ವಿಶ್ವ ಶಾಂತಿಗಾಗಿ ಪ್ರತಿಭಟನೆ ನಡೆಸಿದ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ‘ಯುದ್ಧ ಬೇಡ ಶಾಂತಿ ಬೇಕು’ ಹಾಗೂ ಏರಿಸಿರುವ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, “ಅಮೇರಿಕಾದ ಪ್ರಚೋದನೆಯೊಂದಿಗೆ ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸುತ್ತಿರುವ ಈ ಯುದ್ಧ ಕೇವಲ ಲಾಭಕ್ಕಾಗಿ ನಡೆಯುತ್ತಿದ್ದು, ಯುದ್ಧದಲ್ಲಿ ಅಮಾಯಕ ಜನರು ಬಲಿಯಾಗುತ್ತಿದ್ದಾರೆ ಆದ್ದರಿಂದ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿ ಯುದ್ಧವನ್ನು ನಿಲ್ಲಿಸಬೇಕು” ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಿಪಿಐ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್ ಆವರಗೆರೆ, “ಅಮೆರಿಕಾ, ಇಸ್ರೇಲ್ ದೇಶದ ದುಷ್ಟ ಆಡಳಿತ ವ್ಯವಸ್ಥೆ ಇರಾನ್ ಮತ್ತು ಅಕ್ಕಪಕ್ಕದ ರಾಷ್ಟ್ರಗಳ ಮೇಲೆ ಯುದ್ಧ ಸಾರಿ ಅಮಾಯಕ ಜನರ ಪ್ರಾಣ ಬಲಿದಾನ ತೆಗೆದುಕೊಳ್ಳುವುದರ ಜೊತೆಗೆ ಪೆಟ್ರೋಲ್ ಡೀಸೆಲ್ ಆಯಿಲ್ ಮತ್ತು ಇತರೆ ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಬೆಂಬಲಿಸುವಂತೆ ಜನರ ಮೇಲೆ ದರ ಹೆಚ್ಚಳ ಹೊರಿಸಲಾಗಿದೆ. ಹೆಚ್ಚಿಸಿರುವ ಅಡುಗೆ ಅನಿಲ ಬೆಲೆಯನ್ನು ಕೇಂದ್ರ ಸರ್ಕಾರ ಕೂಡಲೇ ಇಳಿಕೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಂಚಮಸಾಲಿ ಪೀಠ ಲೆಕ್ಕಪತ್ರ ವಿವಾದ: ಆಡಳಿತಾಧಿಕಾರಿಗೆ ಟ್ರಸ್ಟಿಗಳಿಂದ ಜೀವಬೆದರಿಕೆ ಆರೋಪ
ಪ್ರತಿಭಟನೆಯಲ್ಲಿ ಜಿಲ್ಲಾ ಮಂಡಳಿ ಸದಸ್ಯರಾದ ಕಾಂ ಪಿ ಷಣ್ಮುಖಸ್ವಾಮಿ, ಕೆ ಬಾನಪ್ಪ ಮಾತನಾಡಿದರು. ಪಕ್ಷದ ಮುಖಂಡರುಗಳಾದ ಜಿ ಯಲ್ಲಪ್ಪ, ಕೆ ಜಿ ಶಿವಮೂರ್ತಿ, ಕೆರನಹಳ್ಳಿ ರಾಜು, ಎ ತಿಪ್ಪೇಶ್, ಸರೋಜಾ, ಪುಷ್ಪಾ, ಚಿನ್ನಪ್ಪ, ವಿ ಲಕ್ಷ್ಮಣ, ನರೇಗಾ ರಂಗನಾಥ್, ಚಮನಸಾಬ್, ಸುರೇಶ್, ಜಯಣ್ಣ, ಶರಣಪ್ಪ, ಶಿವಕುಮಾರ್ ಶೆಟ್ಟರ್, ಮೌನೇಶ್, ಮರಿಯಪ್ಪ , ರೈಡರ್ ರಂಗನಾಥ, ಜಯಪ್ಪ, ತೋಳಹುಣಸೆ ನಾಗಮ್ಮ, ಪಲವನಹಳ್ಳಿ ಪ್ರಸನ್ನ, ಉಮಾಪತಿ, ಶಿವಮೂರ್ತಿ, ಮೋಹನ್ ಬಡಿಗೇರ ಸುರೇಶ್, ಪಿ ಎಸ್ ಸ್ವಾಮಿ, ರಘು, ವೆಂಕಟೇಶ್, ದಾದಾಪೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.





