ಧಾರವಾಡ | ಇಂದೋ-ನಾಳೆಯೋ ಬೀಳುವಂತಿರುವ ಮನೆ: ಈ ಕುಟುಂಬಕ್ಕೆ ಬೇಕಿದೆ ಸರ್ಕಾರದ ಸಹಾಯಹಸ್ತ

Date:

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ದೊಡ್ಡ ಗ್ರಾಮವಾಗಿದೆ. ಸಬಲರಾಗಿ ಸಂಖ್ಯೆ ಬಹು ಸಂಖ್ಯೆಯ ಜನರಿದ್ದರೂ ಕೂಡ ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯೂ ಕಾಣಸಿಗುತ್ತದೆ.

ಸರ್ಕಾರದ ಯೋಜನೆಗಳ ಫಲ ತೆಗೆದುಕೊಳ್ಳುವಲ್ಲಿ ಉಳ್ಳವರೇ ಎತ್ತಿದ ಕೈ ಎಂದರೂ ತಪ್ಪಾಗದು. ಆರ್ಥಿಕವಾಗಿ ಮುಂದಿರುವವರಿಗೇ ಸರ್ಕಾರದ ಯೋಜನೆಗಳು ಲಾಭ ಸಿಗುತ್ತವೆಯೊ? ಏನೋ ಅನಿಸುತ್ತದೆ ಎಂದು ಸ್ಥಳೀಯ ಹಿರಿಯರೊಬ್ಬರು ಮಾತನಾಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಮೊರಬ ಗ್ರಾಮದ ನಿವಾಸಿ ಮಹಾದೇವಿ ಮರೆಪ್ಪ ಕಾಳೆ. ಇವರಿಗೆ ವಯಸ್ಸು ಸುಮಾರು 70ರ ಆಸುಪಾಸು. ಕಳೆದ 25 ವರ್ಷಗಳಿಂದ ಕುಸಿದು ಬೀಳುವ ಹಂತದಲ್ಲಿರುವ ಹಂಚಿನ‌ ಮನೆಯಲ್ಲಿಯೇ ಮಗ, ಸೊಸೆ, ಮೊಮ್ಮಕ್ಕಳು ಸೇರಿ ಒಟ್ಟು 5 ಜನ ವಾಸವಾಗಿದ್ದಾರೆ.

WhatsApp Image 2024 09 06 at 8.06.32 PM 1 1

ನವಲಗುಂದ ತಾಲೂಕು ಮೊರಬ ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಾಸವಿರುವ ಇವರ ಮನೆ ಪಕ್ಕದಲ್ಲೇ ದೊಡ್ಡ ಚರಂಡಿ ಹೊಂದಿಕೊಂಡಿರುವ ಕಾರಣ, ನೆರೆ ಬಂದಾಗ ನೀರು ಮನೆಯೊಳಗೆ ಬರುತ್ತದೆ. ಪರಿಣಾಮ ಕೊಳಚೆ ನೀರು ಈ ಪ್ರದೇಶವನ್ನೆಲ್ಲಾ ತುಂಬಿಕೊಳ್ಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೋತು ಬಿದ್ದಿರುವ ಮೇಲ್ಛಾವಣಿ. ಕುಸಿಯುವ ಸ್ಥಿತಿಯಲ್ಲಿರುವ ಗೋಡೆಗಳು. ಒಡೆದುಹೋದ ಹಂಚುಗಳು. ಮನೆಯಲ್ಲಿ‌ ಕಾಲಿಟ್ಟರೆ ಬೇಸಿಗೆಯಲ್ಲೂ ಝುಣು ಝುಣು ಎನ್ನುವಂತಿರುವ, ಸಗಣಿ ಸಾರಿಸಿರುವ ನೆಲ. ಭಯದ ವಾತಾವರಣದಲ್ಲೇ ಮನೆಯಲ್ಲಿ ಬದುಕುವ ಪರಿಸ್ಥಿತಿ ಈ ಕುಟುಂಬಸ್ಥರಿಗೆ ಎದುರಾಗಿದೆ.

“ಕಳೆದ ವರ್ಷ ನಮ್ಮ ಮನೆಯ ಸಮಸ್ಯೆಯ ಕುರಿತು ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಓ ಅವರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಸತತ ಮೂರು ವರ್ಷಗಳ ಕಾಲ ಮಳೆಗಾಲದಲ್ಲಿ ನೆರೆ ಬಂದಾಗಲೂ ಒಂದು ರೂಪಾಯಿ ಸಹಿತ ನಮಗೆ ಪರಿಹಾರ ಸಿಕ್ಕಿಲ್ಲ. ಮನೆ ಇವತ್ತೊ-ನಾಳೆ ಬೀಳುವ ಸ್ಥಿತಿಯಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಶಿವಾ ಎಂದು ಸಾಯುವುದೊಂದೇ ದಾರಿ” ಎನ್ನುತ್ತಿದ್ದಾರೆ ಹಿರಿಯ ಜೀವ ಮಹಾದೇವಿ ಕಾಳೆ.

WhatsApp Image 2024 09 06 at 8.06.32 PM 1

ಈ ಬಗ್ಗೆ ಡಿಎಸ್ಎಸ್ ಸಂಚಾಲಕ ನಾಗರಾಜ ಕಾಳೆ ಮಾತನಾಡಿ, ಪದೇ ಪದೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಬಹುತೇಕವಾಗಿ ಶಿಥಿಲಗೊಳ್ಳದ ಮನೆಗಳಿಗೆ ಪರಿಹಾರ ದೊರಕಿದೆ. ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳಿಗೆ ಯಾವ ಪರಿಹಾರವೂ ದೊರೆತಿಲ್ಲ. ಮನುಷ್ಯರು ಬದುಕಿದ್ದಾಗಲೇ ಗಮಹರಿಸಿ ಪರಿಹಾರ ಕೊಡಬೇಕೆ ಹೊರತು ಸತ್ತಮೇಲೆ ಕೊಡುವುದಲ್ಲ. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವಾಗಿದೆ” ಎಂದು ದೂರಿದರು.

ಪರಿಹಾರ ದೊರಕಿಸಿ ಕೊಡುವ ಭರವಸೆ ಕೊಡುತ್ತಾರೆ. ಪರಿಹಾರಕ್ಕಾಗಿ ಅಧಿಕಾರಿ, ರಾಜಕಾರಣಿಗಳ ಕಾಲು ಬೀಳುವುದೂ ಆಗಿದೆ. ಆದರೂ ನಮ್ಮನ್ನು ಯಾರೂ ಗಮನಿಸುತ್ತಿಲ್ಲ. ನಮಗೆ ಮನೆ ಕಟ್ಟಿಸಿಕೊಟ್ಟರೆ ಸರ್ಕಾರಕ್ಕೆ ಪುಣ್ಯ ಬರುತ್ತದೆ. ಒಂದು ವೇಳೆ ಯಾರೂ ಸ್ಪಂದಿಸದೆ ಹೋದರೆ, ಮನೆ ಬಿದ್ದರೆ ದೇವರೇ ಗತಿ ಎನ್ನುತ್ತಾರೆ ಮನೆ ಯಜಮಾನಿ ಲಕ್ಷ್ಮವ್ವ.

ಈ ಸುದ್ಧಿ ಓದಿದ್ದೀರಾ ಧಾರವಾಡ | ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ: ಗ್ರಾಮಸ್ಥರ ಆಕ್ರೋಶ

ಇವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿ ನೊಂದ ಕುಟುಂಬಸ್ಥರಿಗೆ ಸೂರುಕಲ್ಪಿಸಿ ಆಸರೆ ಆಗಬೇಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...