ಧಾರವಾಡ | ನನ್ನ ಸೇವೆ ತೃಪ್ತಿದಾಯಕವಾಗಿದೆ: ಡಾ. ಎನ್.ಎಮ್.ಮಕಾಂದಾರ

Date:

ನಾನು ಮೂವತ್ತೇಳು ವರ್ಷ ಐದು ತಿಂಗಳು ಪ್ರಾಧ್ಯಾಪಕನಾಗಿ, ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿ ಇವತ್ತು ವಯೋ ನಿವೃತ್ತಿಯಾಗುತ್ತಿದ್ದೇನೆ. ಇಲ್ಲಿಯವರೆಗೆ ಸಲ್ಲಿಸಿದ ಸೇವೆ ನನಗೆ ಅತಿವ ತೃಪ್ತಿ ತಂದಿದೆ ಎಂದು ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೊತ್ತರ ಅಧ್ಯಯನದ ಪ್ರಾಚಾರ್ಯ ಡಾ.ಎನ್.ಎಮ್.ಮಕಾಂದಾರ ತಮ್ಮ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನ್ನನ್ನು ನಂಬಿ ಅಂಜುಮನ್ ಸಂಸ್ಥೆ ಸೇವೆ ಸಲ್ಲಿಸಲು ಒಂದು ಅವಕಾಶ ಮಾಡಿಕೊಟ್ಟಿತ್ತು. ಆ ಅವಕಾಶವನ್ನು ಪ್ರಾಮಾಣಿಕವಾಗಿ ಶ್ರದ್ದೆಯಿಂದ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ. ನಾನು ಪ್ರಾಚಾರ್ಯನಾಗಿ ಸಾಕಷ್ಟು ಸಂಸ್ಥೆಗೆ ಅಭಿವೃದ್ದಿ ಪರವಾದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟ ಅಂಜುಮನ್ ಸಂಸ್ಥೆಗೆ ಮತ್ತು ಆಡಳಿತ ಮಂಡಳಿಗೆ ಯಾವಾಗಲೂ ಚಿರೃಣಿಯಾಗಿದ್ದೇನೆ. ಏಕೆಂದರೆ ಇವತ್ತು ನಾನು ಡಾ. ಎನ್.ಎಮ್.ಮಕಾಂದಾರ ಎಂದು ಗುರುತಿಸಿಕೊಳ್ಳುವದಕ್ಕೆ ಅಂಜುಮನ್ ಸಂಸ್ಥೆಯೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪ್ರಾಚಾರ್ಯ ಡಾ. ಎನ್.ಎಮ್.ಮಕಾಂದಾರರನ್ನು ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಬರಮಾಡಿಕೊಂಡರು. ಪ್ರಾಧ್ಯಾಪಕರು. ಸ್ನೇಹಿತರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು ಅವರು ಸಲ್ಲಿಸಿದ ಸೇವೆ ಕುರಿತು ಹೊಗಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
IMG 20250101 WA0002

ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ಬಾಜ್ ಬಶೀರ ಅಹಮ್ಮದ ಜಾಗೀರದಾರ ಅಧ್ಯಕ್ಷತೆಯ ನುಡಿಯನ್ನು ಆಡುತ್ತ ಡಾ.ಮಕಾಂದಾರ ಅವರ ಸೇವೆಯನ್ನು ಸಂಸ್ಥೆಯು ಎಂದು ಮರೆಯಲಿಕ್ಕೆ ಸಾದ್ಯವಿಲ್ಲ. ಅದೇ ರೀತಿ ಮುಂದಿನ ಪ್ರಾಚಾರ್ಯ ಡಾ.ಆಯ್.ಎ.ಮುಲ್ಲಾ ಮುಂದುವರೆಸಿಕೊಂಡು ಹೋಗಬೇಕು. ಸಂಸ್ಥೆಯು ಅವರ ಹಾಗೆ ನಿಮಗೂ ಕೂಡ ಒಳ್ಳೆಯ ಕಾರ್ಯಕ್ಕೆ ಬೆಂಬಲವಾಗಿರುತ್ತದೆ ಎಂದರು.

ಅಲ್ಬಾಜ್ ಸಯ್ಯದ ಖಾದೀರ ಸರಗೀರೊ, ಜನಾಬ. ಮೊಹಮ್ಮದ ಶಫೀ ಕಳ್ಳಿಮನಿ, ಅಲ್ಟಾಜ್ ಮೊಹಮ್ಮದ ರಫೀಕ್ ಶಿರಹಟ್ಟಿ, ಜನಾಬ.ಇನ್ಸಾಲ್ ಜಮಾದಾರ, ಆಯ್.ಎಮ್.ಜವಳಿ, ಡಾ. ಆಯ್.ಎ.ಮುಲ್ಲಾ, ಡಾ.ನಾಗರಾಜ ಗುದಗನವರ, ಡಾ. ಎ.ಎಸ್.ಬಳ್ಳಾರಿ, ಡಾ.ಎನ್.ಬಿ.ನಲತವಾಡ, ಡಾ.ಮೇಟಿ ರುದ್ರೇಶ ಈ ಕಾರ್ಯಮದಲ್ಲಿ ಬಾಗವಹಿಸಿದ್ದರು.

ಈ ವರದಿ ಓದಿದ್ದೀರಾ? ಧಾರವಾಡ | ಬೈಕ್ ಸವಾರನಿಗೆ ಖಾರದಪುಡಿ ಎರಚಿ 1 ಲಕ್ಷ 80 ಸಾವಿರ ಹಣ ದೋಚಿದ ದುಷ್ಕರ್ಮಿಗಳು

ಮುಬಾರಕ್ ಮುಲ್ಲಾ ಖುರಾನ್ ಪಟಿಸಿದರು. ಡಾ.ಎಸ್.ಕೆ.ಜಾಧವ್ ಶ್ಲೋಕ ಹೇಳಿದರು. ಡಾ.ಆಯ್.ಎ.ಮುಲ್ಲಾ ಸ್ವಾಗತಿಸಿದರು. ಡಾ.ಗೌರಿ ಗೌರಿಕೇರೆಮತ ಪರಿಚಯಿಸಿದರು. ಡಾ.ಸಯ್ಯದ ತಾಜುನ್ನಿಸಾ ವಂದಿಸಿದರು. ಡಾ.ಎನ್.ಬಿ.ನಲತವಾಡ ಕಾರ್ಯಕ್ರವನ್ನು ನಿರ್ವಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...