ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕನ್ನಡ ಭಾಷೆಯನ್ನು ಬಳಸುತ್ತೇವೆ. ಇತರ ರಾಜ್ಯಗಳು ಕನ್ನಡದ ಮೇಲೆ ಒತ್ತಡ ಹೇರಿದಾಗ, ಅದಕ್ಕೆ ಕನ್ನಡಪರ ಸಂಘಟನೆಗಳು ಸಮರ್ಥವಾಗಿ ಉತ್ತರ ನೀಡಿ ಕರ್ನಾಟಕವನ್ನು ಕನ್ನಡಮಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಕನ್ನಡ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡ ನಾಡು-ನುಡಿ ನಿರಂತರವಾಗಿ ಬೆಳೆಯಬೇಕು ಹಾಗೂ ಕನ್ನಡ ಭಾಷೆಗೆ ಸದಾ ಚೈತನ್ಯ ತುಂಬಬೇಕು ಎನ್ನುವ ಹಿತದೃಷ್ಟಿಯಿಂದಲೇ ನಾವು ರಾಜ್ಯೋತ್ಸವದಂತಹ ಆಚರಣೆಗಳನ್ನು ಮಾಡುತ್ತೇವೆ. ಕನ್ನಡದ ತಾಕತ್ತು ಎಷ್ಟಿದೆ ಎಂದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯಾರಾದರೂ ಕನ್ನಡ ಮಾತನಾಡಿದರೆ ತಕ್ಷಣ ಅವರನ್ನು ತಿರುಗಿ ನೋಡಿಸುವ ಶಕ್ತಿ ನಮ್ಮ ಭಾಷೆಗಿದೆ. ಕನ್ನಡ ಭಾಷೆಗೆ ಹೆಚ್ಚು ಗೌರವ ಕೊಡಬೇಕು, ಅದನ್ನು ನಿತ್ಯದ ಆಚರಣೆಯಲ್ಲಿ ತರಬೇಕು. ಹೀಗೆ ಮೂಲ ಭಾಷೆಗೆ ಹೆಚ್ಚು ಒತ್ತು ಕೊಡಬೇಕೆಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಎಲ್ಲರೂ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂಬ ನಾಣ್ಣುಡಿಯಂತೆ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡೋಣ ಎಂದು ಕರೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ವಿವಿಧ ವಾದ್ಯಗಳ ಮೆರವಣಿಗೆಯು ಜರುಗಿತು. ಕಾರ್ಯಕ್ರಮದ ಭಾಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ: ಧಾರವಾಡ | ರಾಜ್ಯೋತ್ಸವದಲ್ಲಿ ವಿದ್ಯುತ್ ಅಡಚಣೆ; ಪಾಲಿಕೆ ಮೇಲೆ ಕ್ರಮಕ್ಕೆ ಮುಂದಾದ ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಕಲ್ಯಾಣಪೂರ ಮಠದ ಬಸವಣ್ಣ ಅಜ್ಜನವರು, ತಹಶೀಲ್ದಾರ್ ರಾಜು ಮಾವರಕರ್, ತಾಲೂಕು ಪಂಚಾಯತ್ ಇಒ ಜಗದೀಶ ಕಮ್ಮಾರ, ಪುರಸಭೆ ಮುಖ್ಯಾಧಿಕಾರಿ ಸಿ. ವಿ. ಕುಲಕರ್ಣಿ, ಬಿಇಒ ಮಾಹದೇವಿ ಮಾಡಲಗೇರಿ, ಸಿಪಿಐ ಶಿವಾನಂದ ಅಂಭಿಗೇರ, ಕರವೇ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ, ಉಪಾಧ್ಯಕ್ಷ ಅಡಿವೆಪ್ಪ ಹೇಬಸೂರ, ಕರವೇ ಪ್ರವೀಣಶೆಟ್ಟಿ ಬಳಗದ ಅಧ್ಯಕ್ಷ ರಮೇಶ ಇಂಗಳಳ್ಳಿ, ಕರವೇ ಸದಸ್ಯ ಅಶೋಕ ಘೋರ್ಪಡೆ, ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ, ಮುಖಂಡರಾದ ಉಮೇಶ ಹೇಬಸೂರ, ದಾನಪ್ಪ ಗಂಗಾಯಿ, ಮಂಜುನಾಥ ಹಾದಿಮನಿ, ದೇವೇಂದ್ರಪ್ಪ ಇಚ್ಛಂಗಿ, ಬಸನಗೌಡ್ರ ಹೇಮನಗೌಡ್ರ, ಗುರುಪಾದಪ್ಪ ಬಂಕದ, ಬಸವರಾಜ ಯೋಗಪ್ಪನವರ, ಮಲ್ಲಿಕಾರ್ಜುನ ಕುನ್ನೂರ, ನಂಜಪ್ಪ ನೆಲೂಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





