ಚಿಂತಾಮಣಿ:ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಬಡಿದಾಟ ನಡೆದು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಾಜಿದುರ್ಗ ಹೋಬಳಿಯ ಮಹಮ್ಮದ್ ಪುರ ಗ್ರಾಮದಲ್ಲಿ ನಡೆದಿದೆ.
ಸದರಿ ಗ್ರಾಮದ ಮಹಾದೇವಮ್ಮ ಕೋಂ ವೆಂಕಟರಾಯಪ್ಪ ಸರ್ಕಾರದಿಂದ ಮನೆ ಮಂಜೂರಾಗಿದ್ದು,ಆ ಜಾಗದಲ್ಲಿ ಪಾಯ ಹಾಕಿ ಮನೆ ಕಟ್ಟುತ್ತಿರುವಾಗ ಜಾಗದ ವಿಚಾರವಾಗಿ ಸದರಿ ಗ್ರಾಮದ ನಾರಾಯಣಸ್ವಾಮಿ ರಮೇಶ್ ನರಸಿಂಹ ಮಹೇಶ್ಇವರುಗಳು ಗುಂಪು ಕಟ್ಟಿಕೊಂಡು ಬಂದು ಗರ್ಭಿಣಿ ಮಹಿಳೆಯಾದ ಭಾಗ್ಯಲಕ್ಷ್ಮಿ ಕೋಂ ಗಂಗಾಧರ (25 ವರ್ಷ)ಅಂಬರೀಶ್ ಬಿನ್ ವೆಂಕಟರವಣಪ್ಪ(23 ವರ್ಷ) ಗಿರಿಧರ್ ಬಿನ್ ನರಸಿಂಹ ಸೇರಿದಂತೆ ಸುಮಾರು ಜನರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ..? 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಪ್ರಾಂಶುಪಾಲರು ಅಮಾನತು
ಹಲ್ಲೆಗೆ ಒಳಗಾದ ವ್ಯಕ್ತಿಗಳು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮಾಂತರ ಠಾಣೆಯ ಪೊಲೀಸರು ಎನ್ ಸಿ ಆರ್ ದಾಖಲಿಸಿಕೊಂಡಿದ್ದಾರೆ





