ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ

Date:

ಮದುವೆ ಎಂದರೆ ಹಲವರ ಜೀವನದಲ್ಲಿ ಒಂದು ವಿಶೇಷತೆ.‌ ಮದುವೆಗಳು ವಿಚಿತ್ರ, ವಿಶೇಷ ಎನಿಸುವಂತೆ ನಡೆದಿವೆ. ವಿಮಾನದಲ್ಲಿ, ನಗರದ ವೃತ್ತಗಳಲ್ಲಿ ನಿಂತು, ಐಷಾರಾಮಿ ಹೋಟೆಲ್‌ಗಳಲ್ಲಿ, ದೂರದ ದೇವಸ್ಥಾನಗಳಲ್ಲಿ, ಅಷ್ಟೇ ಏಕೆ ಸ್ಮಶಾನಗಳಲ್ಲಿಯೂ ಮದುವೆಯಾದವರಿದ್ದಾರೆ. ಕೆಲವರಿಗೆ, ಕೋರ್ಟ್, ವಿಧಾನಸೌಧ, ತಾಜ್ ಮಹಲ್, ಅರಮನೆಗಳಲ್ಲಿ ಮದುವೆ ಆಗುವ ಕನಸಿರುತ್ತದೆ.

ಮಾದರಿಯೆನಿಸುವ ಕುವೆಂಪು ತೋರಿಸಿದ ಸರಳ ಮಂತ್ರ ಮಾಂಗಲ್ಯದ ರೀತಿಯಲ್ಲಿ ಮದುವೆಗಳೂ ನಡೆದಿವೆ. ಆದರೆ ಇಲ್ಲೊಂದು ಜೋಡಿ ವಿಶೇಷವಾಗಿ ಮಾದರಿ ಎನಿಸುವಂತೆ ಸಂವಿಧಾನದ ಸಾಕ್ಷಿಯಾಗಿ ಸರಳವಾಗಿ ವಿವಾಹ ನೆರವೇರಿಸಿಕೊಂಡಿರುವುದು, ಬುದ್ಧ, ಬಸವ, ಅಂಬೇಡ್ಕರ್‌ ಅವರ ಆಶಯಗಳ ಪಾಲನೆಗೆ ಕಂಕಣಬದ್ದರಾಗಿರುವುದು ಇಂದಿನ ಯುವಜನಾಂಗಕ್ಕೆ, ಸಮಾಜಕ್ಕೆ ಮಾದರಿ ನಡೆಯಾಗಿದೆ.‌ ಇಂಥದ್ದೊಂದು ಮಾದರಿ ಮದುವೆ ಚಿತ್ರದುರ್ಗದಲ್ಲಿ ನಡೆದಿದೆ.

1001986604

ಚಿತ್ರದುರ್ಗ ಜಿಲ್ಲೆಯ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವ ರವೀಶ್ ಅವರ ಪುತ್ರಿ ಮೇಘನಾ, ಮಂಡ್ಯ ಜಿಲ್ಲೆಯ ವರ ರಾಕೇಶ್ ಎಂಬುವವರು ವಿನೂತನ ರೀತಿಯಲ್ಲಿ ಸಂವಿಧಾನದ ಸಾಕ್ಷಿ, ಸಾಂಗತ್ಯದ ವಿವಾಹವಾದ ನವ ಜೋಡಿಗಳು.‌ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಕೂಡ ಸಂವಿಧಾನ ಪೀಠಿಕೆಯ ರೀತಿಯಲ್ಲಿ ಮುದ್ರಿಸಿರುವುದು ಕೂಡ ವಿಶೇಷ.‌ ಆಡಂಬರದ ಅದ್ದೂರಿಯ ವಿವಾಹಗಳಿಗೆ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡುವ ಈ ಕಾಲಘಟ್ಟದಲ್ಲಿ ಇದೊಂದು ಸಮಾಜಸ್ನೇಹಿ, ಪರಿಸರ ಸ್ನೇಹಿ, ಆರ್ಥಿಕಸ್ನೇಹಿ ವಿವಾಹವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001986621

