ಕರಾವಳಿಯಲ್ಲಿ ಕ್ರಿಸ್ಮಸ್ ಸಡಗರ; ಸರ್ವಧರ್ಮ ಸಮಾನತೆಯ ಹಬ್ಬಕ್ಕೆ ಸೌಹಾರ್ದತೆಯ ಕೊರತೆ

Date:

ಮಂಗಳೂರು: ಕ್ರಿಸ್‌ಮಸ್ ಹಬ್ಬದ ಸಡಗರ ಕರಾವಳಿಯಲ್ಲಿ ಚರ್ಚುಗಳಲ್ಲಿನ ಅಲಂಕಾರ, ಗೋದಲಿಗಳ ನಿರ್ಮಾಣ, ಶುಭಾಶಯ ಹಂಚುವ ಮೂಲಕ ಮನೆಮಾಡಿದೆ. ಸರ್ವಧರ್ಮಗಳ ಹಬ್ಬವಾಗಿದ್ದ ಕ್ರಿಸ್‌ಮಸ್‌ಗೆ ಈ ಬಾರಿಯೂ ಹಿಂದೂ ಸಂಘಟನೆಗಳು ಅಘೋಷಿತ ಬಹಿಷ್ಕಾರ ಹಾಕಿದಂತೆ ಭಾಸವಾಗುತ್ತಿದೆ.

ದಶಕಗಳ ಹಿಂದೆ ಕ್ರಿಸ್ಮಸ್ ಹಬ್ಬಕ್ಕೆ ನಗರವೇ ಅಲಂಕಾರಗೊಳ್ಳುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ ಕ್ರಿಶ್ಚಿಯನ್ ಸಂಸ್ಥೆಗಳು, ಮನೆ ವಠಾರ, ಅಂಗಡಿಗಳು ಮಾತ್ರ ಕಂಗೊಳಿಸುತ್ತಿವೆ. ಸೌಹಾರ್ದತೆಯಿಂದ ಆಚರಿಸಲಾಗುತ್ತಿದ್ದ ಕೆಲವೊಂದು ಕಾರ್ಯಕ್ರಮಗಳೂ ಆಯೋಜನೆಗೊಂಡಿಲ್ಲ. ಕ್ರಿಸ್‌ಮಸ್ ಮತ್ತು ನೂತನ ಹಬ್ಬದ ಪ್ರಯುಕ್ತ ಕ್ರೀಡಾಕೂಟಗಳು, ರಕ್ತದಾನ ಶಿಬಿರ, ಮನೋರಂಜನಾ ಕಾರ್ಯಕ್ರಮಗಳು ಯಾವುದೂ ಹಿಂದೂ ಸಂಘಟನೆ ವತಿಯಿಂದ ಆಯೋಜನೆಗೊಂಡಿಲ್ಲ.

ಇತ್ತೀಚಿನ ದಶಕಗಳಲ್ಲಿ ಹಬ್ಬಾಚರಣೆಯಲ್ಲಿಯೂ ದೊಡ್ಡದಾದ ಕಂದರ ಏರ್ಪಟ್ಟಿದೆ’ ಎನ್ನುತ್ತಾರೆ ನಿವೃತ್ತ ಪ್ರೊಫೆಸರ್ ರೊನಾಲ್ಡ್ ಡಿ’ಕೋಸ್ತ. ಹಿಂದೂ ಸಂಘಟನೆಗಳು ನಡೆಸಿದ ಚರ್ಚ್ ದಾಳಿಯ ಬಳಿಕ ಖಂಡಿತವಾಗಿಯೂ ಸೌಹಾರ್ದತೆಗೆ ಧಕ್ಕೆ ಆಗಿದೆ. ಅದೊಂದು ನಿರೀಕ್ಷಿಸಲಾಗದ ಘಟನೆಯಾಗಿತ್ತು, ಎನ್ನುತ್ತಾರವರು.

