ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ 2026 ಅಂಗವಾಗಿ ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ರಸ್ತೆ ಸುರಕ್ಷತೆ ಸಂಚಾರ ನಿಯಮಗಳ ಪಾಲನೆ ಮಾಡುವ ಬಗ್ಗೆ ಹಾಗೂ ವಿಶೇಷವಾಗಿ ಇಂದು ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಮೂಡಿಸಲು ದಾವಣಗೆರೆ ನಗರದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ನೇತೃತ್ವದಲ್ಲಿ ಬೈಕ್ ಜಾಥಾವನ್ನು ಆಯೋಜಿಸಲಾಗಿತ್ತು.

ರಸ್ತೆ ಸುರಕ್ಷತಾ ಜಾಗೃತಿ ಬೈಕ್ ಜಾಥವು ನಗರದ ಜಯದೇವ ವೃತ್ತದಿಂದ ಆರಂಭವಾಗಿ ಲಾಯರ್ ರಸ್ತೆ- ಈರುಳ್ಳಿ ಮಾರ್ಕೇಟ್ ರಸ್ತೆ- ಬಂಬೂಬಜಾರ್- ವೆಂಕಟೇಶ್ವರ ವೃತ್ತ- ಅರಳಿಮರ ವೃತ್ತ- ಹಳೇಬೇತೂರು ರಸ್ತೆ- ಹಗೆದಿಬ್ಬ ವೃತ್ತ –ದುರ್ಗಾಂಬಿಕಾ ದೇವಾಸ್ಥಾನ- ಹೊಂಡದ ವೃತ್ತ- ಅರುಣ ವೃತ್ತ ಪಿಬಿ ರಸ್ತೆ- ವಿನೋಬಾ ನಗರ 2 ನೇ ಮುಖ್ಯ ರಸ್ತೆ- ಶಾಮನೂರು ರಸ್ತೆ – ಭಾಪೂಜಿ ಸ್ಕೂಲ್ – ಬಿ ಐ ಇ ಟಿ ರಸ್ತೆ- ನೂತನ್ ಕಾಲೇಜ್ ರಸ್ತೆ- ಕಾಫಿ ಡೇ ವೃತ್ತ- ಡೆಂಟಲ್ ಕಾಲೇಜ್ ರಸ್ತೆ- ಶಾಮನೂರು ರಸ್ತೆ- ರಿಂಗ್ ರಸ್ತೆ- ಸಂಗೊಳ್ಳಿ ರಾಯಣ್ಣ ವೃತ್ತ ಮೂಲಕ ಜಿಲ್ಲಾ ಪೊಲೀಸ್ ಕಛೇರಿಗೆ ಆಗಮಿಸಿ ಮುಕ್ತಾಯವಾಯಿತು.

ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಸಿರು ನಿಶಾನೆ ತೋರುವ ಮೂಲಕ ಬೈಕ್ ಜಾಥಕ್ಕೆ ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಉಪಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಸಿಗುವುದೇ ರಾಜಕೀಯ, ಸಾಮಾಜಿಕ ನ್ಯಾಯ?
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾ ರವರು, ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ, ಪೊಲೀಸ್ ನಿರೀಕ್ಷಕರುಗಳಾದ ಮಂಜುನಾಥ, ವಸಂತ್ ಪಿ ಎಸ್ ಐ ರವರುಗಳಾದ ಶ್ರೀಮತಿ ಶೈಲಜಾ, ಶ್ರೀಮತಿ ಪ್ರಮೀಳಮ್ಮ, ಮಹಾದೇವ ಭತ್ತೆ, ಶ್ರೀಮತಿ ಶಕುಂತಲಾ, ಶ್ರೀಮತಿ ಜಯಶೀಲ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಬೈಕ್ ಜಾಥದಲ್ಲಿ ಭಾಗವಹಿಸಿದ್ದರು.





