ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಯಾಜಿ ಪ್ರಕಾಶನ ಹೊಸಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಧರಣೇಂದ್ರ ಕುರಕುರಿ ಅವರ ಜಾತ್ರಿ ಕಾದಂಬರಿಯ ಅನ್ವಯಕ ವಿಮರ್ಶಾ ಕೃತಿ ‘ಜಾತ್ರೆಯ ತರುವಾಯ’ ಓದುಗರ ಅನುಭವ ಮತ್ತು ವಿಮರ್ಶಾ ಲೇಖನಗಳ ಸಂಪಾದನೆ ಕೃತಿಯನ್ನು ಬಿಡುಗಡೆಗೊಳಿಸಿದರು.
ಹಿರಿಯ ಕವಿ ಸತೀಶ್ ಕುಲಕರ್ಣಿ ಲೋಕಾರ್ಪಣೆ ಮಾಡಿ ಮಾತನಾಡಿ, ಕಾದಂಬರಿ ಬರಹಗಾರರ ಸಂಖ್ಯೆ ಕಡಿಮೆ ಆಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಮೂಡಿಬಂದ ಧರಣೇಂದ್ರ ಕುರಕುರಿಯವರ “ಜಾತ್ರಿ” ಅಪರೂಪದ ಕಾದಂಬರಿ. ಕಾದಂಬರಿಯ ಒಳನೋಟ ಶೈಲಿ, ಭಾಷೆ ಸಂದೇಶಗಳ ಚಿಂತನೆ ಸ್ವಾಗತಾರ್ಹ ಎಂದರು.
ಕೃತಿ ಸಂಪಾದಕ ಡಾ. ಬಸು ಬೇವಿನಗಿಡದ, ಚೆನ್ನಪ್ಪ ಅಂಗಡಿ ಸಂಪಾದನೆಯ ಕುರಿತು ಮಾತನಾಡಿದರು. ಪ್ರೊ. ಧರಣೇಂದ್ರ ಕುರಕುರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕೃತಿ ರಚನೆಯಾದ ಬಗೆಯನ್ನು ತಿಳಿಸಿದರು. ಅವರ ಕೃತಿಯ ಪ್ರತಿ ಲೇಖನವನ್ನು ಪ್ರಜ್ಞಾ ಮತ್ತಿಹಳ್ಳಿ ಪರಿಚಯಿಸಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ ಧಾರವಾಡ | ಅಂಜುಮನ್ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಪ್ರೊ. ಕುರಕುರಿ ರಚಿಸಿದ ಗೀತೆಗಳನ್ನು ಗೀತಾ ಮಹಿಳಾ ಮಂಡಳ, ಗಾನ ಸಿಂಚನ ಮಹಿಳಾ ಮಂಡಳಗಳ ಸದಸ್ಯರು ಪ್ರಸ್ತುತಪಡಿಸಿದರು. ಬಸವರಾಜ ಕೊರವರ ಪ್ರಾರ್ಥಿಸಿದರು. ಡಾ. ಎಸ್ ಎಸ್ ದೊಡಮನಿ ಮಂದಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು, ಆರ್ ಜಿ ಹಳ್ಳಿ ನಾಗರಾಜ್, ಬಿಎಸ್ ಸೊಪ್ಪಿನ್, ಡಾ. ಬಸವರಾಜ ಸಾದರ, ಸೊಮಶೇಖರ್ ಇಟಗಿ, ಮಲ್ಲಿಕಾರ್ಜುನ ಶೆಲ್ಲಿಕೇರಿ, ಪ್ರೊ. ಎಸ್ ಕೆ ಆದಪ್ಪನವರ ಉಪಸ್ಥಿತರಿದ್ದರು.





