ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 14ರಂದು 1 ರಿಂದ 10 ನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ‘ಚಿತ್ರಕಲಾ ಸ್ಪರ್ಧೆ’ ಯನ್ನು ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದ್ದಾರೆ.
ಸೂಚನೆಗಳು:
1 ರಿಂದ 4ನೇ ತರಗತಿಯ ಮಕ್ಕಳು ‘ಪರಿಸರ’, 5 ರಿಂದ 7ನೇ ತರಗತಿಯ ಮಕ್ಕಳು ‘ಸಾಹಿತಿಗಳು ಅಥವಾ ಹೋರಾಟಗಾರರು’ ಮತ್ತು 8 ರಿಂದ 10ನೇ ತರಗತಿ ಮಕ್ಕಳು ‘ಕರ್ನಾಟಕ ಪ್ರೇಕ್ಷಣಿಯ ಸ್ಥಳಗಳು’ (ಉದಾ: ಹಂಪಿ, ಪಟ್ಟದಕಲ್ಲು, ಮೈಸೂರ ಅರಮನೆ, ಗೋಲ್ ಗುಂಬಜ್ ಇತ್ಯಾದಿ) ಕುರಿತು ಚಿತ್ರ ಬಿಡಿಸಬೇಕು.
ನವೆಂಬರ್ 13ರ ಒಳಗಾಗಿ ಸಂಘದ ವಾಟ್ಸಾಪ್ ನಂಬರ-7483228094ನಲ್ಲಿ ಮಾತ್ರ ಹೆಸರುಗಳನ್ನು ನೋಂದಾಯಿಸಲು, ಕಳಿಸಬೇಕು. (ವಿದ್ಯಾರ್ಥಿಯ ಪೂರ್ಣ ಹೆಸರು, ವಯಸ್ಸು, ತರಗತಿ, ಶಾಲೆಯ ಹೆಸರು ನಮೂದಿಸಬೇಕು)
ಸಂಘದಿಂದ ಚಿತ್ರ ಬಿಡಿಸಲು ಬಿಳಿ ಹಾಳೆಯನ್ನು ಮಾತ್ರ ಪೂರೈಸಲಾಗುವುದು. ಚಿತ್ರ ಬಿಡಿಸಲು ಬಣ್ಣ ಅದಕ್ಕೆ ಸಂಬAಧಿಸಿದ ಸಲಕರಣೆಗಳನ್ನು ವಿದ್ಯಾರ್ಥಿಗಳೇ ತರಬೇಕು.
ಇದನ್ನೂ ಓದಿ ಧಾರವಾಡ | ವಾಟ್ಸಾಪ್’ಗಳು ಸುಳ್ಳು ಹರಡುವ ಫ್ಯಾಕ್ಟರಿಗಳಾಗಿವೆ: ಡಾ. ವೆಂಕನಗೌಡ ಪಾಟೀಲ್
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತಿ ತರಗತಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





