ಕರ್ನಾಟಕ ರಾಜ್ಯ ಸರ್ಕಾರದ 2026 27ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಒತ್ತಡ ನಿವಾರಿಸಿ ಅವರ ಮಾನಸಿಕ ಆರೋಗ್ಯ ಸುಧಾರಿಸಲು ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿಗೆ ನಿರ್ಧರಿಸಿರುವುದನ್ನು ಕರ್ನಾಟಕ ರಾಜ್ಯ ಸೋಷಿಯಲ್ ವರ್ಕರ್ ವೆಲ್ ಫೇರ್ ಅಸೋಸಿಯೆಷನ್ ರಾಜ್ಯ ಸಮಿತಿ ಅಧ್ಯಕ್ಷ ಎಂ ಸಂತೋಷ್ ಕುಮಾರ್ ದಾವಣಗೆರೆಯಲ್ಲಿ ಸ್ವಾಗತಿಸಿದ್ದಾರೆ.

“ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಬಜೆಟ್ ನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ನವರು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲಿನ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರತಿ ಕೇಂದ್ರಗಳಲ್ಲಿ ಒಬ್ಬ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಕಾತಿ ಮಾಡಿಕೊಳ್ಳಲು ಬಜೆಟ್ ನಲ್ಲಿ ಮಂಡಿಸಿರುವುದಕ್ಕೆ ಕರ್ನಾಟಕ ರಾಜ್ಯ ಪ್ರೋಫೇಷನಲ್ ಸೋಷಿಯಲ್ ವರ್ಕರ್ ವೆಲ್ ಫೇರ್ ಅಸೋಸಿಯೆಷನ್ ರಾಜ್ಯ ಸಮಿತಿಯು ಸ್ವಾಗತಿಸಿದೆ ಮತ್ತು ಮಾನ್ಯ ಮುಖ್ಯ ಮಂತ್ರಿಗಳಿಗೆ ಅಭಿನಂದನೆಯನ್ನು ತಿಳಿಸುತ್ತದೆ” ಎಂದು ಅಸೋಸಿಯೆಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಸಂತೋಷ್ ಕುಮಾರ್ ಎಂ ರವರು ಪತ್ರಿಕೆ ಹೇಳಿಕೆ ಮೂಲಕ ತಿಳಿಸಿದ್ದಾರೆ.
ದಾವಣಗೆರೆ ಬಂದ್ | ಒಳಮೀಸಲಾತಿಯಿಲ್ಲದೆ ನೇಮಕಾತಿ ಬೇಡ: ಗೊಂದಲ ಪರಿಹಾರಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಈ ಸುದ್ದಿ ಓದಿದ್ದೀರಾ?
ಈ ನೇಮಕಾತಿಗಾಗಿ ಕಳೆದ ಒಂದು ವರ್ಷಗಳಿಂದಲೂ ಕೂಡ ರಾಜ್ಯ ಸಮಿತಿ ಎಲ್ಲಾ ಜಿಲ್ಲಾ ಸಮಿತಿ ವತಿಯಿಂದ ಕೂಡ ಎಲ್ಲಾ ಜಿಲ್ಲೆಯಲ್ಲಿ ಪ್ರೌಢ ಶಾಲಾ ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಎಂ. ಎಸ್. ಡಬ್ಲ್ಯೂ ಸ್ನಾತಕೋತ್ತರ ಪದವೀಧರ ಸಾಮಾಜಿಕ ಕಾರ್ಯಕರ್ತರನ್ನು ಮಾನಸಿಕ ಆರೋಗ್ಯ ಸಲಹೆಗರಾರನ್ನಾಗಿ ನೇಮಿಸಲು ನ್ಯಾಯಾಲಯದ ಮೂಲಕ ಹಾಗೂ ಶಾಸಕರುಗಳಿಗೆ, ಶಿಕ್ಷಣ ಸಚಿವರುಗಳಿಗೆ, ಸಂಸದರಿಗೆ, ಆಯುಕ್ತರುಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ, ಪತ್ರ ಚಳುವಳಿಯ ಮೂಲಕ ಮಾಡಿದ ಹೋರಾಟ ಮಾಡಲಾಗಿದ್ದು, ಈ ನಿರ್ಧಾರ ಹೋರಾಟದ ಫಲವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.





