ದಾವಣಗೆರೆ ನಗರದ ಎಸ್ಎಸ್ ಮಾಲ್ ಆವರಣದಲ್ಲಿರುವ ಸದರ್ನ್ ಸ್ಟಾರ್ ಹೋಟೇಲ್ನಲ್ಲಿ ಜ.16 ರಿಂದ 19 ರ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ನಿಂದ ವಿಶೇಷ ಚಿನ್ನ, ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದು, ಪ್ರದರ್ಶನವನ್ನು ಶಾಮನೂರು ಶಿವಶಂಕರಪ್ಪ ಕುಟುಂಬದ ಅಂಚಲ್ ಶ್ಯಾಮನೂರು ಹಾಗೂ ಅಖಿಲಾ ಶ್ಯಾಮನೂರು ಶುಕ್ರವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, “ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಶ್ರೀಮಂತ ಇತಿಹಾಸ ಹೊಂದಿರುವ ಬ್ರ್ಯಾಂಡ್ ದಾವಣಗೆರೆಗೆ ತನ್ನ ವಿಶಿಷ್ಟ ಕಲಾತ್ಮಕತೆ, ವಿನ್ಯಾಸಗಳನ್ನು ತರುವುದನ್ನು ನೋಡುವುದು ಸಂತೋಷಕರವಾಗಿದೆ. ಈ ವಿನ್ಯಾಸಗಳು ಕೇವಲ ಸುಂದರವಾದ ಆಭರಣಗಳಲ್ಲ, ಸಂಪ್ರದಾಯ, ಸೌಂದರ್ಯ ಮತ್ತು ಭಾವನೆಗಳಿಗೆ ಜೀವ ತುಂಬಲಿವೆ. ಪ್ರತಿಯೊಂದು ವಿನ್ಯಾಸದಲ್ಲಿನ ಕರಕುಶಲತೆ ಮತ್ತು ಕಾಳಜಿಯನ್ನು ಇಲ್ಲಿನ ಜನರು ಮೆಚ್ಚುವಂತಿವೆ” ಎಂದು ಸಂತೋಷ ವ್ಯಕ್ತಪಡಿಸಿದರು.

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಮುಖ್ಯಸ್ಥ ಶ್ರೀಹರಿ ಮಾತನಾಡಿ “ಆಭರಣಗಳು ಅದ್ಭುತವಾಗಿರುವುದರ ಜೊತೆಗೆ ಅರ್ಥಪೂರ್ಣವಾಗಿರಬೇಕು. ಅದನ್ನು ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಸಾಕಾರಗೊಳಿಸುತ್ತಿದೆ. ಈ ಬಾರಿ ದಾವಣಗೆರೆಯಲ್ಲಿ ಅತ್ಯುತ್ತಮ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹ ಪ್ರದರ್ಶನ ಮತ್ತು ಮಾರಾಟಕ್ಕಿವೆ. ಉತ್ತಮ ರಿಯಾಯಿತಿ ಕೂಡ ಇದ್ದು, ದಾವಣಗೆರೆ ಜನತೆ, ಆಭರಣಪ್ರಿಯರು ಸದುಪಯೋಗ ಪಡೆದುಕೊಳ್ಳಬೇಕು” ಎಂದು ಆಹ್ವಾನ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಳೆದುಕೊಂಡ ಆಭರಣ ಕೆಲವೇ ಗಂಟೆಗಳಲ್ಲಿ ಪತ್ತೆ: ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ
ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಮುಖ್ಯಸ್ಥ ತೇಜಸ್ ಕಲ್ರಾ ಮಾತನಾಡಿ “ದಾವಣಗೆರೆಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ, ಉತ್ತಮ ಕಲಾತ್ಮಕ, ಪರಂಪರೆಯ ಪ್ರದರ್ಶನವಾಗಿದೆ. 155 ವರ್ಷಗಳಷ್ಟು ಹಳೆಯ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ವಿನ್ಯಾಸವನ್ನು ಹೇಗೆ ರೂಪಿಸುತ್ತಿದೆ ಎನ್ನುವುದನ್ನು ತಿಳಿಯಬಹುದು” ಎಂದು ಹೇಳಿದರು.





