ಹುಬ್ಬಳ್ಳಿಯಿಂದ ಚಿತ್ರದುರ್ಗದ ಕಡೆಗೆ ಸಂಚರಿಸುವ ರೈಲ್ವೆ ಇಂಜಿನ್ ಧಾರವಾಡ ಜಿಲ್ಲೆಯ ಕುಂದಗೋಳ ರೈಲ್ವೆ ನಿಲ್ದಾಣದಲ್ಲಿ ಕೆಟ್ಟುನಿಂತ ಪರಿಣಾಮ ಪ್ರಯಾಣಿಕರು ಪರದಾಡುವ ವಾತಾವರಣ ಸೃಷ್ಟಿಯಾಗಿದೆ.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ ಧಾರವಾಡ ಬಂದ್ | ಶಾಲಾ ಕಾಲೇಜು ರಜೆ ಘೋಷಣೆ
ಜನೆವರಿ 9 ರಂದು ಬೆಳಿಗ್ಗೆ 7:15 ನಿಮಿಷಕ್ಕೆ ಕದಲಬೇಕಿದ್ದ ಹುಬ್ಬಳ್ಳಿ ಚಿತ್ರದುರ್ಗ ಪ್ಯಾಸೆಂಜರ್ ರೈಲು 7:30 ನಿಮಿಷಕ್ಕೆ ತಡವಾಗಿ ಬಿಟ್ಟಿದ್ದೂ ಅಲ್ಲದೇ ಕುಂದಗೋಳ ರೈಲ್ವೆ ನಿಲ್ದಾಣದಲ್ಲಿ ಇಂಜಿನ್ ಕೆಟ್ಟಿನಿಂತು ಪ್ರಯಾಣಿಕರು ಬಸ್ ನಿಲ್ದಾಣದ ವರೆಗೆ ಎರಡು ಕಿ.ಮೀ ನಡೆದು ಪರದಾಟಕ್ಕೆ ಕಾರಣವಾಗಿದೆ.





