ವೀರಶೈವ – ಲಿಂಗಾಯತ ಸಮುದಾಯ ಒಗ್ಗೂಡಿಸುವುದು ನಮ್ಮ ಗುರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Date:

ಒಳಪಂಗಡಗಳು ಒಂದಾಗ ಬೇಕು. ಎಲ್ಲಿಯವರೆಗೆ ಒಳಪಂಡಗದಲ್ಲಿ ರಕ್ತ ಸಂಬಂಧ ಬೆಳೆಸುವುದಿಲ್ಲವೋ, ಅಲ್ಲಿಯವರೆಗೆ ಒಂದಾಗಲು ಸಾಧ್ಯವಿಲ್ಲ. ಒಳಪಂಗಡಗಳಲ್ಲಿ ಸಂಬಂಧ ಬೆಳೆಸಿದಾಗ ಸಮಾಜ ಬಲಿಷ್ಠವಾಗಲು ಸಾಧ್ಯ. ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುವುದು ನಮ್ಮ ಗುರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಅವರು ಮಾತನಾಡಿದರು. “ವೀರಶೈವ ಲಿಂಗಾಯತ ಸಮಾಜ ಕರ್ನಾಟಕದಲ್ಲಿ ಬಲಿಷ್ಟವಾಗಿದೆ. ಮಾತ್ರವಲ್ಲ ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಲಿಂಗಾಯತರಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಜನ ಒಳ ಪಂಗಡಗಳಲ್ಲಿ ವಿವಾಹ ಸಂಬಂಧ ಬೆಸೆಯಬೇಕು. ಆಗ ಮಾತ್ರ ಸಮುದಾಯ ಸಂಘಟನೆ ಸಾಧ್ಯ” ಎಂದರು.

“ವೀರಶೈವ ಲಿಂಗಾಯಿತರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಈ ಬಗ್ಗೆ ಒಂದು ಆಂದೋಲನದ ರೀತಿಯಲ್ಲಿ ಹೋರಾಟ ಮಾಡಬೇಕು. ಎಲ್ಲ ಪಂಗಡಗಳು ಸೇರಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ದೇಶದಲ್ಲಿ ಜಾತಿ ಸಮೀಕ್ಷೆ ಬಗ್ಗೆ ಚರ್ಚೆ ನಡೆಯುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಜನ ಸಂಖ್ಯೆ ಎಷ್ಟು ಇದೆ. ಶೈಕ್ಷಣಿಕ ಪ್ರಗತಿ ಎಷ್ಟಿದೆ ಸಾಮಾಜಿಕ ಸ್ಥಿತಿ ಹೇಗಿದೆ. ಇದರ ಬಗ್ಗೆ ಅಧ್ಯಯನ ಬೇಕಿದೆ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಬೇಕಿದೆ. ಬಸವಣ್ಣನವರು ನೀಡಿದ ಸಂದೇಶವನ್ನು ನಾವೆಲ್ಲರೂ ಪಾಲನೆ ಮಾಡೋಣ” ಎಂದು ಕರೆ ಕೊಟ್ಟರು.

ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, “ಅಖಿಲ ಭಾರತ ವೀರಶೈವ ಮಹಾಸಭಾ ರಚಿಸಿ, ಎಲ್ಲ ವೀರಶೈವರನ್ನು ಒಂದೆಡೆ ಮಾಡಿದ ಮಹಾನ್ ವ್ಯಕ್ತಿ ಹಾನಗಲ್ ಕುಮಾರಸ್ವಾಮಿಗಳು. ಈ ಸಮಾಜಕ್ಕೆ ದಿಕ್ಕೂಚಿ ಕೊಡಬೇಕಾಗಿಲ್ಲ. ಎಲ್ಲರಿಗೂ ಕೂಡ ಅದರ ಅರಿವಿದೆ. ಆದರೆ, ಆಚರಣೆ ಇಲ್ಲ. ಆಚರಣೆಗೆ ಬಾರದ ಕಾರಣ ಸಮಾಜ ದುರ್ಬಲವಾಗಿದೆ” ಎಂದು ತಿಳಿಸಿದರು.

