ಧಾರವಾಡ | ಶರಣರು ಚಲನೆಯ ತತ್ವವನ್ನು ಪ್ರತಿಪಾದಿಸುತ್ತಾರೆ: ರೆಹಮತ್ ತರೀಕೆರೆ

Date:

ಶರಣರು ಚಲನೆಯ ತತ್ವವನ್ನು ಪ್ರತಿಪಾದಿಸಿದ್ದು, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ದೃಢವಾಗಿ ನಂಬಿದ್ದರು. ಕಲ್ಯಾಣದಲ್ಲಿ ಅತೀ ಹೆಚ್ಚು ಕುಶಲಕರ್ಮಿಗಳು ಸಿಗುತ್ತಾರೆ. ಕುಶಲಕರ್ಮಿಗಳೆಲ್ಲ ಬಸವಣ್ಣನವರಿಗೆ ಘನತೆ ತಂದುಕೊಟ್ಟರು ಎಂದು ಚಿಂತಕ ರೆಹಮತ್ ತರೀಕೆರೆ ಹೇಳಿದರು.

ಆದ್ಯ ವಚನಕಾರ ಜೇಡರ ದಾಸಿಮಯ್ಯ ಜಯಂತುತ್ಸವದ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ, ಜೇಡರ ದಾಸಿಮಯ್ಯ ವಚನಗಳ ದತ್ತಿ ಉಪನ್ಯಾಸದಲ್ಲಿ ನೇಕಾರ ಸಂಸ್ಕೃತಿ ಮತ್ತು ಅನುಭಾವ ವಿಚಾರವಾಗಿ ಅವರು ಮಾತನಾಡುತ್ತಾ, ಆದ್ಯ ವಚನಕಾರ ದೇವರ ದಾಸಿಮಯ್ಯ ಅನ್ನುವದಕ್ಕಿಂತ ಜೇಡರ ದಾಸಿಮಯ್ಯ ಅನ್ನುವುದು ಸೂಕ್ತವಾಗುತ್ತದೆ. ವಿಶೇಷವಾಗಿ ದಾಸಿಮಯ್ಯ ತಮ್ಮ ವಚನಗಳಲ್ಲಿ ಅತ್ಯಂತ ಹೆಚ್ಚು ಪ್ರಾಣಿ ರೂಪಕಗಳನ್ನು ಬಳಸುತ್ತಾರೆ. ಕಲ್ಯಾಣದಲ್ಲಿ ಸಾಮಾನ್ಯರು ಲಿಂಗದೀಕ್ಷೆ ಪಡೆದು ಶರಣರಾಗಿ ರೂಪಾಂತರವಾದರು. ಕಲ್ಯಾಣವೆಂಬುದು ಪಟ್ಟಣವಾಗಿತ್ತು ಆದ್ಧರಿಂದ ಎಲ್ಲ ರೀತಿಯ ಕುಶಲಕರ್ಮಿಗಳು ಅಲ್ಲಿಗೆ ಧಾವಿಸಿದರು.

IMG 20250505 090012

ಮುಖ್ಯವಾಗಿ ಶರಣರು ಚಲನೆಯ ತತ್ವವನ್ನು ಪ್ರತಿಪಾದನೆ ಮಾಡುತ್ತಾರೆ. ಕುಶಲಕರ್ಮಿಗಳಲ್ಲಿ ಕಾಯಕನಿಷ್ಠೆ ಇತ್ತು. ಕಾಯಕದೊಂದಿಗೆ ವೃತ್ತಿಧರ್ಮವನ್ನು ಪಾಲಿಸಿದರು. ಅನುಭವ ಮೂಲಕ ಅನುಭಾವದ ಶಿಖರವನ್ನೇರಿದರು. ಕಲ್ಯಾಣದಲ್ಲಿ ಎಲ್ಲ ರೀತಿಯ ಸಮಾನತೆ ಇತ್ತು. ಸಮಾಜದಲ್ಲಿ ಸಮಾನತೆ ತರುವುದು ಕಷ್ಟವಾದರೂ ಸಮಾನತೆಯ ಕನಸು ಕಾಣುವುದ ನಿಲ್ಲಿಸಬಾರದು ಎಂಬ ಅಂಬೇಡ್ಕರರ ಮಾತನ್ನು ಈ ವೇಳೆ ನೆನಪಿಸಿಕೊಂಡರು. ಬಹುಶಃ ಬಸವಣ್ಣನವರ ಕಾಲದಲ್ಲಿ ಕುಶಲಕರ್ಮಿಗಳ ಶ್ರಮಕ್ಕೆ ಅಷ್ಟೊಂದು ಬೆಲೆ ಇರಲಿಲ್ಲ ಅನಿಸುತ್ತದೆ. ಅದರಿಂದ ನೊಂದು, ಬೆಂದ ಎಲ್ಲ ಕಾಯಕ ವರ್ಗದವರು ಬಸವಣ್ಣನವರ ಸಾಮಿಪ್ಯ ಬಯಸಿ ಬಂದರು. ಇದರಿಂದ ಚಲನಶೀಲ ತತ್ವಗಳು ಬಹಳ ಮುಖ್ಯವಾಗಿವೆ ಎಂದು ಸಾಬೀತಾಯಿತು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕಿ ಶಾಂತಾ ಇಮ್ರಾಪುರ ಮಾತನಾಡಿ, ದೇವರ ದಾಸಿಮಯ್ಯ ಮುಂಬರುವ ಶರಣರಲ್ಲಿ ವೈಚಾರಿಕತೆಯ ಬೀಜ ಬಿತ್ತಿದರು. ದಾಸಿಮಯ್ಯ ವಚನ ಚಳುವಳಿಗೆ ತಾತ್ವಿಕ ನೆಲೆಗಟ್ಟು ತಂದುಕೊಟ್ಟರು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಧರ್ಮದ ಕಾಲಂ’ನಲ್ಲಿ ‘ನವಬೌದ್ಧ’ ಎಂದು ನಮೂದಿಸಲು ಮೂಲನಿವಾಸಿ ದ್ರಾವಿಡ ಒಕ್ಕೂಟ ಕರೆ

ಈ ವೇಳೆ ಸತೀಶ್ ತುರಮರಿ, ಶಂಕರ ಹಲಗತ್ತಿ, ವೀರಣ್ಣ ವಡ್ಡಿನ, ಜಿನದತ್ತ ಹಡಗಲಿ, ಬಸವಪ್ರಭು ಹೊಸಕೇರಿ, ಪ್ರೊ. ಐ ಜಿ ಸನದಿ, ಸುರೇಶ್ ಭಂಡಾರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...