ದಾವಣಗೆರೆ | ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಟಿಕೆಟ್ ನಮ್ಮ ಸಮಾಜದ ಹಕ್ಕು: ಮುಸ್ಲಿಂ ಮುಖಂಡರ ತಿರುಗೇಟು

Date:

“ಕೆಲ ದಿನಗಳ ಹಿಂದೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಕೆಲವು ಜನ ಮಾಜಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಕೇಳುತ್ತಿರುವ ಬಗ್ಗೆ ತಪ್ಪು ಅಭಿಪ್ರಾಯ ಸೃಷ್ಟಿಸುವಂತೆ ಮಾತನಾಡಿರುವುದನ್ನು ಖಂಡಿಸಿ ಮುಸ್ಲಿಂ ಸಮಾಜದ ಮುಖಂಡರು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಪಕ್ಷದ ಟಿಕೆಟ್ ಕೇಳುವುದು ನಮ್ಮ ಸಮಾಜದ ಹಕ್ಕು” ಎಂದು ತಿರುಗೇಟು ನೀಡಿದರು.‌

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು “2026, ಫೆಬ್ರವರಿ 17ರಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಕೆಲವು ಜನ ಮಾಜಿ ಸದಸ್ಯರು ಪತ್ರಿಕಾಗೋಷ್ಠಿ ಮಾಡಿರುವ ಕೆಲವು ತಪ್ಪು ಅಭಿಪ್ರಾಯದ ಸೃಷ್ಟಿಕರಣ ನೀಡಿರುವುದು ಮತ್ತು ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ವಿಚಾರ ಎಲ್ಲರ ಗಮನಕ್ಕೆ ತರಬಯಸುತ್ತೇವೆ.‌ ದಿವಂಗತ ಶ್ರೀ ಶಾಮನೂರು ಶಿವಶಂಕರಪ್ಪರವರಿಂದ ತೆರೆವಾಗಿರುವ ಸ್ಥಾನಕ್ಕೆ ನಡೆಯುವ ಉಪ-ಚುನಾವಣೆಗೆ ಅವರ ಕುಟುಂಬಕ್ಕೆ ಸ್ಥಾನ ನೀಡಬೇಕೆಂದು ಒತ್ತಾಯಿಸಿರುವುದು ಕುಟುಂಬ ರಾಜಕಾರಣಕ್ಕೆ ನಾಂದಿಯಾಗುತ್ತೆ. ಹಾಗಾಗಿ ಕುಟುಂಬ ರಾಜಕರಣ ಬಿಟ್ಟು ಬೇರೆಯಾವರಿಗೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.‌

1003724428

“ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಜನ ನಿಷ್ಠಾವಂತ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬೇಡಿಕೆ ಸಲ್ಲಿಸುತ್ತಿರುವುದು ನಿಮ್ಮ ಅಭಿಪ್ರಾಯದಲ್ಲಿ ತಪ್ಪೇ? ತಾವು ಪಕ್ಷದ ಹೈಕಮಾಂಡ್ ಯಾರಿಗೆ ಪಕ್ಷದ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಹೇಳಿದ್ದೀರಿ ಸರಿ. ಆದರೆ ನೀವು ಒತ್ತಾಯಪೂರ್ವಕವಾಗಿ ಒಂದು ಕುಟುಂಬಕ್ಕೆ ಎಂದಿರುವುದು ತಪ್ಪು. ನಿಷ್ಠಾವಂತ ಕಾರ್ಯಕರ್ತರನ್ನು ಅಪಮಾನ ಮಾಡಿದ್ದೀರಿ. ಹಾಗಾದರೆ ಕಾಂಗ್ರೇಸ್ ಪಕ್ಷದ ಟಿಕೆಟ್ ಕೇಳುವುದೇ ತಪ್ಪಾ? ಎಂದು ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಯಾವುದೇ ಪಕ್ಷದ ಟಿಕೆಟ್ ನೀಡುವುದು ಆಸ್ಥಿತೆಯ ಆಧಾರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಸದಸ್ಯರಾಗಿ ತಾವು ಮೇಯರ್ ಆಗಿರುವುದು ನೆನಪಿದೆಯಲ್ಲವೇ, ಸಮುದಾಯದ ಆಧಾರದ ಮೇಲೆಯೇ ಎಲ್ಲಾ ಪಕ್ಷಗಳು ಟಿಕೆಟ್ ಕೊಡುವುದು. ಯಾರಿಗಾದರೂ ಮುಸ್ಲಿಂರಿಗೆ ಸಮುದಾಯ ಬಿಟ್ಟು ಬೇರೆ ಕಡೆಗೆ ಟಿಕೆಟ್ ನೀಡಿರುವ ಒಂದೇ ಒಂದು ಉದಾಹರಣೆ ಇದೆಯಾ ಮಾನ್ಯರೇ. ನೀವು ತಿಳಿಸಿರುವ ಹಾಗೆ 1978ರಿಂದಲೂ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿರುವ ಹಾಗೇ ಜನರಲ್ಲಿ ಬಿಂಬಿಸಿದ್ದೀರಿ. ಸ್ಪಷ್ಟವಾಗಿ ಸುಳ್ಳಿನ ಹೇಳಿಕೆ ನೀಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“1978ರ ಖಾಜಾಮೂಹಿದ್ದಿನ್, 1983 ಎಚ್.ಇಕ್ಬಾಲ್ ಸಾಬ್ ಪಕ್ಷೇತರರು. 1989ರಲ್ಲಿ ಮೊಹಿದ್ದೀನ್ ಸಾಬ್ ಜನತಾಪಕ್ಷದಿಂದ, 1994 ಕೆ.ಎಸ್. ಅತಾವುಲ್ಲಾ ಖಾನ್. ಕೆಸಿಪಿ ಪಕ್ಷ, 1999ರಲ್ಲಿ ಅಮಾನುಲ್ಲಾ ಖಾನ ಪಕ್ಷೇತರರು. ಹಾಗೆಯೇ ದಾವಣಗೆರೆ ದಕ್ಷಿಣ ಕ್ಷೇತ್ರ 2008 ಜೆ.ಅಮಾನುವುಲ್ಲಾ ಖಾನ ಜೆಡಿ(ಎಸ್)ನಿಂದ ಸ್ಪರ್ದಿಸಿರುವುದು ಬೇರೆ ಪಕ್ಷದ ವಿಷಯವಾಗಿದೆ. ನೀವು ಜನರಲ್ಲಿ ತಪ್ಪು ಅಭಿಪಾಯ ಸೃಷ್ಟಸಿ ಕಾಂಗ್ರೆಸ್‌(ಐ) ಪಕ್ಷದಿಂದಲೇ ಇವರು ಸ್ಪರ್ಧಿಸಿರುವ ಹಾಗೆ ಬಿಂಬಿಸಿರುತ್ತೀರಿ. ಆದರೆ ನಮ್ಮ ಸಮಾಜದಲ್ಲಿ ಯಾವುದೇ ಧರ್ಮ, ಜಾತಿ, ಸಮುದಾಯಕ್ಕೆ ಮಣೆ ಹಾಕದೆ ಇವರನ್ನು ಬಿಟ್ಟು ಈ ಎಲ್ಲಾ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಪಕ್ಷ ನಿಷ್ಟೆ ತೋರಿದ್ದೆವೇ ವಿನಃ ಸ್ವಾಮಿ ನಿಷ್ಟೆ ಅಲ್ಲ ಎಂಬುವುದು ನೆನೆಪಿರಲಿ” ಎಂದು ನೆನಪಿಸಿದರು.

