ಮಂಗಳವಾರ ರಸ್ತೆ ಅಪಘಾತದಲ್ಲಿ ನಿಧನರಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಹರಿಹರ ನಗರದ ಗಾಂಧಿ ವೃತ್ತದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ವೇಳೆ ದಸಂಸ ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, “ಕಡು ಬಡತನದಲ್ಲಿ ಹುಟ್ಟಿ ಐಎಎಸ್ ನಂತಹ ಹುದ್ದೆ ಅಲಂಕರಿಸಿದ ಮಹಾಂತೇಶ್ ಬೀಳಗಿರವರ ಶ್ರಮದ ಬದುಕು ನಮಗೆಲ್ಲಾ ಮಾದರಿಯಾಗಿದೆ” ಎಂದರು.
“ಅವರು ಬಸವಣ್ಣನವರ ಕಟ್ಟಾ ಅನುಯಾಯಿ ಯಾಗಿದ್ದು, ಅವರು ಬಡವರ ಏಳಿಗೆಗೆ ಶ್ರಮಿಸಿದರು. ಜನ ಸಾಮಾನ್ಯರ ಕಷ್ಟ, ಕಾರ್ಪಣ್ಯಗಳನ್ನು ಆಲಿಸಿ ಪರಿಹರಿಸುತ್ತಿದ್ದರು. ಅವರು ಜಿಲ್ಲಾಧಿಕಾರಿಯಾಗಿದ್ದ ಕೋವಿಡ್ ಅವಧಿಯಲ್ಲಿ ಜಿಲ್ಲೆಯಲ್ಲಿ ಕ್ವಾರಂಟೈನ್, ರೋಗಿಗಳ ಚಿಕಿತ್ಸೆಗೆ ಹಗಲು, ರಾತ್ರಿ ಶ್ರಮಿಸಿದರು” ಎಂದು ಸ್ಮರಿಸಿದರು.
“ಹರಿಹರ ನಗರದ ಎ.ಕೆ.ಕಾಲೋನಿಯಲ್ಲಿರುವ ಕದಸಂಸ ಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪರ ಶಿಥಿಲಗೊಂಡಿದ್ದ ಮನೆಗೆ ಭೇಟಿ ನೀಡಿ ಮನೆಯ ಜೀರ್ಣೋದ್ದಾರಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು, ಆದರೆ ತಾಂತ್ರಿಕ ಕಾರಣಗಳಿಂದಾಗಿ ಆ ಅನುದಾನ ಬಿಡುಗಡೆಯಾಗಿಲ್ಲ” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪೊಕ್ಸೋ ಪ್ರಕರಣ ಕೋರ್ಟ್ ತೀರ್ಪು; ಮುರುಘಾ ಶರಣರಿಗೆ ಬಿಗ್ ರಿಲೀಫ್
ಬೆಸ್ಕಾಂ ಎಇಗಳಾದ ಮಾರ್ಕಂಡೇಯ ಎಂ ಮನೋಜ್, ವಿನಾಯಕ ಬೆಳ್ಳೂಡಿ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾದ ಎಚ್.ಕೆ.ಕೊಟ್ರಪ್ಪ, ಎ.ಕೆ.ಭೂಮೇಶ್, ಕೃಷ್ಣಮೂರ್ತಿ ಯಶಸ್ವಿನಿ, ಎಂ.ಎಸ್.ಆನಂದಪ್ಪ, ಕೇಶವ, ರಮೇಶ್ ಮಾನೆ, ಪ್ರೀತಂ ಬಾಬು, ಬಿ.ಮಗ್ದುಮ್, ಇಲಿಯಾಸ್ ಅಹ್ಮದ್, ಪ್ರಕಾಶ್ ಬೆಳ್ಳೂಡಿ, ಪ್ರವೀಣ್, ಮಂಜುನಾಥ್ ವಡುವಲಕೇರಿ, ನಾಗರಾಜ್ ಬೆಂಡಿಗೇರಿ, ಪ್ರಕಾಶ್ ಜಿ.ಎಂ., ಮಂಜುನಾಥ್ ಕಾಯಿ, ಗಂಗಾಧರ, ಆಕಾಶ್ ಎಂ.ಡಿ., ನಗರಸಭಾ ಸದಸ್ಯ ಆಟೋ ಹನುಮಂತಪ್ಪ ಹಾಗೂ ಇತರರು ಭಾಗವಹಿಸಿದ್ದರು.





