ದನ ಕರುಗಳಿಗಾಗಿ ಶೇಖರಿಸಿ ಇಡಲಾಗಿದ್ದ, ಕಡ್ಲಿ, ಗೋಂಜಾಳ ಹೊಟ್ಟಿನ
ಬಣಿವೆ ಕಿಡಿಗೇಡಿಗಳ ಸಿಗರೇಟ್’ನ ಕಿಡಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂದಾಜು 50.000 ಸಾವಿರ ಬೆಲೆಬಾಳುವ ಹೊಟ್ಟು(ಮೇವು) ನಾಶವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಜ. 5ರಂದು ನಡೆದಿದೆ.
ಅನಾಹುತ ಸಂಭವಿಸಿದ ತಕ್ಷಣ ಹತ್ತಿರದಲ್ಲೇ ಇದ್ದ ಬಣಿವೆಯ ಮಾಲೀಕರಾದ ಬಸಪ್ಪ ಮಳಲಿ ಮತ್ತು ಮಲ್ಲೇಶಪ್ಪ ಮಳಲಿ ಅವರು ಕೂಡಲೇ ಗ್ರಾಪಂ ಅನ್ನು ಸಂಪರ್ಕಿಸಿದ್ದಾರೆ. ತಕ್ಷಣ ಕುಂದಗೋಳ ಅಗ್ನಿ ಶಾಮಕ ದಳವು ಧಾವಿಸಿ ಬಂದು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಶಮನಗೊಳಿಸಿದ್ದಾರೆ. ಪಕ್ಕದಲ್ಲಿಯ ರೈಲ್ವೆ ನಿಲ್ದಾಣದ ಬಳಿಯಿರುವ MSIL ಕೇಂದ್ರದಿಂದ ಕುಡಿಯುವವರು ಬಣಿವೆಗಳ ಹತ್ತಿರದಲ್ಲಿ ಬಂದು ಕುಳಿತುಕೊಳ್ಳುವುದೇ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಹಲವಾರು ಬಾರಿ ಗ್ರಾಪಂ’ಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವನ್ನು ತೆಗೆದುಕೊಂಡಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತಂದರು ಉಪಯೋಗವಾಗಿಲ್ಲ. ಸತತವಾಗಿ 4 ವರ್ಷಗಳಿಂದ ಇಂತಹ ಬೆಂಕಿ ಅವಘಢ ಸಂಭವಿಸುತ್ತಿದೆ. ಹತ್ತಿರದಲ್ಲಿರುವ MSIL ಕೇಂದ್ರವನ್ನು ಬೇರೆಕಡೆಗೆ ಸ್ಥಳಾಂತರ ಮಾಡುವುದೇ ಇದಕ್ಕೆಲ್ಲ ಸೂಕ್ತ ಪರಿಹಾರ ಎಂದು ಸ್ಥಳೀಯರು ಅಗ್ರಹಿಸುತ್ತಿದ್ದಾರೆ.
ಈ ಕುರಿತು ಈದಿನ.ಕಾಮ್ ಜತೆಗೆ ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ ಮಾತನಾಡಿ, ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಬಸಪ್ಪ ಮಳಲಿ ಅವರ 50.000 ಬೆಲೆಬಾಳುವ ಹೊಟ್ಟು ಸೊಪ್ಪು ಸಂಪೂರ್ಣ ಸುಟ್ಟಿದೆ. ಬೆಂಕಿ ಜ್ವಾಲೆ ಹೆಚ್ಚಾಗಿದ್ದ ಕಾರಣ ಕುಂದಗೋಳದ ಅಗ್ನಿ ಶಾಮಕ ದಳಕ್ಕೆ ಸಂಪರ್ಕಿಸಿದ್ದೇವು. ಬೆಂಕಿ ಶಮನವಾಗಿದೆ ಎಂದರು.
ಮಾಲೀಕರಾದ ಬಸಪ್ಪ ಮಳಲಿ ಮಾತನಾಡಿ, ದನ ಕರುಗಳಿಗೆಂದು ಶೇಖರಿಸಿ ಇಟ್ಟಿದ್ದ ಹೊಟ್ಟು ಸುತ್ತಿದೆ. ಬೆಂಕಿ ಹೊತ್ತಿಕೊಂಡಾಗ ನಾನು ಹತ್ತಿರದಲ್ಲೇ ಇದ್ದೆ. ನೋಡುವಷ್ಟರಲ್ಲಿ ಬಹಳಷ್ಟು ಬೆಂಕಿ ಆವರಿಸಿತು. ಸಾರಾಯಿ ಕುಡಿಯುತ್ತ ಕುಳಿತಿದ್ದ ನಾಲ್ವರು ಓಡಿ ಹೋದರು. ಇದೀಗ ದನಗಳಿಗೆ ಸೊಪ್ಪು ಎಲ್ಲಿಂದ ತರಬೇಕು ಎಂದು ತಮ್ಮ ನೋವನ್ನು ತೋಡಿಕೊಂಡರು.
ಇದನ್ನೂ ಓದಿ ಧಾರವಾಡ | ಬೈಕ್ ನಿಯಂತ್ರಣ ತಪ್ಪಿ ಇಬ್ಬರ ಸಾವು
ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ, ಸುಂಕದವರ ಶಾಲೆಯ ಹಿಂಭಾಗದಲ್ಲಿ ಅಂದರೆ; ಹರಕುಣಿರೈಲ್ವೆ ಸೇತುವೆ ಹತ್ತಿರ ಈ ಘಟನೆ ನಡೆದಿದೆ. ಕುಡುಕರು, ಸಿಗರೇಟು ಸೇದುವವರಿಂದ ಇಂತಹ ಅನಾಹುತಕ್ಕೆ ಕಡಿವಾಣ ಹಾಕಬೇಕು. ಸಂತ್ರಸ್ತ ರೈತರಿಗೆ ಪರಿಹಾರ ದೊರಕಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





