ದಾವಣಗೆರೆ | ಸ್ವಾತಂತ್ರ್ಯವೀರ ಭಗತ್ ಸಿಂಗ್ ಹುತಾತ್ಮ ದಿನಾಚರಣೆ

Date:

ಸ್ವಾತಂತ್ರ್ಯ ವೀರ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ 90ನೇ ವರ್ಷದ ಹುತಾತ್ಮ ದಿನವನ್ನು ಸಂಕಲ್ಪ ದಿನವಾಗಿ ಆಚರಿಸೋಣ ಎಂದು ಎಐಎಂಎಸ್ಎಸ್‌ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಗಳ ಮುಖಂಡರು ಕರೆ ನೀಡಿದರು.

ದಾವಣಗೆರೆಯ ರೈಲು ನಿಲ್ದಾಣ ಮುಂಬಾಗದಲ್ಲಿರುವ ಸ್ವಾತಂತ್ರ್ಯವೀರ ಭಗತ್ ಸಿಂಗ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮುಖಂಡರು, “ಮಾರ್ಚ್ 23 ಒಂದು ಚಾರಿತ್ರಿಕ ದಿನವಾಗಿದೆ. ಕ್ರಾಂತಿಯ ವೀರ ಹುತಾತ್ಮ ಭಗತ್ ಸಿಂಗ್ ಹಾಗೂ ಆತನ ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ಹುತಾತ್ಮರಾಗಿ 90 ವರ್ಷಗಳು ಸಂದಿರುವ ದಿನ ಈ ದಿನವನ್ನು ಇಡೀ ದೇಶವೇ ಅಮರ ವೀರರನ್ನು ನೆನೆಯುವ ಸಂದರ್ಭವಾಗಿದೆ. ಭಗತ್ ಸಿಂಗ್ ನೇಣುಗಂಬಕ್ಕೆ ಏರಿದಾಗ 23 ವರ್ಷದ ಯುವಕ ಸಣ್ಣ ವಯಸಿನಲ್ಲಿಯೇ ದೇಶವ್ಯಾಪಿಯಾಗಿ ಕ್ರಾಂತಿಯ ಜ್ವಾಲೆಯನ್ನು ಬೆಳಗಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ತರ ತಿರುವು ನೀಡಿದ, ಚರಿತ್ರೆಯ ಪುಟದಲ್ಲಿ ಎಂದೂ ಅಳಿಸಿಹೋಗದಂತಹ ದಿನವಾಗಿದೆ” ಎಂದು ಸ್ಮರಿಸಿದರು.

“ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಭಗತ್ ಸಿಂಗ್ ಹೀಗೆ ಘೋಷಿಸಿದ್ದರು – ಯುದ್ಧ ಆರಂಭವಾಗಿದೆ. ಬಲಾಢ್ಯರು ಭಾರತದ ಜನತೆಯ ಮತ್ತು ಕಾರ್ಮಿಕರ ಎಲ್ಲ ಆದಾಯ ಸಾಧನಗಳನ್ನೂ ತಮ್ಮ ಏಕಸ್ವಾಮ್ಯಕ್ಕೆ ಒಳಪಡಿಸಿಕೊಂಡಿರುವವರೆಗೂ ಈ ಯುದ್ಧ ನಿಲ್ಲುವುದಿಲ್ಲ. ಈ ಬಲಾಢ್ಯರು ಬ್ರಿಟಿಷ್ ಬಂಡವಾಳಶಾಹಿಗಳಾಗಿರಲಿ ಅಥವಾ ಸ್ವತಃ ಭಾರತೀಯರಾಗಿರಲಿ, ಅವರು ಒಟ್ಟುಗೂಡಿಯೇ ಲೂಟಿ ಮಾಡುತ್ತಿದ್ದಾರೆ. ಬಡಜನರ ರಕ್ತವನ್ನು ಭಾರತೀಯ ಬಂಡವಾಳಿಗರೇ ಹೀರುತ್ತಿದ್ದರೂ ಸರಿ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನು ಇಲ್ಲ – ಎಂಬ ಅವರ ಮಾತು ಇಂದಿಗೆ ಅಕ್ಷರಶಃ ಸಂಪೂರ್ಣ ಸತ್ಯವಾಗಿದೆ. ಹೋರಾಟವೆಂಬ ಯುದ್ಧ ಇಂದಿಗೂ ಮುಂದುವರಿಯುತ್ತಿದೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸ್ವಾತಂತ್ರ್ಯಾನಂತರ ಬಲಾಢ್ಯರು ಮತ್ತು ಬಂಡವಾಳಿಗರು ಭಾರತದ ಜನತೆ ಮತ್ತು ರೈತ, ಕಾರ್ಮಿಕರ ಎಲ್ಲ ಆದಾಯದ ಸಾಧನವನ್ನು ತಮ್ಮ ಏಕಸ್ವಾಮ್ಯದಡಿ ಹಿಡಿದಿಟ್ಟುಕೊಂಡಿದ್ದಾರೆ. ಅದರಿಂದಾಗಿ ದುಡಿವ ಜನತೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಈಗ ದೇಶದ ಜನರ ಮುಂದಿರುವ ದಾರಿ ತಮ್ಮ ಸಂಘಟಿತ ಶಕ್ತಿಯ ಆಧಾರದಲ್ಲಿ ತಮ್ಮ ಸಾಮೂಹಿಕ ಅಧಿಕಾರವನ್ನು ಸ್ಥಾಪಿಸಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ. ನಮ್ಮ ವಿಮೋಚನೆಯ ಹಾದಿಯಲ್ಲಿ ಮುನ್ನಡೆಯಬೇಕಿದೆ” ಎಂದು ಕರೆ ನೀಡಿದರು.

“ಭಗತ್ ಸಿಂಗ್ ಹೇಳಿದಂತೆ ಅವರ ಚಿಂತನೆಗಳು ನಮಗೆ ಸ್ಫೂರ್ತಿಯಾಗಬೇಕಿದೆ. ಇಂದಿಗೂ ಸಾಕಾರವಾಗದೇ ಉಳಿದಿರುವ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಆಶಯಗಳ ಈಡೇರಿಕೆಗೆ ಶ್ರಮಿಸುತ್ತಿರುವ, ಶ್ರಮಿಸಬೇಕಾಗಿರುವ ದೇಶದ ಯುವಜನತೆ ಆ ವೀರರ ತ್ಯಾಗ, ದೇಶಪ್ರೇಮ, ಕ್ರಾಂತಿಕಾರಿ ಬದ್ಧತೆ ಸಮಾಜವಾದಿ ಆಶಯಗಳಿಂದ ಇನ್ನಷ್ಟು ಸ್ಫೂರ್ತಿ ಪಡೆಯಲು ಭಗತ್ ಸಿಂಗ್ ಮತ್ತವರ ಸಂಗಾತಿಗಳ ನೆನೆಯಬೇಕಿದೆ. ನಮ್ಮ ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಹುತಾತ್ಮರ ಆಶಯಗಳ ಪರವಾದ ಸರ್ಕಾರವನ್ನು ಚುನಾಯಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸರ್ಕಾರಿ ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ಎಐಡಿಎಸ್ಒ ಆಗ್ರಹ

ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಸದಸ್ಯರುಗಳಾದ ಸತೀಶ್‌ ಅರವಿಂದ್, ಖಲೀಲ್ ಬಿ, ಆದೀಲ್‌ಖಾನ್, ಪವಿತ್ರ, ಡಿಕ್ಕಿ ರಮೇಶ್, ಗುರುರಾಜ್, ವನೀತ್, ಬೆಳವನೂರು ಮನು ಮತ್ತು ಸಾರ್ವಜನಿಕರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...