ಯುವತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರು ಯುವಕರು ಚಾಕು ಇರಿದು ಗಲಾಟೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಗ್ಲೋಬಲ್ ಕಾಲೇಜು ಬಳಿ ನವೆಂಬರ್ 10ರ ರಾತ್ರಿ ನಡೆದಿದೆ.
ಚಾಕು ಇರಿತಕ್ಕೊಳಗಾದವರನ್ನು ಅಭಿಷೇಕ ಬಂಡಿವಡ್ಡರ ಹಾಗೂ ಮಾರುತಿ ಬಂಡಿವಡ್ಡರ ಎಂದು ಗುರುತಿಸಲಾಗಿದ್ದು, ಇಬ್ಬರೂ ದೇಶಪಾಂಡೆ ನಗರದ ನಿವಾಸಿಗಳಾಗಿದ್ದಾರೆ. ಮಣಿಕಂಠ ಮತ್ತು ಅವನ ಸ್ನೇಹಿತರು ಈ ದಾಳಿಗೆ ಕಾರಣರಾಗಿದ್ಫು, ಪವನ್ ಮತ್ತು ಮಣಿಕಂಠ ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಹಿಂದಿನಿಂದಲೇ ವೈಮನಸ್ಸು ಇತ್ತು ಎನ್ನಲಾಗಿದೆ.
ನವೆಂಬರ್ 10ರಂದು ಮಣಿಕಂಠನ ಹುಟ್ಟುಹಬ್ಬದ ನಿಮಿತ್ತ ಪವನನನ್ನು ಕರೆಸಿಕೊಂಡಿದ್ದಾಗ, ಪವನ್ ತನ್ನ ಸ್ನೇಹಿತರಾದ ಅಭಿಷೇಕ ಮತ್ತು ಮಾರುತಿಯನ್ನು ಜೊತೆಗೆ ಕರೆದೋಯ್ದಿದ್ದಾನೆ. ಇದೇ ವೇಳೆ ವಾಗ್ವಾದ ನಡೆದು ಮಣಿಕಂಠ ಮತ್ತು ಅವನ ಸ್ನೇಹಿತರು ಚಾಕುವಿನಿಂದ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ ಧಾರವಾಡ | ವಾಟ್ಸಾಪ್’ಗಳು ಸುಳ್ಳು ಹರಡುವ ಫ್ಯಾಕ್ಟರಿಗಳಾಗಿವೆ: ಡಾ. ವೆಂಕನಗೌಡ ಪಾಟೀಲ್
ಗಾಯಾಳು ಅಭಿಷೇಕ ಮತ್ತು ಮಾರುತಿಯನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆಗೆ ಭೆಟ್ಟಿ ನೀಡಿದ್ದಾರೆ.