“ನನ್ನ ನಿವೃತ್ತಿಯ ಬಳಿಕವೂ ಹಲವು ಮಂದಿ ವಿದ್ಯಾರ್ಥಿಗಳು ಶುಭ ಹಾರೈಸುತ್ತಿದ್ದರು. ಆದರೆ ಅದೀಗ ಕಡಿಮೆಯಾಗಿದೆ. ನಮ್ಮಲ್ಲಿ ಗುರುಗಳಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಅದೂ ಕೂಡಾ ಇಲ್ಲವಾಗಿದೆ. ಏಕೆಂದರೆ ನಮಗೀಗ ಸೌಹಾರ್ದತೆಗಿಂತ ರಾಜಕೀಯ ಮುಖ್ಯವಾಗಿದೆ”ಎನ್ನುತ್ತಾರೆ.

ಜೆಪ್ಪು ಸೆಮಿನರಿ ಆಡಳಿತ ಮಂಡಳಿ ಸದಸ್ಯ ಹೆರಾಲ್ಡ್ ಡಿʼಮೆಲ್ಲೋ ಪ್ರಕಾರ, “ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಂಘಟನೆಗಳು ಅಥವಾ ಹಿಂದೂ ಮುಖಂಡರು ಚರ್ಚ್ ಬಳಿ ಬರುವುದೇ ಇಲ್ಲ. ಹಿಂದೆಲ್ಲಾ ಹಬ್ಬದ ದಿನದಂದು ಹಬ್ಬದ ತಿಂಡಿ ಹಂಚುವ ಮತ್ತು ಶುಭಾಶಯ ಕೋರುವ ಕ್ರಮ ಇದ್ದಿತ್ತು. ಗಣೇಶ ಹಬ್ಬ, ಅಷ್ಟಮಿ, ಹೀಗೆ ಆಚರಣೆ ಸಂದರ್ಭ ಕ್ರೈಸ್ತ ಮುಖಂಡರನ್ನು ಅತಿಥಿಯಾಗಿ ಕರೆಯುತ್ತಿದ್ದರು. ಆದರೆ ಈಗ ಅಂತಹಾ ಕ್ರಮವಿಲ್ಲ. ಕ್ರೈಸ್ತರು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಬರುವುದೂ ಕಡಿಮೆ. ಆದರೆ ಕೆಲವೊಂದು ಸ್ವಾಮೀಜಿಗಳು ಕನಿಷ್ಠ ಸೌಜನ್ಯಕ್ಕಾದರೂ ಬರುವುದಿದೆ. ಅದು ಬಿಟ್ಟರೆ ಈಗ ಅಂತಹಾ ಸೌಹಾರ್ದತೆ ಇಲ್ಲ” ಎನ್ನುತ್ತಾರೆ.

“ನಗರದಲ್ಲಿ ಹಿಂದೆ ಕ್ರಿಸ್‌ಮಸ್ ಹಬ್ಬಕ್ಕೆ ರಸ್ತೆ ಬದಿ ಬ್ಯಾನರ್ ಹಾಕುವುದರಲ್ಲಿ, ಅಂಗಡಿಗಳನ್ನು ಅಲಂಕಾರ ಮಾಡುವುದರಲ್ಲಿ ಅವರೇ ಮುಂದಿದ್ದರು. ಆದರೀಗ ಭಾರೀ ನಕಾರಾತ್ಮಕವಾಗಿ ಬದಲಾವಣೆ ಆಗಿದೆ” ಎನ್ನುತ್ತಾರೆ.