ಸಣ್ಣ ಸಮಾರಂಭವೊಂದರ ವೇದಿಕೆಯ ರೀತಿ ವಿವಾಹದ ತಯಾರಿ ಮಾಡಿ, ಸರಳವಾಗಿ ಹಾರ ಬದಲಿಸಿಕೊಂಡ ನವಜೋಡಿಗಳು ಸಂವಿಧಾನ ಪೀಠಿಕೆಯಂತೆ ತಾವೇ ಒಪ್ಪಿ ಬರೆದುಕೊಂಡಿದ್ದ ಬಾಳ ಸಂವಿಧಾನವನ್ನು ಪರಸ್ಪರ ಬೋಧಿಸಿ, ತಮಗೆ ತಾವೇ ಅರ್ಪಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ಪೀಠಿಕೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಜೀವನ ಶೈಲಿ, ತಾತ್ವಿಕತೆ ಪಾಲಿಸುತ್ತೇವೆಂದು ಪ್ರಮಾಣೀಕರಿಸಿದ್ದು ಹೊಸದಾಗಿತ್ತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.

“ಮೇಘನಾ, ರಾಕೇಶ್ ಆದ ನಾವು ಸಂಗಾತಿಗಳಾಗಲು ಮನಸಾ ಒಪ್ಪಿ ಬಾಳನ್ನು ಮತ್ತಷ್ಟು ಸದೃಢ, ಸ್ವಾವಲಂಬಿ, ಸಾರ್ಥಕ ಮತ್ತು ಸಂಘ ಜೀವನ ನಡೆಸಲು ಸುಖ-ದುಃಖ, ನೋವು-ನಲಿವು, ಬಡತನ-ಸಿರಿತನದಂತಹ ಎಲ್ಲಾ ಕಾಲದಲ್ಲಿಯೂ ಬುದ್ಧ ಬಸವ ಅಂಬೇಡ್ಕರ್ ಅವರ ತಾತ್ವಿಕತೆ ಮತ್ತು ಜೀವನ‌ ಶೈಲಿಯನ್ನು ಅನುಸರಣೆ ಮಾಡುತ್ತ, ಪರಸ್ಪರ ವೈಜ್ಞಾನಿಕವಾಗಿ ಚಿಂತಿಸಲು ಹಾಗೂ ತಾರ್ಕಿಕವಾಗಿ ಯೋಚಿಸಲು‌ ಪ್ರೋತ್ಸಾಹಿಸುತ್ತೇವೆ‌. ಇಬ್ಬರ ಕುಟುಂಬ ವರ್ಗ, ಸ್ನೇಹ ಬಳಗ, ಸಮುದಾಯ ಮತ್ತು ಸಮಸ್ತ ದುಡಿಯುವ ವರ್ಗದ ಹಿತೈಷಿಗಳಿಗೆ, ಅವರ ಕರುಣೆ, ಪ್ರೀತಿಯನ್ನು ಸಮಾನವಾಗಿ ಹಂಚುತ್ತ, ಅವರಿಗಾಗಿ ನಾವು, ನಮಗಾಗಿ ಅವರು ಎನ್ನುವ ಹಾಗೇ ಜೀವಿಸಲು ಮುಂದಾಗಿ, ಯಾವುದೇ ಘಳಿಗೆಯಲ್ಲಿ ಅಪನಂಬಿಕೆ, ಅನುಮಾನ, ಅತಿರೇಕಕ್ಕೆ ಅಸ್ಪದ ಕೊಡದೇ ಮೈತ್ರಿಭಾವದಿಂದ ಎಲ್ಲವನ್ನೂ ಸರಿದೂಗಿಸಿಕೊಳ್ಳುತ್ತ, ಪರಸ್ಪರರ ಅಭಿಪ್ರಾಯವನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಸಮಾನತೆಯ ಕುಟುಂಬವನ್ನಾಗಿಸಿಕೊಳ್ಳಲು ಸಂಕಲ್ಪಮಾಡಿ, 2025ನೇ ವರ್ಷ ಮೇ ತಿಂಗಳ 11ನೇ ತಾರೀಖಿನಂದು ಈ ‘ಬಾಳ ಸಂವಿಧಾನ’ವನ್ನು ನಮಗೆ‌ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಬಾಳ ಶಾಸನವಾಗಿ ಜಾರಿಗೊಳಿಸಿಕೊಳ್ಳುತ್ತ, ಜೀವನದುದ್ದಕ್ಕೂ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರಿಂದ ರಚಿತವಾದ ಭಾರತ ಸಂವಿಧಾನದ ಆಶಯದಂತೆ‌ ಬಾಳ್ವೆ ಮಾಡಲು ಪಣ ತೊಟ್ಟಿದ್ದೇವೆ” ಎಂದು ಬಾಳ ಸಂವಿಧಾನದ ಶಾಸನವನ್ನು ತಮಗೆ ತಾವೇ ಅರ್ಪಿಸಿಕೊಂಡರು.‌

