ಧಾರವಾಡ | ರಾಜ್ಯಮಟ್ಟದ ಮಿನಿ ಓಲಂಪಿಕ್ಸ್; 26 ಪದಕ ಪಡೆದ ಜಿಲ್ಲಾ ಕ್ರೀಡಾಪಟುಗಳು

Date:

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನವೆಂಬರ್ 06, ರಂದು ಮುಕ್ತಾಯಗೊಂಡ 14 ವಯೋಮಿತಿ ಒಳಗಿನ ರಾಜ್ಯ ಮಟ್ಟದ ಮಿನಿ ಓಲಂಪಿಕ್ಸ್ ಹಾಗೂ 2025-26 ನೇ ಸಾಲಿನ ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆಯಿಂದ ನಡೆದ ಬಾಲಕ ಮತ್ತು ಬಾಲಕಿಯರ 14 ವಯೋಮಿತಿ ಒಳಗಿನ ಮತ್ತು 17 ವಯೋಮಿತಿ ಒಳಗಿನ ಅಥ್ಲೇಟಿಕ್ಸ್, ಹಾಕಿ ಮತ್ತು ಕುಸ್ತಿ ಸ್ಫರ್ಧೆಯಲ್ಲಿ ಧಾರವಾಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕ್ರೀಡಾ ವಸತಿ ನಿಲಯದ ಒಟ್ಟು 28 ಕ್ರೀಡಾಪಟುಗಳು ಭಾಗವಹಿಸಿದ್ದು, ಅದರಲ್ಲಿ ಅಥ್ಲೇಟಿಕ್ಸ್‍ನಲ್ಲಿ-02, ಹಾಕಿ-16, ಕುಸ್ತಿ-05 ಕ್ರೀಡಾಪಟುಗಳು ಪ್ರಥಮ ಸ್ಥಾನ-05, ದ್ವಿತೀಯ ಸ್ಥಾನ-20, ತೃತೀಯ ಸ್ಥಾನ-1 ಪಡೆದಿರುತ್ತಾರೆ. ಒಟ್ಟು-26 ಪದಕಗಳನ್ನು ಪಡೆದಿದ್ದಾರೆ.

ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆಯಿಂದ ವಿಜಯನಗರ ಜಿಲ್ಲೆಯ ಮರಮ್ಮನಹಳ್ಳಿಯಲ್ಲಿ ನಡೆದ ಬಾಲಕ ಮತ್ತು ಬಾಲಕಿಯರ 14 ವಯೋಮಿತಿ ಒಳಗಿನ ಮತ್ತು 17 ವಯೋಮಿತಿ ಒಳಗಿನ ಕುಸ್ತಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ-11, ದ್ವಿತೀಯ ಸ್ಥಾನ-04, ತೃತೀಯ ಸ್ಥಾನ-03 ಹೀಗೆ ಒಟ್ಟು-18 ಪದಕಗಳನ್ನು ಪಡೆದು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದು, ಅವರಿಗೆ ಇಲಾಖೆಯ ಅಥ್ಲೇಟಿಕ್ಸ್ ತರಬೇತುದಾರರಾದ ಶ್ಯಾಮಲಾ ಪಾಟೀಲ, ಹಾಕಿ ತರಬೇತುದಾರ ಚಂದ್ರಶೇಖರ ನಾಯ್ಕರ ಮತ್ತು ಕುಸ್ತಿ ತರಬೇತುದಾರ ಶಿವಪ್ಪ ಪಾಟೀಲ ತರಬೇತಿಯನ್ನು ನೀಡುತ್ತಿದ್ದಾರೆ.

