ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಧಾರವಾಡದ ಅಂಜುಮನ್ ಕಾಲೇಜಿನಲ್ಲಿ ಭವ್ಯವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಉದ್ಘಾಟಿಸಿ, ನೆರವೇರಿಸಿದರು.
ಹಿರೇಮಲ್ಲೂರು ಈಶ್ವರನ್ ಕಾಲೇಜಿನ ಪ್ರಾಚಾರ್ಯರ ಪ್ರೊ. ಶಶಿಧರ್ ತೋಡ್ಕರ ಮಾತನಾಡಿ, ಕನ್ನಡ ನಮ್ಮ ಅಸ್ತಿತ್ವದ ಗುರುತು. ನಾವು ಅದನ್ನು ಕೇವಲ ಮಾತನಾಡುವುದಲ್ಲ, ಬದುಕಬೇಕು. ಪ್ರತಿ ಕನ್ನಡಿಗಿನ ಮೇಲೆ ಕನ್ನಡದ ಕೀರ್ತಿಯನ್ನು ಉಳಿಸುವ ಹೊಣೆಗಾರಿಕೆ ಇದೆ ಎಂದರು.
ನಂತರ ಇಸ್ಮಾಯಿಲ್ ತಮಟಗಾರ್ ಮಾತನಾಡಿ, ಕನ್ನಡ ಭಾಷೆಯ ಗೌರವ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಜಾಗೀರ್ದಾರ್, ಆಡಳಿತ ಮಂಡಳಿಯ ಸದಸ್ಯರಾದ ಗುಲಾಮ ಯಾಸೀನ್ ಹಾವೇರಿ ಪೆಟ್, ಮೊಮ್ಮದ್ ರಫಿ ಶಿರಹಟ್ಟಿ, ಡಾ. ಅಬ್ದುಲ್ ಖಾದಿರ್ ಸರಗಿರೋ, ಖೈರುದ್ದೀನ್ ಶೇಖ್ ಇದ್ದರು.
ಇದನ್ನೂ ಓದಿ: ಧಾರವಾಡ | ರಾಜ್ಯೋತ್ಸವದಲ್ಲಿ ವಿದ್ಯುತ್ ಅಡಚಣೆ; ಪಾಲಿಕೆ ಮೇಲೆ ಕ್ರಮಕ್ಕೆ ಮುಂದಾದ ಜಿಲ್ಲಾಧಿಕಾರಿ
ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ‘ಜೈ ಕರ್ನಾಟಕ’ ಘೋಷಣೆಯು ಮೊಳಗಿತು. ಸ್ವಾಗತ ರುದ್ರೇಶ್ ಮೇಟಿ ನಿರೂಪಿಸಿದರು, ಡಾ. ಐ.ಎ.ಮುಲ್ಲಾ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.