ಉರ್ವದ ಹಿರಿಯ ನಾಗರಿಕ, ಅಂಚೆ ಇಲಾಖೆ ನಿವೃತ್ತ ಅಧಿಕಾರಿ, ಮೈಕೆಲ್ ಲೋಬೋ, “ನಮ್ಮ ಬಾಲ್ಯದಲ್ಲಿ ಹಬ್ಬಗಳಿಗೆ ಜಾತಿ ಎನ್ನುವುದು ಇರಲಿಲ್ಲ. ಸಂತೋಷದಿಂದ ಪಾಲುಗೊಳ್ಳುವುದು ಮತ್ತು ಹಬ್ಬದ ತಿಂಡಿ-ಊಟ ಎಲ್ಲಾ ಕಡೆ ಆಗುತ್ತಿತ್ತು. ಕ್ರಿಸ್‌ಮಸ್ ಹಬ್ಬಕ್ಕೆ ಹಿಂದೂ ಧರ್ಮದವರೂ ಚರ್ಚಿಗೆ ಅಥವಾ ಮನೆಗೆ ಬಂದು ಶುಭ ಹಾರೈಸುತ್ತಿದ್ದರು. ಇತ್ತೀಚೆಗೆ ಮೊಬೈಲ್ ಸಂದೇಶದ ವ್ಯವಸ್ಥೆಯಿದ್ದರೂ, ಧರ್ಮ ಅಲ್ಲಿಯೂ ಕೆಲಸ ಮಾಡುತ್ತಿದೆ. ಕರಾವಳಿಯಲ್ಲಿನ ಸೌಹಾರ್ದತೆಗೆ ದಶಕಗಳ ಹಿಂದಿನ ಚರ್ಚ್‌ಗಳ ಮೇಲಿನ ದಾಳಿ ದೊಡ್ಡ ಪರಿಣಾಮ ಬೀರಿದೆ. ಅದು ತೆಳುವಾಗಿಯಾದರೂ ಸ್ವಲ್ಪ ಹೆಚ್ಚಿನ ಮತ್ತು ಗಟ್ಟಿಯಾದ ಬೇಲಿಯನ್ನೇ ನಿರ್ಮಿಸಿದೆ’’ ಎನ್ನುತ್ತಾರೆ.

ಬಿಜೈ ಚರ್ಚ್‌ನ ಮುಖ್ಯ ಗುರುಗಳಾದ ಫಾ. ಜೆ.ಬಿ. ಡಿ’ಸೋಜ, “ನಮಗೆ ಎಲ್ಲಾ ಧರ್ಮೀಯರು ಗೌರವ ಕೊಡುತ್ತಾರೆ. ವಿಶೇಷ ಹಬ್ಬಗಳಲ್ಲಿ ಧಾರ್ಮಿಕ ಮುಖಂಡರಿಗೆ ನಾವು ಶುಭ ಹಾರೈಸುತ್ತೇವೆ. ಅಹಿತವಾದ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಕ್ರಿಸ್ ಮಸ್ ಹಬ್ಬದ ಮುಖ್ಯ ಸಂದೇಶಗಳಲ್ಲಿ ಎಲ್ಲರನ್ನೂ ಪ್ರೀತಿಸು, ಎಲ್ಲರೊಂದಿಗೆ ಸಂತೋಷದಿಂದ ಇರುವುದಾಗಿದೆ” ಎನ್ನುತ್ತಾರೆ.

ಮಂಳೂರು ಧರ್ಮಪ್ರಾಂತ್ಯದ ಬಿಷಪ್ ಫಾ. ಪೀಟರ್ ಪೌಲ್ ಸಲ್ದಾನ್ಹಾ, ತನ್ನ ಕ್ರಿಸ್‌ಮಸ್ ಸಂದೇಶದಲ್ಲಿ, ಪ್ರೀತಿ, ಸಹಬಾಳ್ವೆ, ಸಹೋದರತ್ವ ಮತ್ತು ಸೌಹಾರ್ದತೆಯೇ ನಮ್ಮ ಗುರಿಯಾಗಿರಲಿ ಎಂದಿದ್ದಾರೆ.

ವರದಿ : ರಾಜೇಶ್‌ ಶೆಟ್ಟಿ ಬಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ, ಮಧ್ಯರಾತ್ರಿ ನೋಟಿಸ್ ಜಾರಿ !

ಧರ್ಮಸ್ಥಳ ಸೌಜನ್ಯ ‌ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ...

ಕರಾವಳಿ | LPG ಅಭಾವ; ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ (LPG) ಸರಬರಾಜಿನಲ್ಲಿ...

ಧರ್ಮಸ್ಥಳ ಪೊಲೀಸ್ ಠಾಣೆಗೆ ಆಯೋಗದ ಅಧ್ಯಕ್ಷರ ಭೇಟಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್.ಕೋಸಂಬೆ...

ಮಂಗಳೂರು | ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು...