ಮನರೇಗಾ ಕೂಲಿ ಕೆಲಸಗಾರರ ಹಾಜರಾತಿಯನ್ನು ನೋಂದಣಿ ಮಾಡುವುದಕ್ಕೆ ಸ್ಥಳಕ್ಕೆ ಬಾರದೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ದೇವದುರ್ಗ ತಾಲೂಕು ಬಿ ಗಣೇಕಲ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಯ್ಯ ಸ್ವಾಮಿ ಅವರ ವಿರುದ್ಧ ಪ್ರತಿಭಟನೆ ನಡೆಸಿರುವ ಕೂಲಿಕಾರರು ಅವರ ಅಮಾನತಿಗೆ ಆಗ್ರಹಿಸಿದರು.
ಕೂಲಿಕಾರರು ಎರಡು ದಿನ ಕೆಲಸ ನಿರ್ವಹಿಸಿದರೂ.. ಪಿಡಿಒ ಸ್ಥಳಕ್ಕೆ ಬಂದು ಹಾಜರಾತಿ ಪಡೆಯದೆ ಬೇಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಶ್ನಿಸಿದರೆ ಪೊಲೀಸರ ಮೂಲಕ ಬೆದರಿಕೆ ಹಾಕಿಸುತ್ತಾರೆ. ಪಂಚಾಯತ್ ಕಚೇರಿಗೆ ಸರಿಯಾದ ಸಮಯಕ್ಕೆ ಬರಲ್ಲ ಹಾಗೂ ತಮಗೆ ಮನಸ್ಸಿಗೆ ಬಂದಾಗ ಪಂಚಾಯತ್ ಕಚೇರಿಗೆ ಹಾಜರಾಗುತ್ತಾರೆ. ಕೂಲಿ ಮಾಡುವವರಿಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಡಿಒ ಶರಣಯ್ಯ ಸ್ವಾಮಿ ಮಧ್ಯಪ್ರವೇಶಿಸಿ, ʼದಾಖಲಾತಿ ನೋಂದಣಿ ಮಾಡಲಾಗುತ್ತದೆʼ ಎಂದು ಆಶ್ವಾಸನೆ ನೀಡಿದ ಬಳಿಕ ಜನ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಉಸ್ಮಾನ್ ದೇವತ್ಕಲ್, ಹನುಮಂತರಾಯ, ಹೆಚ್ ಎಸ್ ನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: ರಾಯಚೂರು | ದೇವದುರ್ಗ ನಗರದಲ್ಲಿ ಉರಿಯದ ವಿದ್ಯುತ್ ದೀಪ; ಜನರಿಗೆ ಸಂಕಟ





