ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟಗಾರರ ಮತ್ತು ವ್ಯಸನಿಗಳ ಬಗ್ಗೆ ವಿಶೇಷ ಕಾರ್ಯಾಚರಣೆಯ ಪ್ರಯುಕ್ತ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.14ರಂದು ಸಾಯಂಕಾಲ ಉದಯಗಿರಿ ಡಬಲ್ ರೋಡ್ ಹತ್ತಿರ ದಾಳಿ ಕೈಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಜಿಶಾನ ಸಮೀರ ಅಹ್ಮದ ಅನವಾಲೆ, ಧಾರವಾಡ (23), ಮಲಿಕರೆಹಾನ ಗಫಾರಸಾಬ ಪೀರಜಾದೆ, ರಾಯಾಪೂರ (18), ಮುಬಾರಕ ಮಹಮ್ಮದಜಾಫರ ಬಾಗೇವಾಡಿ, ಸತ್ತೂರ (20), ಮಹಮ್ಮದ ಅಶ್ಲೀಲ ಅಬ್ದುಲ ಜಬ್ಬಾರ ಬಾರುದವಾಲೆ, ಸೈದಾಪೂರ (20) ಆರೋಪಿಗಳು.
ನಾಲ್ವರು ಆರೋಪಿಗಳ ಆರೋಪಿಗಳಿಂದ ಒಟ್ಟು 1 ಕೆ.ಜಿ. 220 ಗ್ರಾಂ ಗಾಂಜಾ ಎಂಬ ಮಾದಕ ವಸ್ತು ಆ;ಕಿ 62,000/-ರೂ. ನಗದು ಹಣ 500/-, ಒಟ್ಟು 03 ಮೊಬೈಲ ಫೋನ ಅ:ಕಿ: 9,000/- ರೂ. 01 ದ್ವೀಚಕ್ರ ವಾಹನ ಆ:ಕಿ: 60,000/- ರೂ. ವಶಪಡಿಸಿಕೊಂಡಿದ್ದಾರೆ.
ಜಪ್ತಾದ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ, ಶೀಟ ಕೆಳಗೆ ಎರಡು ಸಣ್ಣ ಗಾತ್ರದ ಎರಡು ಮಚ್ಚು ಮತ್ತು ಒಂದು ತಲವಾರ ಇದ್ದುದು ಕಂಡು ಬಂದಿದೆ. ಆರೋಪಿತರನ್ನು ವಿಚಾರಿಸಲಾಗಿ ಯಾರಾದರು ಗಾಂಜಾ ಮಾರಾಟಕ್ಕೆ ಅಡ್ಡಿ ಪಡಿಸಿದರೆ ಅವರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳುವ ಸಲುವಾಗಿ ಇವುಗಳನ್ನು ಇಟ್ಟುಕೊಂಡ ಬಗ್ಗೆ ಮತ್ತು ಗಾಂಜಾವನ್ನು ಓರಿಸ್ಸಾ ರಾಜ್ಯದಿಂದ ತಂದ ಬಗ್ಗೆ ತಿಳಿಸಿರುತ್ತಾರೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಇದನ್ನೂ ಓದಿ ಹುಬ್ಬಳ್ಳಿ | ಮಲ್ಲಿಕ್ ಹತ್ಯೆ ಪ್ರಕರಣ; ಮತ್ತೋರ್ವ ಆರೋಪಿ ಬಂಧನ
ಆರೋಪಿತರ ಮೇಲೆ ಎನ್.ಡಿ.ಪಿ.ಎಸ್. ಕಾಯ್ದೆ ಜೊತೆಗೆ ಆರ್ಮ್ಸ್ ಆ್ಯಕ್ಟ್ ಪ್ರಕಾರ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





