ದಾವಣಗೆರೆ | ಪಾರದರ್ಶಕ ಮತ್ತು ನ್ಯಾಯಯುತ ವಹಿವಾಟಿಗೆ ಆಗ್ರಹಿಸಿ ಮನವಿ

Date:

ಭದ್ರಾ ನೀರಿನ ತಾಪತ್ರಯದ ನಡುವೆಯೂ ರೈತರು ಬಹಳ ಕಷ್ಟ ಪಟ್ಟು ಭತ್ತ ಬೆಳೆದಿದ್ದರೂ ಭತ್ತದ ಖರೀದಿದಾರರ ಬೆಲೆ ನಿಯಂತ್ರಣ, ಕುತಂತ್ರಗಳಿಂದ ರೈತರು ಸಾಕಷ್ಟು ರೋಸಿ ಹೋಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಎಪಿಎಂಸಿ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು ವ್ಯಾಪಾರಸ್ಥರ, ಖರೀದಿದಾರರ, ದಲಾಲರ ಮತ್ತು ರೈತರ ಸಭೆ ಕರೆದು ಕೂಲಂಕಷವಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಪಾರದರ್ಶಕ ಮತ್ತು ನ್ಯಾಯಯುತ ವ್ಯಾಪಾರ ವಹಿವಾಟು ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಭತ್ತ ಖರೀದಿ ಮಾಡಿದ ಖರೀದಿದಾರರು ವೇಮೆಂಟ್, ಪೇಮೆಂಟ್ ಅಂತ ಕಂಡಿಷನ್ ಮಾಡಿರುವುದಲ್ಲದೇ, ವಾರಗಟ್ಟಲೆ ಹಣ ನೀಡದೆ ಸತಾಯಿಸುತ್ತಾರೆ. ಇದು ಅಕ್ಷಮ್ಯ ಅಪರಾಧ. ಖರೀದಿದಾರರ ಇಂತಹ ಕುತಂತ್ರ ಧೋರಣೆ ಸಂಪೂರ್ಣ ನಿಲ್ಲಬೇಕು. ವೇಮೆಂಟ್, ಪೇಮೆಂಟ್ ಪದ್ಧತಿ ಬದಲು ಲೋಡಿಂಗ್, ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಲೋಡಿಂಗ್, ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಅಂದರೆ ಖರೀದಿಸಿದ ಭತ್ತ ಲೋಡ್ ಮಾಡಿದ ತಕ್ಷಣ ಚೀಲ ಒಂದಕ್ಕೆ 2 ಸಾವಿರ ರೂಪಾಯಿಯಂತೆ ಎಷ್ಟು ಚೀಲ ತುಂಬಿಸಲಾಗಿರುತ್ತದೆಯೋ ಅಷ್ಟು ಚೀಲಗಳಿಗೆ ಲೆಕ್ಕ ಹಾಕಿ ಸ್ಥಳದಲ್ಲೇ ಹಣ ಕೊಡಬೇಕು. ನಂತರ ಲೋಡ್ ಲಾರಿಯನ್ನು ಮುಂದೆ ಹೋಗಲು ಬಿಡ ಬೇಕು. ಇನ್ನುಳಿದ ಹಣವನ್ನು ತೂಕ ವಾದ ನಂತರ ಲೆಕ್ಕ ಹಾಕಿ ಕೊಡಬೇಕು ಎಂದರು. ಖಾಲಿ ಚೀಲ ತೂಕಕ್ಕೆ 1ಕೆಜಿ ಶೂಟ್ ಜೊತೆಗೆ ಇನ್ನೊಂದು ಕೆಜಿ ಹೆಚ್ಚುವರಿಯಾಗಿ ಪಡೆಯುತ್ತಾರೆ. ಇದು ಸರಿಯಲ್ಲ. ಮೋಸ ಮಾಡಲಾಗುತ್ತಿದೆ. ಕಾರಣ ಚೀಲದ ಒಟ್ಟು ತೂಕದಲ್ಲಿ ಕಡಿತಗೊಳಿಸಿ ಲೆಕ್ಕ ಹಾಕಿ ಮೆಂಟ್ ಮಾಡಬೇಕು. ಹಮಾಲರ ಕೂಲಿ ಸಂಪೂರ್ಣ ಖರೀದಿದಾರರೆ ನೀಡಬೇಕು. ರೈತರ ಹಣದಲ್ಲಿ ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.

ಹಮಾಲರು ಶ್ಯಾಂಪಲ್ ಕಾಳು ಕೊಡಬೇಕು ಎಂದು ರೈತರನ್ನು ಒತ್ತಾಯಿಸಿ ಪೀಡಿಸಬಾರದು. ರೈತರು ಸಹ ಅವರ ಒತ್ತಾಯಕ್ಕೆ ಮಣಿದು ಒಂದು ಕಾಳನ್ನು ಸಹ ಕೊಡಬಾರದು. ಡಿಸೈಂಟ್ ಪದ್ಧತಿ ಕಡ್ಡಾಯವಾಗಿ ರದ್ದಾಗಬೇಕು. ಭತ್ತದ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರು ಖರೀದಿದಾರರ ಕುತಂತ್ರಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರೈತ ಒಕ್ಕೂಟದ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಮಾಜಿ ಮೇಯ‌ರ್ ಎಚ್‌.ಎನ್‌. ಗುರುನಾಥ್, ವಾಸನ ಬಸವರಾಜ, ಅಣಬೇರು ಶಿವ ಪ್ರಕಾಶ್ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...