ಮಂಗಳೂರು ಜಿಲ್ಲೆಯ ಪೆರಾಜೆ ಸಮೀಪದ ಬಿಳಿಯಾರು ಕೃಷಿಕರ ತೋಟಗಳಿಗೆ ಹಾಗೂ ಕಡಬ ತಾಲ್ಲೂಕಿನ ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕೃಷಿ ಜಮೀನು ಮತ್ತು ತೋಟಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಪಡಿಸಿದೆ.
ಇದನ್ನೂ ಓದಿ: ದ.ಕ. | ಗುಣಮಟ್ಟದ ಶಿಕ್ಷಣಕ್ಕಾಗಿ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ: ಸಚಿವ ದಿನೇಶ್ ಗುಂಡೂರಾವ್
ಪಿ.ಬಿ.ದಿವಾಕರ ರೈ ಮತ್ತು ಸಹೋದರರ ಕೃಷಿ ಭೂಮಿಗೆ ಕಾಡಾನೆ ಹಿಂಡು ನುಗ್ಗಿ ತೆಂಗು, ಬಾಳೆ, ಅಡಿಕೆ ಮರ, ಗದ್ದೆಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ. 20 ರಿಂದ 30ಕ್ಕೂ ಹೆಚ್ಚು ಫಲಕ್ಕೆ ಬಂದಿದ್ದ ತೆಂಗಿನ ಮರ ಸೇರಿದಂತೆ ತೆಂಗಿನ ಗಿಡಗಳು, ಬಾಳೆ ಗಿಡ, ಅಡಿಕೆ ಗಿಡಗಳನ್ನು ಹಾಳು ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ನೇಜಿ ನೆಟ್ಟ ಗದ್ದೆಯಲ್ಲಿ ಕಾಡಾನೆಗಳು ಓಡಾಟ ನಡೆಸಿ ಕೃಷಿಯನ್ನೂ ನಾಶ ಮಾಡಿದವು.
ಇದನ್ನೂ ಓದಿ: ಕುಪ್ಪೆಪದವಿನಲ್ಲೊಂದು ಸೌಹಾರ್ದತೆಯ ಸಂಕೇತ; ಧರ್ಮ ಬದಿಗಿಟ್ಟು ಸೋದರತೆ ಸಾರಿದ ಮಸೀದಿ
ಕಡಬ ತಾಲ್ಲೂಕಿನ ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಆನೆಗಳ ಹಾವಳಿ ಹೆಚ್ಚಾಗಿದ್ದು, ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಆನೆಗಳು ಹಲವು ದಿನಗಳಿಂದ ಪಟ್ಟೂರ್ ರಕ್ಷಿತಾರಣ್ಯದಲ್ಲಿ ಇದ್ದು, ರಾತ್ರಿ ಹೊತ್ತು ಬಲ್ಯ ಗ್ರಾಮದಲ್ಲಿ ಬಂದು ಕೃಷಿ ಹಾನಿ ಮಾಡುತ್ತಿವೆ. ಇತ್ತ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.





