ದಸರಾ ಮಹೋತ್ಸವ-2025 ಅಂಗವಾಗಿ ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸಿ.ಎಂ ಕಪ್ ದಸರಾ ಕ್ರೀಡಾಕೂಟದಲ್ಲಿ ಅಟ್ಲೆಟಿಕ್ಸ್, ಹಾಕಿ, ವ್ಹಾಲಿಬಾಲ್, ಜಿಮ್ನಾಸ್ಟಿಕ್, ಟೇಕ್ವಾಂಡೋ ಮತ್ತು ಕುಸ್ತಿ ವಿಭಾಗದಲ್ಲಿ ಒಟ್ಟು 111 ಪದಕಗಳು ಧಾರವಾಡ ಜಿಲ್ಲೆಗೆ ಲಭಿಸಿದ್ದು ಅದರಲ್ಲಿ ಮೂರು ವಿಭಾಗ ಗುಂಪು ಸ್ಪರ್ಧೆಯಲ್ಲಿ ಟ್ರೋಫಿ ಲಭಿಸಿವೆ. ಈ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಇಂದು ಸೆ.30ರ ಸಂಜೆ ಅಭಿನಂದಿಸಿ, ಶುಭ ಕೋರಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಲಸಿಕೆ ತೆಗೆದುಕೊಳ್ಳುವ ಮೂಲಕ ರೇಬಿಸ್ ರೋಗ ತಡೆಯಬಹುದು: ಡಾ.ಎಸ್.ಎಮ್. ಹೊನಕೇರಿ
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮಾರಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಅಧೀಕ್ಷಕ ಸುರೇಂದ್ರ ಗಂ. ಭಾವಿಕಟ್ಟಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಶ್ರೀರಾಮ ಬುಡಕಿ, ಜಿಮ್ನಾಸ್ಟಿಕ್ ತರಬೇತುದಾರ ಬಸವರಾಜ ಪಟಾತ್ ಮತ್ತು ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





