ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನವೆಂಬರ್ 06, ರಂದು ಮುಕ್ತಾಯಗೊಂಡ 14 ವಯೋಮಿತಿ ಒಳಗಿನ ರಾಜ್ಯ ಮಟ್ಟದ ಮಿನಿ ಓಲಂಪಿಕ್ಸ್ ಹಾಗೂ 2025-26 ನೇ ಸಾಲಿನ ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆಯಿಂದ ನಡೆದ ಬಾಲಕ ಮತ್ತು ಬಾಲಕಿಯರ 14 ವಯೋಮಿತಿ ಒಳಗಿನ ಮತ್ತು 17 ವಯೋಮಿತಿ ಒಳಗಿನ ಅಥ್ಲೇಟಿಕ್ಸ್, ಹಾಕಿ ಮತ್ತು ಕುಸ್ತಿ ಸ್ಫರ್ಧೆಯಲ್ಲಿ ಧಾರವಾಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕ್ರೀಡಾ ವಸತಿ ನಿಲಯದ ಒಟ್ಟು 28 ಕ್ರೀಡಾಪಟುಗಳು ಭಾಗವಹಿಸಿದ್ದು, ಅದರಲ್ಲಿ ಅಥ್ಲೇಟಿಕ್ಸ್ನಲ್ಲಿ-02, ಹಾಕಿ-16, ಕುಸ್ತಿ-05 ಕ್ರೀಡಾಪಟುಗಳು ಪ್ರಥಮ ಸ್ಥಾನ-05, ದ್ವಿತೀಯ ಸ್ಥಾನ-20, ತೃತೀಯ ಸ್ಥಾನ-1 ಪಡೆದಿರುತ್ತಾರೆ. ಒಟ್ಟು-26 ಪದಕಗಳನ್ನು ಪಡೆದಿದ್ದಾರೆ.
ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆಯಿಂದ ವಿಜಯನಗರ ಜಿಲ್ಲೆಯ ಮರಮ್ಮನಹಳ್ಳಿಯಲ್ಲಿ ನಡೆದ ಬಾಲಕ ಮತ್ತು ಬಾಲಕಿಯರ 14 ವಯೋಮಿತಿ ಒಳಗಿನ ಮತ್ತು 17 ವಯೋಮಿತಿ ಒಳಗಿನ ಕುಸ್ತಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ-11, ದ್ವಿತೀಯ ಸ್ಥಾನ-04, ತೃತೀಯ ಸ್ಥಾನ-03 ಹೀಗೆ ಒಟ್ಟು-18 ಪದಕಗಳನ್ನು ಪಡೆದು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದು, ಅವರಿಗೆ ಇಲಾಖೆಯ ಅಥ್ಲೇಟಿಕ್ಸ್ ತರಬೇತುದಾರರಾದ ಶ್ಯಾಮಲಾ ಪಾಟೀಲ, ಹಾಕಿ ತರಬೇತುದಾರ ಚಂದ್ರಶೇಖರ ನಾಯ್ಕರ ಮತ್ತು ಕುಸ್ತಿ ತರಬೇತುದಾರ ಶಿವಪ್ಪ ಪಾಟೀಲ ತರಬೇತಿಯನ್ನು ನೀಡುತ್ತಿದ್ದಾರೆ.
ಅಥ್ಲೇಟಿಕ್ಸ್ ವಿಜೇತರು:
ಸಂದೀಪ್, ದೀಪಿಕಾ ಹಾಕಿ ವಿಜೇತರು. ವೀಣಾ ಹಾವೇರಿ, ಶ್ರಾವಂತಿ ಜಿ, ಯಾಸ್ಮೀನ್, ನಿಶ್ಚಿತಾ, ಸುಕನ್ಯ, ಮಧುಶ್ರೀ, ಬಿಂದುಶ್ರೀ, ಶೀಲ್ಪಾ, ಪ್ರೀತಿ, ನಿರ್ಮಲಾ, ಸೌಮ್ಯ, ಮ್ಯಾಹಕ್, ಪ್ರತೀಕ್ಷಾ, ಬಸಮ್ಮ, ಶ್ರವಣಿ, ಪರಿಣಿತಾ ಕುಸ್ತಿ ವಿಜೇತರು. ದಾದಾಪೀರ ಎಸ್ – ಪ್ರಥಮ, ಬಾಹುಸಾಹೇಬ ಮಾನೆ- ಪ್ರಥಮ, ಶಿವಾಜಿ ಗಾಯಕವಾಡ – ದ್ವೀತಿಯ, ಚೈತನ್ಯ ಬಿ ಎಮ್ – ದ್ವೀತಿಯ, ಸ್ವಪ್ನಾ ವಾಯ್ – ದ್ವೀತಿಯ ಎಸ್ಜಿಎಫ್ಐ: ಪ್ರಭಾವತಿ ಲಂಗೋಟಿ 39 ಕೆಜಿ, ಜಾನ್ವಿ ಕೆ 46 ಕೆಜಿ, ಚೈತನ್ಯ ಬಿ ಎಮ್ 49 ಕೆಜಿ, ಪುಷ್ಪಾ ನಾಯಕ 53 ಕೆ, ಲೋಕೇಶ ಶಿಂಗ್ರಿ 41 ಕೆಜಿ, ಅಭಿ ಕುರಬರ್ 44 ಕೆಜಿ, ಸುಧೀಪ್ ನೆಸರಿಗಿ 51 ಕಜಿ, ದಾದಾಪೀರ ಎಸ್ 60 ಕೆಜಿ (ಜಿ/ಆರ್), ಚೇತನ ತೋಕೋಜಿ 60 ಕೆಜಿ, ಮಾದೇಶ ಬತ್ತೆ 45 ಕೆಜಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗಂಗಮ್ಮ ಹಡಪದ 40 ಕೆಜಿ, ಯಂಕಪ್ಪ ಕುಡಗಿ 48 ಕೆಜಿ, ಶಿವಾಜಿ ಗಾಯಕವಾಡ 65 ಕಜಿ, ಬಾಹುಸಾಹೇಬ ಮಾನೆ 80 ಕಜಿ ದ್ವೀತಿಯ ಸ್ಥಾನ ಪಡೆದಿದ್ದಾರೆ. ಮಣಿಕಂಠ ಕುಲಾವಿ 45 ಕೆಜಿ, ಕಾವ್ಯ ಜಾಧವ 42 ಕೆಜಿ, ಸ್ವಪ್ನಾ ವಾಯ್ 61 ಕೆಜಿ ತೃತೀಯ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ ಸೌಜನ್ಯ ಕೊಲೆ; ಯುಟ್ಯೂಬರ್ ಸಮೀರ್ ಪ್ರಕರಣದ ವಿಚಾರಣೆ ಧಾರವಾಡ ಪೀಠಕ್ಕೆ ವರ್ಗಾವಣೆ
ಈ ಎಲ್ಲ ವಿಜೇತ ಕುಸ್ತಿ ಪಟುಗಳಿಗೆ ಮತ್ತು ತರಬೇತುದಾರರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪೂರ ಅವರು ಅಥ್ಲೇಟಿಕ್ಸ್, ಹಾಕಿ ಮತ್ತು ಕುಸ್ತಿ ಕ್ರೀಡಾಪಟುಗಳಿಗೆ ಮತ್ತು ತರಬೇತುದಾರರಿಗೆ ಶುಭ ಕೋರಿದ್ದಾರೆ.





