ಗಣೇಶ್ ಅವರ ನಿಷ್ಠುರತೆ, ಬಿಡೆಯಿಲ್ಲದ ನೇರ ಮಾತು. ಅವರ ವಿಮರ್ಶೆ ಪರಿಭಾಷೆಯನ್ನು ನಾವು ಕಲಿಯಬೇಕು. ಅವರ ತಕರಾರು ಸಾಹಿತ್ಯದ ಜೊತೆಗೆನೇ ತಕರಾರಿನ ವೈಚಾರಿಕತೆ ಹಿನ್ನಲೆಯಲ್ಲಿಯೇ ಚರ್ಚಿಸಬೇಕು” ಎಂದು ಹೇಳಿದರು.
ಹರಿನಾಥ ಬಾಬು ಅವರು ಪ್ರಸ್ತಾವಿಕವಾಗಿ ಮಾತನಾಡಿದ ಅವರು “ಮೊಗಳ್ಳಿ ಗಣೇಶ ಒಬ್ಬ ಸಾಹಿತಿ, ಚಿಂತಕ, ಪ್ರಾಧ್ಯಾಪಕರಾಗಿ ಏನು ದಕ್ಕಬೇಕಿತ್ತೋ ಅದು ದಕ್ಕಿಲ್ಲ. ಮೊಗಳ್ಳಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ವಿಚಾರಗಳನ್ನು, ತಕರಾರುಗಳನ್ನು ಚರ್ಚಿಸಲು ಇದು ಒಂದು ವೇದಿಕೆಯಾಗಿದೆ. ಬದುಕಿನ ಆಶಯಗಳನ್ನು ಇಟ್ಟುಕೊಂಡು ಮುಖಾಮುಖಿ ಆಗುವ ಪ್ರಯತ್ನ ಮಾಡೋಣ” ಎಂದು ಹರಿನಾಥ ಬಾಬುಅವರು ಹೇಳಿದರು.

“ಮೊಗಳ್ಳಿಯವರ ಅಕಾಲಿಕ ಮರಣ ಶೂನ್ಯವನ್ನು ಉಂಟು ಮಾಡಿದೆ. ಆ ಶೂನ್ಯವನ್ನು ತುಂಬಿಕೊಳ್ಳವುದಕ್ಕೆ ಈ ನುಡಿ ನಮನ ಆಗಿದೆ. ಹಂಪಿ ಪರಿಸರ ಬೌದ್ಧಿಕ ದಾರಿ ದೀಪ ಆದರೆ, ಅದರ ಜೊತೆಗೆ ಈ ನಾಡಿನ ದಲಿತ ಶಕ್ತಿಯಾಗಿ ನೋಡಿದರೆ ಸರಿಯಾಗಬಹುದೇನೋ… ” ಎಂದರು.
“ಅವರು ದಲಿತರಾದ ಕಾರಣಕ್ಕೆ ಕಡಗಣನೆ ಆಗಿರಬಹುದು. ಅವರ ಒಡನಾಡಿಯಾಗಿ, ಅವರ ಕತೆ, ಬರಹದಲ್ಲಿ, ಕಹಿ ಸತ್ಯಗಳನ್ನು ಹೇಳಿದರೂ, ಅವರ ನೇರ ನುಡಿ ಹೀಗೆ ಮಾಡಿರಬಹುದು ಎಂಬ ಸಂದೇಹಗಳು ಹುಟ್ಟಿಕೊಳ್ಳುತ್ತವೆ” ಎಂದರು.
“ಮೊಗಳ್ಳಿಯವರು ಆತ್ಮಕತೆಯಲ್ಲಿ ‘ನಾನು ಏರಿದ ಎತ್ತರಕ್ಕೆ, ನನ್ನ ವಿಮರ್ಶೆ, ಈ ನಾಡಿನ ಜನ ಗುರುತಿಸಲಿಲ್ಲ ಎಂಬ ಅಸಮಾಧಾನ ಅವರಲ್ಲಿ ಇತ್ತು’ ಎಂಬುದನ್ನು ಹಂಚಿಕೊಂಡಿದ್ದಾರೆ” ಎಂದು ನೆನಪಿಸಿದರು.
ಸತೀಶ ಪಾಸಿ ಅವರು ಮಾತನಾಡಿ, “ಅವರು ರಚಿಸಿದ ಸಾಹಿತ್ಯ, ಜಾನಪದ, ವಿಮರ್ಶೆ ಕುರಿತು ಚರ್ಚೆ ನಡೆಸಿದರು. ಮೊಗಳ್ಳಿ ಗಣೇಶ್ ಅವರು ದೇವನೂರು ಮಹದೇವ ಅವರ ದೇಶೀ ಭಾಷೆಯಲ್ಲಿಯೇ ಕತೆಗಳನ್ನು ರಚಿಸಿದರು. ನಂತರ ಇತ್ತೀಚೆಗೆ ಕಾವ್ಯ ರಚಿಸಲು ಆರಂಭಿಸಿದ್ದರು. ಗಟ್ಟಿ ದ್ವನಿ ಇದ್ದುದ್ದನ್ನು ಇದ್ದ ಹಾಗೆ ನೇರ ಮಾತಿನಲ್ಲಿ ಹೇಳುತ್ತಿದ್ದರು. ಪ್ರಶಸ್ತಿ, ಕೇಂದ್ರ ಸಾಹಿತ್ಯ ಪ್ರಶಸ್ತಿಗೆ ಬಕೆಟ್ ಸಂಸ್ಕೃತಿ ಅವರಲ್ಲಿ ಇರಲಿಲ್ಲ.
ಸಂತೋಷ ಅಂಗಡಿ ಅವರು “ಬುಗುರಿ” ಓದಿದ ಅನುಭವ ಹಚ್ಚಿಕೊಂಡರು. ಡಾ. ಅಂದಯ್ಯ ಅರವಟಗಿಮಠ, ಬಸವ ಅನುಯಾಯಿ ಅಶೋಕ ಬರಗುಂಡಿ ಅವರು ಮಾತನಾಡಿದರು.
ಶರೀಫ ಬಿಳಿಯಲಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಆರಂಭಿಸಿದರು. ನುಡಿನಮನ ಕಾರ್ಯಕ್ರಮದಲ್ಲಿ ಎಸ್ ಏನ್ ವೆಂಕಟಾಪುರ, ಡಾ ಜಿ. ಬಿ ಪಾಟೀಲ, ಬಿ ಎ ಹಿರೇಮಠ್, ರಾಮಚಂದ್ರ ಹಂಸನೂರ, ಮುತ್ತು ಬಿಳಿಯಲಿ, ಮಲ್ಲೇಶ ಹೊಸಮನಿ ಪರಶು ಕಾಳೆ, ಸೋಮಶೇಖರ ಕನಕಾಚಲ ಇನ್ನೂ ಅನೇಕರು ಉಪಸ್ಥಿತರಿದ್ದರು.





