ಮನೆಗೆ ಹಿಂದಿರುಗಿ ಬರುವಾಗ ಅಕಸ್ಮಾತಾಗಿ ಕಳೆದುಕೊಂಡಿದ್ದ ಬಂಗಾರ & ಬೆಳ್ಳಿ ಆಭರಣಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ದಾವಣಗೆರೆ ನಗರದ ಬಸವನಗರ ಠಾಣೆಯ ಪೊಲೀಸರು ವಾರಸುದಾರರಿಗೆ ಹಿಂತಿರುಗಿಸಿದ್ದು ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ದಾವಣಗೆರೆ ಜಾಲಿನಗರದ ನಿವಾಸಿ ಹೈದರಅಲಿ 2026, ಜನವರಿ 12ರಂದು ಬೆಳಿಗ್ಗೆ ಸುಮಾರು 11-15 ಗಂಟೆಗೆ ಮೋಟರ್ ಬೈಕಿನಲ್ಲಿ ಮನೆಗೆ ಹೋಗುತ್ತಿರುವಾಗ ತಮ್ಮ ವೆನಿಟಿ ಬ್ಯಾಗ್, ಅದರಲ್ಲಿದ್ದ ಬಂಗಾರದ ಹ್ಯಾಂಗಿಂಗ್, ಮಾಂಗಲ್ಯ ಸರ, 2 ಒಂದು ಹಸಿರು ಮಣಿಯ ಲಾಕೆಟ್ ಸರ ಸೇರಿ ಒಟ್ಟು ಸುಮಾರು 30 ಗ್ರಾಂ ಬಂಗಾರ, ಬೆಳ್ಳಿಯ 100 ಗ್ರಾಂ ಇರುವ ಒಂದು ಸೊಂಟದ ಚೈನ್, ಗುಂಡು ಹಾಗು ಒಂದು ವಿವೋ ಮೊಬೈಲ್ ಫೋನ್ ರಸ್ತೆಯಲ್ಲಿ ಕಳೆದುಕೊಂಡಿದ್ದರು. ಕೂಡಲೇ ಬಸವನಗರ ಪೊಲೀಸ್ ಠಾಣೆಗೆ ಬಂದು ಕಳೆದುಕೊಂಡ ಸ್ವತ್ತಿನ ವಿವರ ಬಗ್ಗೆ ತಿಳಿಸಿ ಪತ್ತೆ ಮಾಡಿಕೊಡುವ ಬಗ್ಗೆ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಉಪಚುನಾವಣೆ;ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್: ಅಲ್ಪಸಂಖ್ಯಾತರ ವಿಭಾಗ ಒತ್ತಾಯ
ಮನವಿ ಸ್ವೀಕರಿಸಿದ ಕೂಡಲೇ ಕಾರ್ಯ ಪ್ರವೃತ್ತರಾದ ಬಸವನಗರ ಠಾಣೆಯ ಪಿಎಸ್ಐ ಪ್ರಮೀಳಮ್ಮ ಮತ್ತು ಸಿಬ್ಬಂದಿ ಫಕೃದ್ದೀನ್ ರವರು ದೂರುದಾರರ ಮಾಹಿತಿ ಆದರಿಸಿ ಕೂಡಲೇ ಕಾರ್ಯ ಪ್ರವೃತ್ತರಾಗಿ ದೂರುದಾರರು ಕಳೆದುಕೊಂಡಿದ್ದ ಮೇಲ್ಕಂಡ ವಸ್ತುಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಶಂಸಿಸಿದ್ದು, ಸಾರ್ವಜನಿಕರಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದೆ.