“ನಾವು ಎಲ್ಲ ಸಮಾಜದ ಹಿಂದೂ ಭಾಂದವರ ಜೊತೆಯಲ್ಲಿ ಪಕ್ಷದ ಸಿದ್ಧಾಂತಕ್ಕೆ ಹೊಂದಿಗೊಂಡಿರುವ ವ್ಯಕ್ತಿಯನ್ನ ಮುಂದಿನ ಎಂ.ಎಲ್.ಎ ಆಗಿ ನಮ್ಮ ಹಕ್ಕನ್ನು ಕೇಳುವುದು ತಪ್ಪೇ? ಪಕ್ಷದ ಟಿಕೆಟ್ ನೀಡುವುದು ಕೆಪಿಸಿಸಿ ಮತ್ತು ಎಐಸಿಸಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಟಿಕೆಟ್ ಕೇಳುವುದು ನಮ್ಮ ಹಕ್ಕು, ನೀವು ಏಕೆ ಪತ್ರಿಕಾಗೋಷ್ಠಿಯಲ್ಲಿ ಕೇಳುತ್ತಿರಿ? ನೀವು ಹೋಗಿ ದೆಹಲಿಯಲ್ಲಿ ಎಐಸಿಸಿಯಲ್ಲಿ ಕೇಳಿ ಸ್ವಾಮಿ, ನಮ್ಮ ಶಕ್ತಿ ಜನ, ಪಕ್ಷದ ಕಾರ್ಯಕರ್ತರು, ಎಲ್ಲ ಸಮಾಜದ ಮುಖಂಡರು. ಅವರ ಬಳಿ ಕೇಳಿ ಅವರ ಆಶೀರ್ವಾದ ಪಡೆದು ಮುಂದಿನ ದಿನದಲ್ಲಿ ಕೆಪಿಸಿಸಿ, ಎಐಸಿಸಿ ಎಲ್ಲಾ ಪಕ್ಷದ ಮುಖಂಡರಲ್ಲಿ ಮನವಿ ಸಲ್ಲಿಸುವುದು ಹಾಗೂ ಹಕ್ಕು ಮಂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಪಕ್ಷದ ನಿರ್ದಾರಕ್ಕೆ ನಾವು ಬದ್ದವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಕಳೆದ ಚುನಾವಣೆಯ ಫಲಿತಾಂಶದ ಒಂದು ಪತ್ರ ಇದರೊಂದಿಗೆ ನೀಡಿರುತ್ತೇವೆ. ತಾವೇ ತೀರ್ಮಾನಿಸಿ ಮಿತ್ರರೇ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ ಎಂದು ತಿಳಿದು ಮುಂದೆ ಹೆಜ್ಜೆಯನ್ನು ಇಡುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಟಿಕೆಟ್ ನಮ್ಮ ಸಮಾಜದ ಹಕ್ಕು: ಮುಸ್ಲಿಂ ಮುಖಂಡರ ತಿರುಗೇಟು

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಅಬ್ದುಲ್ ಘನಿ ತಾಹಿರ್, ಮಕ್ಸೂದ್ಅಲಿಖಾನ್, ಸೈಯದ್ ಶಾಫಿ ಅಹಮದ್, ಎಸ್ ಕೆ ಅಮ್ಜದುಲ್ಲಾ, ನೂರ್ ಅಹ್ಮದ್, ಇನಾಯತ್ ಅಲಿ ಖಾನ್, ಖಾಸಿಂ ಸಾಬ್,‌ ಮೊಹಮದ್ ಸಿರಾಜ್, ಷಾ ನವಾಜ್ ಖಾನ್, ರಿಯಾಜ್ ಅಹ್ಮದ್ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...