“ಸರ್ವಜ್ಞನ ಪ್ರಕಾರ ಸಮಾಜದಲ್ಲಿ 3 ಜನ ಶತ್ರುಗಳಿದ್ದಾರೆ – ಬುದ್ದಿ ಕಲಿಸದ ತಂದೆ, ತಿದ್ದಿ ಕಲಿಸದ ಗುರು, ಬಿದ್ದರೂ ಎತ್ತದ ತಾಯಿ – ಈ ಮೂವರು ಸಮಾಜದ ಪಾಲಿಗೆ ಶತ್ರುಗಳು. ಸಮಾಜ ದಿಕ್ಕುತಪ್ಪಿ ಹೋಗುವಾಗ ಸಮಾಜಕ್ಕೆ ಬುದ್ದಿ ಹೇಳದ ಮಠಾಧಿಪತಿಗಳು ಸಹ ಶತ್ರುಗಳೇ, ಸಮಾಜದಲ್ಲಿ ಏನಾದರೂ ನೇರವಾಗಿ ಹೇಳಿದರೆ ತಿಳಿದುಕೊಳ್ಳುವುದಿಲ್ಲ. ಮುಚ್ಚಿ ಹೇಳಿದರೆ ಅರ್ಥ ಆಗುವುದಿಲ್ಲ. ನೇರವಾದ ಮಾತುಗಳನ್ನು ಮಠಾಧೀಪತಿಗಳೇ ಹೇಳ ಬೇಕು. ಇಲ್ಲವಾದಲ್ಲಿ ಸಮಾಜ ದಾರಿ ತಪ್ಪಿ ಹೋಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ?: ಮೋದಿ- ಅಮಿತ್‌ ಶಾ ಲೂಟಿ ಮಾಡುವ ಜೋಡೆತ್ತುಗಳು: ಮುಖ್ಯಮಂತ್ರಿ ಚಂದ್ರು

“ಹಾನಗಲ್ಲ ಕುಮಾರಸ್ವಾಮಿಗಳನ್ನು ನಾವು ಮಾದರಿಯನ್ನಾಗಿ ಇಟ್ಟುಕೊಂಡರೆ ನಾವು ಸಮಾಜ ಕಟ್ಟುವುದು ಹೇಗೆಂದು ತಿಳಿದುಕೊಳ್ಳಬಹುದು. ಅವರು ಮಠಮುಖಿ ಸ್ವಾಮಿಗಳಾಗಲಿಲ್ಲ. ಸಮಾಜಮುಖಿ ಸ್ವಾಮಿಗಳಾದರು. ಇನ್ನೂ ನಾವುಗಳು ಮಠಮುಖಿ ಸ್ವಾಮಿಗಳಾಗಿದ್ದು, ಸಮಾಜ ಮುಖಿ ಸ್ವಾಮಿಗಳಾಗಬೇಕು. ಸಮಾಜ ಬೆಳೆಸುವ ಉದ್ದೇಶದಿಂದ ನಾವು ಮುಂದೆ ಬರಬೇಕು. ಇನ್ನು ರಾಜಕೀಯ ನಾಯಕರು ಸಮಾಜಮುಖಿ ಆಗದೇ ಪಕ್ಷಮುಖಿ ಆಗಿದ್ದಾರೆ. ಅವರಿಗೆ ಸಮಾಜ ಬೇಕಾಗಿಲ್ಲ. ಪಕ್ಷ ಮುಖಿ ಆಗಿದ್ದಾರೆ. ಪಕ್ಷದ ಮೇಲೆ ಇರುವ ಅಭಿಮಾನ ಶೇ.50ರಷ್ಟು ಸಮಾಜದ ಮೇಲೆ ಇದ್ದಿದ್ದರೆ ಇಂದಿನ ಮೈದಾನ ತುಂಬಿ ತುಳುಕುತ್ತಿತ್ತು. 75 ಜನ ಲಿಂಗಾಯುತ ಶಾಸಕರಿದ್ದರೂ ಈ ಮೈದಾನ ತುಂಬಿಲ್ಲ ಇದು ನಮ್ಮ ಸಮಾಜಕ್ಕೆ ಆಗಬೇಕಾದ ಅವಮಾನ” ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಹಲವು ಶಾಸಕರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...