ನರಗುಂದ, ನವಲಗುಂದ ಹೋರಾಟದ ರೈತ ಹುತಾತ್ಮರ ಸ್ಮರಣೆ ಮತ್ತು ದೇವನಹಳ್ಳಿ ರೈತರ ಭೂಸ್ವಾಧೀನ ಕೈ ಬಿಟ್ಟದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ವಿಜಯೋತ್ಸವವನ್ನು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ರೈತ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿ (ಎಸ್ ಕೆ ಎಂ) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಆಚರಣೆ ಮಾಡಲಾಯಿತು.

ನರಗುಂದ, ನವಲಗುಂದ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣೆ ಮಾಡಿ, ಕಳೆದ ಮೂರು ವರ್ಷಗಳಿಂದ ರೈತರು ತಮ್ಮ ಜಮೀನುಗಳನ್ನು ಕೊಡುವುದಿಲ್ಲ ಎಂದು ಹೋರಾಟ ಮಾಡಿದ ಬೆಂಗಳೂರು ಜಿಲ್ಲೆಯ ದೇವನಹಳ್ಳಿ ರೈತರ ಜಮೀನುಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸಿ ವಶಪಡಿಸಿಕೊಳ್ಳುವುದನ್ನು ಕೈಬಿಟ್ಟದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಬಹಿರಂಗ ಸಭೆಯಲ್ಲಿ ಮುಖಂಡರು ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, “ಸುಮಾರು ಮೂರುವರೆ ವರ್ಷಗಳ ನಿರಂತರ ಹೋರಾಟದಿಂದ ದೇವನಹಳ್ಳಿ ರೈತರು ತಮ್ಮ ಭೂಮಿ ಜಮೀನುಗಳನ್ನು ಉಳಿಸಿಕೊಂಡಿದ್ದಾರೆ. ನಿರಂತರ ಹೋರಾಟ ನೆಡೆಸುವುದು ಸಾಮಾನ್ಯವಲ್ಲ. ಮಳೆ, ಬಿಸಿಲು ಗಾಳಿಗೆ ಹೆದರದೆ ನಿರಂತರ ಹೋರಾಟಕ್ಕೆ 1777 ಎಕರೆ ಭೂಸ್ವಾಧೀನ ಕೈಬಿಟ್ಟು ಅಭಿನಂದನೆಗೆ ಅರ್ಹವಾಗಿದೆ. ಈ ಕಾರಣದಿಂದ ದೇವನಹಳ್ಳಿ ರೈತರು ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಎಸ್ ಕೆ ಎಂ ಸಂಚಾಲಕ ಹೆಚ್ ಜಿ ಉಮೇಶ್, ಆನಂದ ರಾಜ್, ಬುಳ್ಳಾಪುರದ ಹನುಮಂತಪ್ಪ, ಆವರೆಗೆರೆ ಚಂದ್ರು, ಈ ಶ್ರೀನಿವಾಸ್, ಸತೀಶ್ ಅರವಿಂದ್, ಜಬೀನ ಖಾನಂ ರವರು ಅಭಿನಂದನೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರತ್ಯೇಕ ಲಿಂಗಾಯತ ಧರ್ಮ ಬೆಂಬಲಿಸಿ, ಅವರ ಮೇಲೆಯೇ ಈ ಸರ್ಕಾರ ಲಾಠಿ ಪ್ರಹಾರ ನೆಡೆಸಿದೆ;ರಂಭಾಪುರಿ ಶ್ರೀ
ವಿಜಯೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಸಂಘಟನೆಗಳ ಮುಖಂಡರುಗಳಾದ ಜಿ ಯಲ್ಲಪ್ಪ, ಭರಮಪ್ಪ, ಶ್ರೀನಿವಾಸಮೂರ್ತಿ, ಸರೋಜ, ನರೇಗಾ ರಂಗನಾಥ್, ಸಿ ರಮೇಶ್ ದಾಸರ, ಶಿರಿನ್, ಕೆರನಹಳ್ಳಿ ರಾಜು, ಮೊದಲ ಹದಡಿ ಸುರೇಶ್, ನಾಗಮ್ಮ, ಮಲ್ಲಶೆಟ್ಟಿಹಳ್ಳಿ ಹನುಮೇಶ್, ಪವಿತ್ರ, ಚಿಕ್ಕನಹಳ್ಳಿ ಸದಾನಂದ ಸೇರಿದಂತೆ ರೈತ ಮುಖಂಡರುಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.





