ದಾವಣಗೆರೆ | ಸಮಾಜದ ಅಂಕು, ಡೊಂಕು ತಿದ್ದಲು ಚುಟುಕು ಕವನಗಳು ಉತ್ತಮ ಅಸ್ತ್ರ: ಸಾಹಿತಿ ಜೆ.ಕಲೀಂಬಾಷಾ

Date:

ಸಮಾಜದ, ಆಡಳಿತಗಾರರ ಅಂಕು, ಡೊಂಕುಗಳನ್ನು ತಿದ್ದಲು, ಅವರನ್ನು ನಿದ್ದೆಯಿಂದ ಎಚ್ಚರಿಸಲು ಚುಟುಕು ಕವನಗಳು ಉತ್ತಮ ಅಸ್ತ್ರವಾಗಿವೆ. ಚುಟುಕು ಕವನಗಳು ಕೆಂಪು ಇರುವೆ ಕಚ್ಚಿದಂತೆ ಸಂಬಂಧಿತರಿಗೆ ಇರುಸು ಮುರಿಸು ಉಂಟು ಮಾಡುತ್ತದೆ ಎಂದು ಸಾಹಿತಿ ಜೆ.ಕಲೀಂಬಾಷಾ ಹೇಳಿದರು.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸಿದ್ದೇಶ್ವರ ಪ್ಯಾಲೇಸ್‌ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ಮಂಗಳವಾರ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಲೇಖನಿಯು ಖಡ್ಗಕ್ಕಿಂತ ಹರಿತ ಎಂಬ ಗಾದೆ ಮಾತಿ ನಂತೆ ಚುಟುಕು ಕವನಗಳು ಸಾಹಿತ್ಯ ಕ್ಷೇತ್ರದ ಪ್ರಭಾವಿ ಪ್ರಕಾರವಾಗಿದೆ. ಬಂಡಾಯ ಸಾಹಿತಿಗಳ ಬೀಡಾಗಿದ್ದರಿಂದ ಹಿರಿಯ ಸಾಹಿತಿ ಚಂಪಾ ರವರಿಗೆ ಹರಿಹರ ನೆಚ್ಚಿನ ಊರಾಗಿತ್ತು. ಇಲ್ಲಿನ ಬಂಡಾಯ ಸಾಹಿತಿ, ಕವಿಗಳಿಂದ ರಚಿಸಲ್ಪಟ್ಟ ಕವನಗಳು, ಲೇಖನಗಳು ನಾಡಿನಾದ್ಯಂತ ಪ್ರಚಲಿತ ವಾಗಿದ್ದವು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಯುವ ಕವಿಗಳು ಕೃಷಿ ಮಾಡಬೇಕು, ಮಕ್ಕಳಿಗಾಗಿ ಬರೆದರೆ ನಾಳೆಗಾಗಿ ಬರೆದಂತೆ. ಈ ಗೋಷ್ಠಿಯಲ್ಲಿ ವಾಚಿಸಿದ ಕವಿಗಳ ಕವನಗಳು ಉತ್ತಮವಾಗಿವೆ. ಇನ್ನಷ್ಟು ಸಾಹಿತ್ಯ ಕೃಷಿ ಮಾಡಿದರೆ ಇನ್ನಷ್ಟು ಉತ್ತಮ, ಇನ್ನೂ ಕೆಲವರದ್ದು ಇನ್ನಷ್ಟು ಕೃಷಿ ಮಾಡಲು ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆಯ ಕವಿ ಕೆ.ಪಿ. ತಾರೇಶ್ ಅಣಬೇರು ಆಶಯ ನುಡಿಗಳನ್ನಾಡಿ, ಕವಿತೆಗಳು ಮಾತನಾಡಬೇಕೆ ಹೊರತು, ಕವಿಯಲ್ಲ, ಕವಿಯಾಗಿ ಬೆಳೆಯುತ್ತಿರುವ ಇನ್ನೊಬ್ಬರನ್ನು ನೋಡಿ ಅಸೂಯೆಯಿಂದ ಕವನ ರಚಿಸುವುದಕ್ಕಿಂತ, ಕವನ ರಚನೆಯು ಮನಸ್ಸಿನಾಳದಿಂದ, ಅನುಭಾವದಿಂದ ಸಹಜವಾಗಿ ಹುಟ್ಟಬೇಕೆಂದು ಹೇಳಿದರು.

ಕವಿಗಳಾದ ಸಿ.ಕೆ. ಪುಟ್ಟನಾಯ್, ರಾಧಾ ಹನುಮಂತಪ್ಪ ಟಿ, ಕೆ.ಎಂ. ರೇಣುಕಾ, ಡಿ.ಜಿ. ಆನಂದ್, ಟಿ.ಎಚ್. ಸಾವಿತ್ರಮ್ಮ, ಡಾ.ನಮಿತಾ ಸತೀಶ್, ಪಿ.ಜಯರಾಮನ್, ಸತೀಶ್ ಎ, ಕೆ.ಬಸವರಾಜ್, ಮನೋಜ್ ಕುಮಾರ್ ಬಿ, ನೂರ್ ಜಹಾನ್, ಗಾಯತ್ರಿ ಜಿ.ಎಸ್, ಅಪ್ಪಾಜಿ ಮುನ್ನೂರು, ಶಿವಲೀಲಾ ಜಕ್ಕಾಲಿ, ಎ.ಬಿ. ಬಸವರಾಜಪ್ಪ, ಉಷಾ ಇ, ಮಲೆಬೆನ್ನೂರು ಸಾಬಿರ್ ಅಲಿ, ಜಿಗಳಿ ರಂಗನಾತ್, ಜ್ಯೋತಿ ಉಪಾಧ್ಯ, ಕೃಷ್ಣಪ್ಪ ಕವನ ವಾಚಿಸಿದರು.

ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರೊ. ಸಿ.ವಿ.ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕಸಾಪ ತಾಲೂಕು ಘಟಕ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಕವಿಗಳಾದ ಹುಲಿಕಟ್ಟಿ ಚನ್ನಬಸಪ್ಪ, ಕುಂದೂರು ಮಂಜಪ್ಪ, ಬಿ.ಹಾಲೇಶಪ್ಪ, ರಹಮತ್ ಉರ್ ರಹಮಾನ್, ಕೆ.ವಿ.ಮೌನೇ ಶಾಚಾ‌ರ್, ಬಿ.ಮಂಜುಳ, ಕಾಂತರಾಜ್ ಎಂ, ಜಿ.ವಿ. ಬಸವರಾಜ್, ಶಾರದ ಕಣಗೊಟಗಿ, ನಾಗರಾಜ್ ಕತ್ತಿಗೆ, ನ್ಯಾಮತಿ ಯ ಡಿ.ಎಂ. ಹಾಲಾರಾಧ್ಯ, ಚನ್ನಗಿರಿಯ ಎಲ್.ಜಿ. ಮಧುಕುಮಾರ್ ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...