ದಾವಣಗೆರೆ ಜಿಲ್ಲೆಯ ಹರಿಹರ ಶಾಖಾ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ 2025ನೇ ಸಾಲಿನ ಶನಿವಾರದಂದು ಸಂತಶ್ರೇಷ್ಠ ಶ್ರೀ ಭಕ್ತ ಕನಕದಾಸರ 358 ನೇ ಜಯಂತಿಯನ್ನು ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹರಿಹರ ಶಾಖಾ ಪ್ರಬಂಧಕ ರವಿಕುಮಾರ್ ಕನಕದಾಸರ ಜಯಂತಿ ಶುಭಾಶಯಗಳನ್ನು ತಿಳಿಸಿ ಮಾತನಾಡಿ “ದಾಸವರೇಣ್ಯ ಸಂತಶ್ರೇಷ್ಠ ಕನಕದಾಸರು ಕುಲ, ಜಾತಿ, ಮತಗಳ ತಾರತಮ್ಯವನ್ನು ವಿರೋಧಿಸಿ, ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಹಾಗೂ ‘ಕುಲ ಕುಲವೆಂದು ಹೊಡೆದಾಡದಿರಿ’ ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಜಾತಿ-ಮತ, ಸ್ಥಾಪಿತ ಮೌಢ್ಯಗಳನ್ನು ಕಳೆಯಲು ಶ್ರಮಿಸಿದ, ಸಮಾಜದ ಡೊಂಕುಗಳನ್ನು ತಮ್ಮ ಕವಿತೆಗೆಳಿಂದ ಎತ್ತಿ ಹಿಡಿದವರು. ಕನ್ನಡ ಸಾಹಿತ್ಯಕ್ಕೆ ಕೀರ್ತನೆಗಳ ಮೂಲಕ ಅನರ್ಘ್ಯ ಕೊಡುಗೆಯನ್ನು ನೀಡಿದ ಶ್ರೇಷ್ಠದಾಸರಲ್ಲಿ ಒಬ್ಬರಾಗಿರುವ ಸಂತಶ್ರೇಷ್ಠರು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು
ಹರಿಹರ ಗ್ರಂಥಾಲಯದಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಮೇಲ್ವಿಚಾರಕ ಕೇಶವ ಎಸ್, ರಮೇಶ್ ಬೆಳ್ಳೂಡಿ, ಗ್ರಂಥಾಲಯದ ಸಿಬ್ಬಂದಿಗಳು, ಸಾರ್ವಜನಿಕರು, ಓದುಗರು ಭಾಗವಹಿಸಿದ್ದರು.





