ದಾವಣಗೆರೆ ನಗರದ ಹದಡಿ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ ಅಥ್ಲೆಟಿಕ್ ಅಕಾಡೆಮಿ ವತಿಯಿಂದ ಕಿಡ್ಸ್ ಅಥ್ಲೆಟಿಕ್ – 2025 ಮಕ್ಕಳ ವಿವಿಧ ಕ್ರೀಡೆಗಳ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ U-8,10,12,14, ವರ್ಷದ ಒಳಗಿನ 500ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿಯವರು ಜಾವಲಿನ್ ಎಸೆಯುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿ “ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಪ್ರಯೋಜನವನ್ನು ಕಾಣಬಹುದು. ಮಕ್ಕಳ ಬುದ್ಧಿಶಕ್ತಿ, ಆತ್ಮಸ್ಥೈರ್ಯ ಬೆಳವಣಿಗೆಯಾಗುತ್ತದೆ. ಉತ್ತಮ ದೈಹಿಕ ಆರೋಗ್ಯ ಅಲ್ಲದೇ ಜೀವನದಲ್ಲಿ ಸದೃಢ ಮತ್ತು ಉತ್ತಮ ಪ್ರಜೆಗಳಾಗುತ್ತೀರಿ” ಎಂದು ಮಕ್ಕಳಿಗೆ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಕಷ್ಟದ ಮಹಿಳೆಯರಿಗೆ ಆಶ್ರಯ ಯೋಜನೆಯ ಪ್ರಚಾರ: ನ್ಯಾ. ಮಹಾವೀರ ಕರೆಣ್ಣವರ ಚಾಲನೆ
ಉದ್ಘಾಟನಾ ಸಮಾರಂಭದಲ್ಲಿ ಆಯೋಜಕರಾದ ಧನಂಜಯ್, ಮುಖ್ಯ ಅತಿಥಿಗಳಾಗಿ ರಾಜಕುಮಾರ್, ಜೆ ಎಸ್ ಪಟೇಲ್ ಕಾಲೇಜಿನ ಪ್ರಾಂಶುಪಾಲ ಮುಸ್ತಾಫ, ಮಲ್ಲಿಕಾರ್ಜುನ್, ಗಣೇಶ್, ಹಾಲೇಶ್, ಕೀರ್ತಿ ಸೇರಿದಂತೆ ಇತರ ಗಣ್ಯರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.





