‘ಭೂ ಹಗರಣಕ್ಕೂ ಸಾವುಗಳಿಗೂ ಸಂಬಂಧ ಇದೆ’- ಎಡಪಂಥೀಯರ ನಿಯೋಗದ ಮುಂದೆ ಧರ್ಮಸ್ಥಳ ಜನರ ಅಹವಾಲು

Date:

ಧರ್ಮಸ್ಥಳದಲ್ಲಿ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಭೂ ಹಗರಣದ ಹಿನ್ನಲೆಯಲ್ಲೂ ವಿಸ್ತರಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಧರ್ಮಸ್ಥಳದ ಸ್ಥಳೀಯ ನಾಯಕರು ಎಡಪಂಥೀಯರ ನಿಯೋಗವನ್ನು ಆಗ್ರಹಿಸಿದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾಗಿರುವ, ಚಿಂತಕ ಕೆ ಪ್ರಕಾಶ್, ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ, ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ಈಶ್ವರಿ ಪದ್ಮುಂಜ ಸೇರಿದಂತೆ ಹಲವು ಸ್ಥಳೀಯ ಎಡಪಂಥೀಯ ಚಿಂತಕ ಹೋರಾಟಗಾರರ ನಿಯೋಗ ಎರಡು ದಿನಗಳ ಕಾಲ ಧರ್ಮಸ್ಥಳ ನಿವಾಸಿಗಳ ಜೊತೆ ಚರ್ಚೆ ನಡೆಸಿತು.

ಪದ್ಮಲತಾ ಅವರ ಸಹೋದರಿಯ ಮನೆಯಲ್ಲಿ ಸಮಾಲೋಚನಾ ಸಭೆ ನಡೆಲಾಯಿತು. 1986ರಲ್ಲಿ ಅಪಹರಣಗೊಂಡು ಕೊಲೆಯಾದ ಪದ್ಮಲತಾ ಅವರ ಸಹೋದರಿ ಇಂದ್ರವತಿಯವರು ಮಾತನಾಡಿ “ಪದ್ಮಲತಾ ಕೊಲೆಗೂ ಭೂ ಮಾಫಿಯಾಗೂ ಸಂಬಂಧ ಇದೆ. ನನ್ನ ತಂದೆ ದೇವಾನಂದ ಅವರು ಕಮ್ಯೂನಿಸ್ಟ್ ಮುಖಂಡರಾಗಿದ್ದರು. 80 ರ ದಶಕದಲ್ಲಿ ಧರ್ಮಸ್ಥಳದಲ್ಲಿ ಮಲೆಕುಡಿಯರ ಹಾಡಿ ಇತ್ತು. ಸುಮಾರು 14 ಮನೆಗಳು ಆ ಮಲೆಕುಡಿಯ ಹಾಡಿಯಲ್ಲಿದ್ದವು. ಮಲೆಕುಡಿಯರನ್ನು ಒಕ್ಕಲೆಬ್ಬಿಸಬೇಕು ಎಂದು ಪ್ರಯತ್ನಗಳು ನಡೆದವು. ಮಲೆಕುಡಿಯರು ಒಪ್ಪದೇ ಇದ್ದಾಗ ಬಲಪ್ರಯೋಗ ಮಾಡಲಾಯಿತು. ಆಗ ಕಮ್ಯೂನಿಸ್ಟ್ ಮುಖಂಡರಾಗಿದ್ದ ದೇವಾನಂದರು ಮಲೆಕುಡಿಯರ ಪರವಾಗಿ ಹೋರಾಟಕ್ಕಿಳಿದು ಮಲೆಕುಡಿಯರ ಭೂಮಿ ಉಳಿಸಿದರು. ತಂದೆಯ ಮೇಲಿನ ಈ ದ್ವೇಷ ಕೂಡಾ ಪದ್ಮಲತಾ ಕೊಲೆಗೆ ಕಾರಣವಾಗಿದೆ. ಹಾಗಾಗಿ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಅಸಹಜ ಸಾವು, ಆತ್ಮಹತ್ಯೆ, ಕೊಲೆಗಳಿಗೂ ಭೂದಾಹಕ್ಕೂ ಸಂಬಂಧವಿದೆಯೇ ಎಂದು ಎಸ್‌ಐಟಿ ಗಮನಿಸಬೇಕು” ಎಂದು ಮನವಿ ಮಾಡಿದರು.

