ಪತ್ನಿಯನ್ನು ಕೊಲೆಗೈದ ಆರೋಪದಡಿ ಶಿಕ್ಷೆ ಅನುಭವಿಸುತ್ತಿದ್ದ, ಸಜಾ ಖೈದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಈಶ್ವರಪ್ಪ ಪೂಜಾರ (46) ಆತ್ಮಹತ್ಯೆ ಮಾಡಿಕೊಂಡ ಖೈದಿ ಎಂದು ಗುರುತಿಸಲಾಗಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿಯಾಗಿದ್ದಾರೆ. ಕಾರಾಗೃಹದೊಳಗಿನ ಕೆಲಸಕ್ಕೆ ಬಳಸುವ ಕಟ್ಟಡದಲ್ಲಿ ಈಶ್ವರಪ್ಪ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಕೊಲೆ ಪ್ರಕರಣದಲ್ಲಿ ಖೈದಿ ಈಶ್ವರಪ್ಪ ಸಜಾ ಅನುಭವಿಸುತ್ತಿದ್ದರು. ಇನ್ನೂ ಎರಡು ವರ್ಷಗಳು ಮಾತ್ರ ಶಿಕ್ಷೆಯ ಅವಧಿ ಇತ್ತು. ಅಷ್ಟರಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈದಿನ.ಕಾಮ್ ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ ಧಾರವಾಡ | ಅಂಜುಮನ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