1001986620

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ನವವಧು ಮೇಘನಾ, “ಸಮಾಜವು ಹಲವಾರು ರೀತಿಯಲ್ಲಿ ಹೆಣ್ಣಿನ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತದೆ. ಅದರಲ್ಲಿ ಮದುವೆಯೂ ಕೂಡ ಒಂದು ರೀತಿಯ ಹೆಣ್ಣಿನ ಆಶಯಗಳು, ಕನಸುಗಳು ಮತ್ತು ಸ್ವಾತಂತ್ರವನ್ನು ಹಿಡಿದಿಡುವ ಪ್ರಯತ್ನವಾಗಿದೆ. ಮದುವೆಯ ಆಚರಣೆಗಳಲ್ಲಂತೂ ತಾಳಿ, ಕಾಲುಂಗರಗಳಂತಹ ಹಲವಾರು ಗಂಡಾಳಿಕೆಯ ಸೂಚ್ಯ ವಿಷಯಗಳನ್ನು ಈ ಮದುವೆಗಳು ಒಳಗೊಂಡಿವೆ. ಇಂಥಹ ಆಚರಣೆಗಳು ಹೆಣ್ಣನ್ನು ಗಂಡಿನ ಆಸ್ತಿಯೆಂಬಂತೆ ಪರಿಗಣಿಸುವ ಊಳಿಗಮಾನ್ಯ ಪದ್ಧತಿಯಾಗಿದೆ. ಹೊಸ ಪೀಳಿಗೆಯು ಇಂತಹ ವಿಚಾರಗಳನ್ನು ಪ್ರಶ್ನಿಸಬೇಕಾಗಿದೆ. ಇಂಥಹ ಆಚರಣೆಗಳ ಉಗಮದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ. ಅವರು ಸ್ತ್ರೀವಾದಿ ಕೂಡ ಆಗಿದ್ದರು. ಅವರ ಆಶಯಗಳಲ್ಲಿ ಹೆಣ್ಣಿನ ಸ್ವಾತಂತ್ರ್ಯ ಬಹಳ ಮೂಲಭೂತವಾಗಿತ್ತು. ಹಾಗಾಗಿ ಬಾಬಾಸಾಹೇಬರ ಆಲೋಚನೆಗಳನ್ನು ಗೌರವಿಸುತ್ತ ಈ ಸಾಂಗತ್ಯವನ್ನು ನಾವು ಸ್ವೀಕರಿಸಿದ್ದೇವೆ” ಎಂದು ಪ್ರತಿಪಾದಿಸಿದರು.

