ಮೈಸೂರು | ಹೊಯ್ಸಳ ಶಿಲ್ಪಗಳ ನೃತ್ಯ – ನಾದದ ಪ್ರತಿಬಿಂಬ; ವಿಶೇಷ ಉಪನ್ಯಾಸ

Date:

ಮೈಸೂರಿನ ಡಾ. ವಿಜಯಲಕ್ಷ್ಮಿ ಬಸವರಾಜ್ ಚಾರಿಟಬಲ್ ಸೊಸೈಟಿ ಮತ್ತು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಸಹಯೋಗದಲ್ಲಿ ‘ ಹೊಯ್ಸಳ ಶಿಲ್ಪಗಳ ನೃತ್ಯ – ನಾದದ ಪ್ರತಿಬಿಂಬ ಕುರಿತಾದ ವಿಶೇಷ ಉಪನ್ಯಾಸವು ಸಂಸ್ಥೆಯ ಸೆಮಿನಾರ್ ಸಭಾಂಗಣ, ನಾಲೆಡ್ಜ್ ಉದ್ಯಾನವನದಲ್ಲಿ ನಡೆಯಿತು.

ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ, ಪುರಾತತ್ತ್ವ ಮತ್ತು ಮ್ಯೂಸಿಯಾಲಜಿ ವಿಭಾಗದ ಪ್ರಾದ್ಯಾಪಕ ರೋಹಿತ್ ಈಶ್ವರ್ ಮಾತನಾಡಿ ‘ 11 ನೇ ಶತಮಾನದಿಂದ 14 ನೇ ಶತಮಾನದವರೆಗೆ ಅರಳಿದ ಹೊಯ್ಸಳ ವಂಶದ ಶಿಲ್ಪಕಲೆ ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ವಿವರಿಸುತ್ತ, ” ಬೇಲೂರಿನ ಚನ್ನಕೇಶವ ದೇವಾಲಯದ ಮದನಿಕೆಗಳು ಹೊಯ್ಸಳ ನೃತ್ಯ ಶಿಲ್ಪಗಳ ಅಮೂಲ್ಯ ಉದಾಹರಣೆಗಳಾಗಿದ್ದು, ನಾಟ್ಯ ಶಾಸ್ತ್ರದ ಕರಣ – ಮುದ್ರೆಗಳ ಸುಂದರ ಭಂಗಿಯನ್ನು ಪ್ರತಿಬಿಂಬಿಸುತ್ತವೆ. ಚಲನೆಯ ಕೌಶಲ್ಯ ಕಲ್ಲಿನಲ್ಲೇ ಚಲನಶೀಲತೆ, ಭಾವ ಭಂಗಿ ಮತ್ತು ನೃತ್ಯದ ಲಯವನ್ನು ಮೂಡಿಸುವ ಹೊಯ್ಸಳ ಶಿಲ್ಪಿಗಳ ಕೌಶಲ್ಯ ಅಪರೂಪವಾಗಿದೆ. “

” ಸಂಗೀತದ ಪ್ರತಿಫಲನೆ, ಶಿಲ್ಪಗಳಲ್ಲಿ ವೀಣೆ, ಮೃದಂಗ, ಬಾಸುರಿ, ಶಂಖ, ತಾಳಗಳು ಮುಂತಾದ ವಾದ್ಯಗಳನ್ನು ವಾದಿಸುತ್ತಿರುವ ವಿಗ್ರಹಗಳು ಕಂಡು ಬರುತ್ತವೆ. ಕೆಲವೆಡೆ ನೃತ್ಯಗಾರಿಕೆಯೊಂದಿಗೆ ಗಾಯಕರನ್ನೂ, ವಾದ್ಯಗಾರರನ್ನೂ ಸೇರಿಸಿ ಕೆತ್ತಿರುವುದರಿಂದ ಆ ಕಾಲದ ಸಮೂಹ ನೃತ್ಯ – ಸಂಗೀತ ಸಮರ್ಪಣೆಗಳು ಪ್ರತಿಫಲಿಸುತ್ತವೆ. ಸಾಂಸ್ಕೃತಿಕ ಮಹತ್ವ, ಹೊಯ್ಸಳ ಶಿಲ್ಪಗಳು ಕೇವಲ ಅಲಂಕಾರಿಕವಲ್ಲ, ಅವು ಆ ಕಾಲದ ಧಾರ್ಮಿಕ, ಐತಿಹಾಸಿಕ ಮತ್ತು ಕಲಾತ್ಮಕ ಜೀವನದ ಜೀವಂತ ದಾಖಲೆಗಳಾಗಿವೆ ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಗೀತ – ಸಾಹಿತ್ಯದ ಮಿಲನ; ಜನರಲ್ಲಿ ಪ್ರೀತಿ, ಸೌಹಾರ್ದತೆ, ಜನಜೀವನವನ್ನು ಉಲ್ಲೇಖಿಸುವ ಕ್ಷೇತ್ರ : ವೈ ಕೆ ಮುದ್ದುಕೃಷ್ಣ

ಕಾರ್ಯಕ್ರಮದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ, ಡಾ. ವಿಜಯಲಕ್ಷ್ಮಿ ಬಸವರಾಜ್, ರಂಗಕರ್ಮಿ ಪ್ರೊ. ಎಚ್. ಎಸ್. ಉಮೇಶ್, ರಾಮೇಶ್ವರಿ ವರ್ಮ, ಇಂದಿರಾ ನಾಯರ್, ರತ್ನ ಮಿರ್ಲೆ, ಪ್ರೊ. ರಂಗರಾಜು, ನಿರಂತರದ ನಿರ್ದೇಶಕ ಶ್ರೀನಿವಾಸ ಪಾಲಹಳ್ಳಿ, ಕೆಂಪರಾಜು, ಪ್ರೊ. ಕೆ. ಸಿ. ಬಸವರಾಜು, ಪತ್ರಕರ್ತ ಒಂಕಾರ್, ರವೀಸ್, ಧನಂಜಯ ಹಾಗು ಡಾ. ವಿಜಯಲಕ್ಷ್ಮಿ ಬಸವರಾಜ್ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...