“ಚುನಾವಣೆಯ ಸಂದರ್ಭದಲ್ಲಿ ತಂದೆ ದೇವಾನಂದರ ಮೇಲೆ ಹಗೆತನ ಜಾಸ್ತಿಯಾಯಿತು. ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಚುನಾವಣೆಯೇ ನಡೆದಿರಲಿಲ್ಲ. ತಂದೆ ಸಿಪಿಐಎಂನಲ್ಲಿ ಸ್ಪರ್ಧಿಸಿದ ಬಳಿಕ ಚುನಾವಣೆ ನಡೆಯಿತು. ಒಂದೆಡೆ ಮಲೆಕುಡಿಯರ ಭೂಹೋರಾಟದ ನೇತೃತ್ವ, ಇನ್ನೊಂದೆಡೆ ಪ್ರಜಾಸತ್ತಾತ್ಮಕ ಚುನಾವಣೆ ನಡೆಸಿದ ಕೋಪ ಪದ್ಮಲತಾ ಅಪಹರಣಕ್ಕೆ ಕಾರಣವಾಯಿತು. ನಾಮಪತ್ರ ವಾಪಸ್ ತೆಗೆದುಕೊಂಡರೆ ಮಗಳು ವಾಪಸ್ ಬರಬಹುದು ಎಂದು ತಂದೆಗೆ ಸಂದೇಶ ಕಳುಹಿಸಿದರೂ ತಂದೆ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಆ ಬಳಿಕ ಪದ್ಮಲತಾ ಕೊಲೆಯಾಗಿ ದೇಹವು ಕೊಳೆತ ಸ್ಥಿತಿಯಲ್ಲಿ ನೆರಿಯ ನದಿಯಲ್ಲಿ ಪತ್ತೆಯಾಯಿತು” ಎಂದು ಪದ್ಮಲತಾ ಸಹೋದರಿ ಮಾಹಿತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಭೂಮಿ ನೀಡದೇ ಇದ್ದರೆ ಸ್ಥಳೀಯರನ್ನು ಅಪಹರಣ ಮಾಡುವ, ಹಲ್ಲೆ, ಕೊಲೆಗಳನ್ನು ಮಾಡುವ ಬಗ್ಗೆ ಈ ಹಿಂದಿನಿಂದಲೂ ದೂರುಗಳು, ಚರ್ಚೆಗಳಿವೆ. ಪಿತ್ರಾರ್ಜಿತ ಆಸ್ತಿಯಲ್ಲದೇ, ಖರೀದಿ ಮಾಡಿರುವ ಎಲ್ಲಾ ಆಸ್ತಿಗಳು ಹೇಗೆ ಖರೀಧಿ ಪ್ರಕ್ರಿಯೇ ನಡೆಯಿತು ಎಂಬ ಬಗ್ಗೆ ತನಿಖೆ ಆಗಬೇಕು. ಜನರು ಕಡಿಮೆ ದರಕ್ಕೆ ಭೂಮಿ ನೀಡಿ ಊರು ಬಿಟ್ಟು ಹೋಗೋದರ ಹಿಂದೆ ಕ್ರಿಮಿನಲ್ ಚಟುವಟಿಕೆ ಇದೆ. ಒಂದೊಂದು ಆಸ್ತಿ ಖರೀದಿಯ ಹಿಂದೆಯೂ ಒಂದೊಂದು ಅಪರಾಧ ಚಟುವಟಿಕೆ ಇದೆ. ಹಾಗಾಗಿ ಎಲ್ಲಾ ಆಸ್ತಿ ಖರೀದಿಯನ್ನು ತನಿಖೆ ನಡೆಸಬೇಕು” ಎಂದು ಲಕ್ಷ್ಮಣ ಗೌಡ ಆಗ್ರಹಿಸಿದರು.

ಭೂಮಾಫೀಯಾದ ಹಿನ್ನಲೆಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸಿದೆ. ಹಾಗಾಗಿ ಎಸ್ ಐಟಿ ತನಿಖೆಯು ಅಸ್ತಪಂಜರನ್ನು ಕೇವಲ ಮಹಿಳೆಯರ ನಾಪತ್ತೆ, ಅತ್ಯಾಚಾರ, ಕೊಲೆಗೆ ಮಾತ್ರ ಸೀಮಿತಗೊಳಿಸಿ ನೋಡಬಾರದು. ಅಸ್ತಿಪಂಜರಗಳ ಲಭ್ಯವಾಗುವುದರ ಹಿಂದೆ, ನಾಪತ್ತೆ, ಅತ್ಯಾಚಾರ ಕೊಲೆಗಳ ಹಿಂದೆ ಭೂ ಮಾಫಿಯಾವೂ ಇದೆ. ಹಾಗಾಗಿ ಧರ್ಮಸ್ಥಳದಲ್ಲಿ ನೊಂದಣಿಯಾದ ಎಲ್ಲಾ ಜಮೀನುಗಳ ಬಗ್ಗೆ ತನಿಖೆಯಾಗಬೇಕು ಎಂದು ಬಿ ಎಂ ಭಟ್ ಹೇಳಿದರು.

ಹಲವು ಸ್ಥಳೀಯರನ್ನು ಎಡಪಂಥೀಯ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದ್ದು, ಭೂಹಗರಣ ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ಬಗ್ಗೆಯೇ ಹೆಚ್ಚು ಮಾಹಿತಿ ನೀಡಿದರು. ಸ್ಥಳೀಯರ ಮಾಹಿತಿಯ ಆಧಾರದಲ್ಲಿ ಧರ್ಮಸ್ಥಳದ ಭೂಹಗರಣ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಲಾಯಿತು.

ಈಗಾಗಲೇ ರಚನೆಯಾಗಿರುವ ಎಸ್ ಐಟಿ ಕೆಲಸ ಶ್ಲಾಘನೀಯವಾಗಿದೆ. ಎಸ್ಐಟಿಯು ಅಸ್ತಿಪಂಜರ ಪತ್ತೆ ಪ್ರಕರಣವನ್ನು ಭೂ ಹಗರಣಗಳ ಹಿನ್ನಲೆಯಲ್ಲೂ ತನಿಖೆ ನಡೆಸಬೇಕು. ಭೂ ಮಾಫೀಯಾದ ದೌರ್ಜನ್ಯಗಳನ್ನೂ ಎಸ್ ಐಟಿ ವರದಿಯಲ್ಲಿ ಸೇರಿಸಿಕೊಳ್ಳಬೇಕು. ಒಂದು ವೇಳೆ ಈಗಿರುವ ಎಸ್ ಐಟಿಯಲ್ಲಿ ಧರ್ಮಸ್ಥಳ ಭೂ ಹಗರಣ ತನಿಖೆ ಮಾಡುವುದಕ್ಕೆ ಕಾನೂನಿನ ತೊಡಕಿದ್ದರೆ ಪ್ರತ್ಯೇಕ ಎಸ್‌ಐಟಿ ರಚಿಸಬೇಕು. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಯನ್ನು ಆಗ್ರಹಿಸುತ್ತೇವೆ ಎಂದು ಚಿಂತಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ ಪ್ರಕಾಶ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...