1001986619 1

ಹೊಸ ಬಾಳಿಗೆ ಹೆಜ್ಜೆಯಿಟ್ಟ ವರ ರಾಕೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೈಸೂರಿನ ‘ಮಾನವ ಮಂಟಪ’ದ ಮುಖಾಂತರ ನನ್ನ ಗೆಳೆಯ, ಗೆಳತಿಯರ ಸಾಕಷ್ಟು ಅಂತರ್ಜಾತಿ ವಿವಾಹಗಳನ್ನು ಆಯೋಜಿಸಿದ್ದ ನನಗೂ ಕೂಡ ಸರಳ ವಿವಾಹವಾಗುವ ಅಭಿಲಾಷೆಯಿತ್ತು. ಜಾತಿ ವ್ಯವಸ್ಥೆಯ ಬೇರನ್ನು ಅಲುಗಾಡಿಸಲು ಅಂತರ್ಜಾತಿ ಸಾಂಗತ್ಯಗಳು ಮದ್ದಾಗುತ್ತವೆ ಎಂಬುದು ನಮ್ಮ ನಂಬಿಕೆ. ಪುರೋಹಿತ ಶಾಹಿ ಮೌಢ್ಯಾಚರಣೆಗಳು, ಮುಹೂರ್ತ, ಕಾಲ, ಘಳಿಗೆಗಳೆಂದು ತುಂಬಿರುವ ಈ ‘ಮದುವೆ’ ಎಂಬ ಕಟ್ಟುಪಾಡುಗಳನ್ನು ಮೀರುವುದು, ವೈಜ್ಞಾನಿಕವಾಗಿ ಚಿಂತಿಸುವುದು ಹಾಗೂ ಮದುವೆಯ ಹೆಸರಿನಲ್ಲಿ‌ ದುಂದು ವೆಚ್ಚವನ್ನು ತಡೆಯುವ ಈ ರೀತಿಯ ‘ಸಾಂಗತ್ಯ’ಗಳು ಹೊಸ ಸಂಗಾತಿಗಳಿಗೆ ಮಾದರಿಯಾಗಬೇಕಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರೀತಿಸಿ ಜಾತಿ ಕಾರಣಕ್ಕೆ ಮದುವೆಗೆ ನಿರಾಕರಣೆ ಆರೋಪ, ಯುವತಿ ಆತ್ಮಹತ್ಯೆ.

ಒಟ್ಟಿನಲ್ಲಿ ಆಡಂಬರದ ಜೀವನಕ್ಕೆ ಮಾರುಹೋಗುತ್ತಿರುವ ಇಂದಿನ ಯುವಜನಾಂಗದ ನಡುವಿನಲ್ಲಿ ಸಂವಿಧಾನ ಆಶಯಗಳಿಗೆ ತಕ್ಕಂತೆ, ಬುದ್ಧ ಬಸವ ಅಂಬೇಡ್ಕರ್ ಅವರ ಆಶಯಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಯುವ ಜೋಡಿಯೊಂದು ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವುದು ಸಮಾಜದ ಹಿತದೃಷ್ಟಿಯಿಂದ ಒಂದು ಉತ್ತಮ ಹೆಜ್ಜೆ. ಇದೇ ರೀತಿಯ ಹತ್ತು ಹಲವು ಸಾವಿರಾರು ವಿವಾಹಗಳು ನೆರವೇರಲಿ. ಸಾಮಾಜಿಕ ಸಮಾನತೆ, ಕೌಟುಂಬಿಕ ಭದ್ರತೆಗೆ ಮಾದರಿಯಾಗಲಿ ಹಾಗೂ ಇಂಥದೊಂದು ಮಾದರಿ ವಿವಾಹಕ್ಕೆ ಸಾಕ್ಷಿಯಾದ ರಾಕೇಶ್-ಮೇಘನಾ ಜೋಡಿ ನೂರಾರು ಕಾಲ ಸಮಾನತೆ, ಸಹಬಾಳ್ವೆಯ ಜೀವನದೊಂದಿಗೆ ಸಮಾಜಕ್ಕೆ ಮಾದರಿಯಾಗಲಿ ಎನ್ನುವುದು ಎಲ್ಲರ ಆಶಯ.

WhatsApp Image 2025 11 17 at 5.21.38 PM
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...