ದಲಿತ ಯುವಕನನ್ನು ಲಿಂಗಾಯತ ಯುವತಿ ಪ್ರಿತಿಸಿ ಮದುವೆಯಾಗಿದಕ್ಕೆ ಮಾನ್ಯಾ ಎಂಬ ಯುವತಿಯ ತಂದೆಯಿಂದಲೇ ಮರ್ಯಾದೆಗೇಡು ಹತ್ಯೆಯಾದ ಘಟನೆ ಹುಬ್ಬಳ್ಳಿ ತಾಲೂಕ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ತ್ವರಿತಗತಿಯಲ್ಲಿ ನ್ಯಾಯಾಲಯವನ್ನು ಸ್ತಾಪಿಸಿ ಗಲ್ಲು ಶಿಕ್ಷೆ ವಿಧಿಸಲು ಅಗ್ರಹಿಸಿ ಕುಂದಗೋಳ ಚಲವಾದಿ ಸಮಾಜ ಹಿತ ರಕ್ಷಣಾ ಸಮಿತಿ ಮತ್ತು ದಲಿತಪರ ಒಕ್ಕೂಟಗಳ ವತಿಯಿಂದ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು.
ಅದಷ್ಟೇ ಅಲ್ಲದೆ ವಿವೇಕಾನಂದ ದೊಡಮನಿ ಹಾಗೂ ಅವರ ಕುಟುಂಬದ ಮೇಲೆಯೂ ಹಲ್ಲೆ ಮಾಡಲಾಗಿದೆ. ಗರ್ಭಿಣಿ ಹೆಣ್ಣು ಮಗಳನ್ನು ದಯೆಯಿಲ್ಲದೆ ಕೊಚ್ಚಿ ಹಾಕಿದ್ದು, ಇಡೀ ಮಾನವ ಕುಲವೇ ತಲೆತಗ್ಗಿಸುವ ಹೇಯಕೃತ್ಯವಾಗಿದೆ. ಸಮಾಜದಲ್ಲಿ ಜಾತೀಯತೆ ತೊಲಗಬೇಕಿದೆ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕಿದೆ. ಮುಂದೆ ಈ ತರಹದ ದುರ್ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ವಹಿಸಬೇಕು ಎಂದು ಮನವಿ ನೀಡುವ ವೇಳೆ ಒತ್ತಾಯಿಸಿದರು.
ಇದನ್ನೂ ಓದಿ ಮರ್ಯಾದೆಗೇಡು ಹತ್ಯೆ: ಬಸವಣ್ಣನ ತತ್ವ ಮರೆತರೇ ಲಿಂಗಾಯತ ಜಾತಿವಾದಿಗಳು?
ಈ ಸಂದರ್ಭದಲ್ಲಿ ಗುರುನಾಥ ಚಲವಾದಿ ಸುರೇಶ ಮಾಕಪ್ಪನವರ, ಲೋಕೇಶ್ ಬೇವಿನಮರದ, ಶರೀಫ ಜೋಗಮ್ಮನವರ, ರವಿ ದಾನಮ್ಮನವರ, ಕಾಂತೇಶ್ ದೊಡ್ಡಮನಿ, ಮೈಲಾರಪ್ಪ ಲಂಗಟದ, ಫಕೀರೇಶ ಮೂಕಾಶಿ, ಪರಶುರಾಮ ವೀರನಾಯಕರ, ರಮೇಶ್ ಚಲವಾದಿ, ಅಜ್ಜಪ್ಪ ತಳವಾರ್, ಅಡಿವಪ್ಪ ಹೆಬ್ಬಸೂರು, ಪರಶುರಾಮ್ ಚಲವಾದಿ, ಬಸವರಾಜ್ ಗುಡನಕಟ್ಟಿ, ಚಂದು ಕಾಳೆ, ಮಂಜುನಾಥ್ ಕಾಲವಾಡ, ರವಿ ಕಾಳಿ, ನೀಲಪ್ಪ ಹರಿಜನ, ಗೋವಿಂದಪ್ಪ ಕಾಳಿ ಪಾಲ್ಗೊಂಡಿದ್ದರು.