ಅಥ್ಲೇಟಿಕ್ಸ್ ವಿಜೇತರು:
ಸಂದೀಪ್, ದೀಪಿಕಾ ಹಾಕಿ ವಿಜೇತರು. ವೀಣಾ ಹಾವೇರಿ, ಶ್ರಾವಂತಿ ಜಿ, ಯಾಸ್ಮೀನ್, ನಿಶ್ಚಿತಾ, ಸುಕನ್ಯ, ಮಧುಶ್ರೀ, ಬಿಂದುಶ್ರೀ, ಶೀಲ್ಪಾ, ಪ್ರೀತಿ, ನಿರ್ಮಲಾ, ಸೌಮ್ಯ, ಮ್ಯಾಹಕ್, ಪ್ರತೀಕ್ಷಾ, ಬಸಮ್ಮ, ಶ್ರವಣಿ, ಪರಿಣಿತಾ ಕುಸ್ತಿ ವಿಜೇತರು. ದಾದಾಪೀರ ಎಸ್ – ಪ್ರಥಮ, ಬಾಹುಸಾಹೇಬ ಮಾನೆ- ಪ್ರಥಮ, ಶಿವಾಜಿ ಗಾಯಕವಾಡ – ದ್ವೀತಿಯ, ಚೈತನ್ಯ ಬಿ ಎಮ್ – ದ್ವೀತಿಯ, ಸ್ವಪ್ನಾ ವಾಯ್ – ದ್ವೀತಿಯ ಎಸ್‍ಜಿಎಫ್‍ಐ: ಪ್ರಭಾವತಿ ಲಂಗೋಟಿ 39 ಕೆಜಿ, ಜಾನ್ವಿ ಕೆ 46 ಕೆಜಿ, ಚೈತನ್ಯ ಬಿ ಎಮ್ 49 ಕೆಜಿ, ಪುಷ್ಪಾ ನಾಯಕ 53 ಕೆ, ಲೋಕೇಶ ಶಿಂಗ್ರಿ 41 ಕೆಜಿ, ಅಭಿ ಕುರಬರ್ 44 ಕೆಜಿ, ಸುಧೀಪ್ ನೆಸರಿಗಿ 51 ಕಜಿ, ದಾದಾಪೀರ ಎಸ್ 60 ಕೆಜಿ (ಜಿ/ಆರ್), ಚೇತನ ತೋಕೋಜಿ 60 ಕೆಜಿ, ಮಾದೇಶ ಬತ್ತೆ 45 ಕೆಜಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗಂಗಮ್ಮ ಹಡಪದ 40 ಕೆಜಿ, ಯಂಕಪ್ಪ ಕುಡಗಿ 48 ಕೆಜಿ, ಶಿವಾಜಿ ಗಾಯಕವಾಡ 65 ಕಜಿ, ಬಾಹುಸಾಹೇಬ ಮಾನೆ 80 ಕಜಿ ದ್ವೀತಿಯ ಸ್ಥಾನ ಪಡೆದಿದ್ದಾರೆ. ಮಣಿಕಂಠ ಕುಲಾವಿ 45 ಕೆಜಿ, ಕಾವ್ಯ ಜಾಧವ 42 ಕೆಜಿ, ಸ್ವಪ್ನಾ ವಾಯ್ 61 ಕೆಜಿ ತೃತೀಯ ಸ್ಥಾನ ಪಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ಸೌಜನ್ಯ ಕೊಲೆ; ಯುಟ್ಯೂಬರ್ ಸಮೀರ್ ಪ್ರಕರಣದ ವಿಚಾರಣೆ ಧಾರವಾಡ ಪೀಠಕ್ಕೆ ವರ್ಗಾವಣೆ

ಈ ಎಲ್ಲ ವಿಜೇತ ಕುಸ್ತಿ ಪಟುಗಳಿಗೆ ಮತ್ತು ತರಬೇತುದಾರರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪೂರ ಅವರು ಅಥ್ಲೇಟಿಕ್ಸ್, ಹಾಕಿ ಮತ್ತು ಕುಸ್ತಿ ಕ್ರೀಡಾಪಟುಗಳಿಗೆ ಮತ್ತು ತರಬೇತುದಾರರಿಗೆ ಶುಭ ಕೋರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...