ಮುಳಬಾಗಿಲು : ನಗರದ ಹೊರವಲಯದಲ್ಲಿರುವ ಬಾಲಾಜಿ ಭವನದ ಪಕ್ಕದ ಮೈದಾನದಲ್ಲಿ ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ನಾರಾಯಣ ಹಾಗೂ ಕೋಲಾರ ಶಾಸಕ ಕೋತ್ತೂರ್ ಮಂಜುನಾಥ್ ಬೃಹತ್ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಲಾರ ಶಾಸಕ ಕೋತ್ತೂರ್ ಮಂಜುನಾಥ್ ನವರು 2023 ರ ಚುನಾವಣೆಯಲ್ಲಿ ಸೋತರು ಸಹ ಆದಿನಾರಾಯಣ ನವರು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿ ಸೇವೆ ಮಾಡಿಕೊಂಡು ಹೋಗುತ್ತಾರೆ ನಿಮ್ಮೆಲ್ಲರ ಬೆಂಬಲ ಆದಿ ನಾರಾಯಣ ರವರಿಗೆ ನೀಡಬೇಕು. ಮುಳಬಾಗಿಲು ಜನರು ನನಗೆ ಮೊದಲು ಆಶೀರ್ವಾದ ಮಾಡಿದ್ದಾರೆ ಅದೇ ರೀತಿ ಆದಿ ನಾರಾಯಣ ರವರಿಗೂ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡ್ತಾರೆ ಅನ್ನುವ ನಂಬಿಕೆ ಇದೆ.
ಇವತ್ತು 25 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಹೆಲ್ಮೆಟ್ ನಿಡುತ್ತಿದ್ದು ಒಂದು ಒಳ್ಳೆಯ ಕಾರ್ಯಕ್ರಮ ಮಾಡಿದ್ದಾರೆ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಎಲ್ಲರೂ ಹೆಲ್ಮೆಟ್ ಧರಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದ್ದು ಎಲ್ಲರೂ ಸಹ ಆರೋಗ್ಯವಾಗಿ ಇರಬೇಕು ಎಂದು ಹೆಲ್ಮೆಟ್ ನೀಡುತ್ತಿದ್ದೇವೆ 20 ಸಾವಿರ ಹೆಲ್ಮೆಟ್ ಸಾರ್ವಜನಿಕರಿಗೆ 5 ಸಾವಿರ ಹೆಲ್ಮೆಟ್ ಸರ್ಕಾರಿ ನೌಕರರಿಗೆ ನೀಡುತ್ತಿದ್ದೇವೆ ಇದರ ಜೊತೆಗೆ ಪ್ರತಿವರ್ಷ ಧೀರ್ಘ ಸುಮಂಗಲಿ ಭವ ಹೆಸರಿನಲ್ಲಿ ಮುಳಬಾಗಿಲು ತಾಲೂಕಿನ ಎಲ್ಲಾ ಮಹಿಳೆಯರಿಗೆ ಅರಿಶಿನ ಕುಂಕುಮ ಸೀರೆ ವಿತರಣೆಯನ್ನು ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಹೆಚ್ಚು ಸಮಾಜಸೇವೆ ಮಾಡುತ್ತೇನೆ ಎಂದು ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ನಾರಾಯಣ ತಿಳಿಸಿದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ,
ಕೆ.ಪಿ.ಸಿ.ಸಿ.ಸದಸ್ಯ ರಾಮಲಿಂಗಾರೆಡ್ಡಿ, ದರ್ಖಾಸ್ ಸಮಿತಿ ಸದಸ್ಯ ಗುಜ್ಜನಹಳ್ಳಿ ಮಂಜುನಾಥ್, ತಾಲೂಕು ಗ್ಯಾರೆಂಟಿ ಅಧ್ಯಕ್ಷ ಉಮಾಶಂಕರ್ , ಜಬೀವುಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಹುಸೇನ್ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.





