ಧಾರವಾಡ | ನೆರೆಮನೆಗೆ ಆಟವಾಡಲು ಹೋದ ಬಾಲಕ, ಬಂದಿದ್ದು ಶವವಾಗಿ: ಹೂತಿದ್ದ ಶವ ಹೊರತೆಗೆಸಿದ ತಾಯಿ!

Date:

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಇತ್ತೀಚಿಗೆ ಮೂರು ವರ್ಷದ ಮಗು ಸಾವನ್ನಪ್ಪಿರುವ ಹಿನ್ನೆಲೆ, ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಾಯಿ ತನಿಖೆ ನಡೆಸಲು ಪೊಲೀಸರಿಗೆ ದೂರು ಸಲ್ಲಿಸಿದ್ದರು.‌

ನವೆಂಬರ್ 8ಕ್ಕೆ ಬಾಲಕ ಯಲ್ಲಪ್ಪ ಮೃತಪಟ್ಟಿದ್ದ. ತದನಂತರ ಪಕ್ಕದ ಮನೆಯ ನಿವಾಸಿ, ಈ ಹಿಂದೆ ತನ್ನ ಪತಿ ವೆಂಕಪ್ಪ ಮರಿಸಿದ್ದಣ್ಣವರ ಮೇಲೆ ಟ್ರ್ಯಾಕ್ಟರ್ ಹರಿಸಲು ಮುಂದಾಗಿದ್ದ ವ್ಯಕ್ತಿ ನಾಗಲಿಂಗ ಜೋಗಿನ್ ಎಂಬುವವರು ನಾಪತ್ತೆ‌ ಆಗಿದ್ದ. ಇದರಿಂದಾಗಿ ಬಾಲಕನ ತಾಯಿ ಶಾಂತಾ ಈ ಬಗ್ಗೆ ಸಂಶಯ ವ್ಯಕ್ತಪಡಿಸಲು ಕಾರಣವಾಗಿದೆ.

ಎರಡೂ ಕುಟುಂಬಗಳು ಕುರುಬ ಸಮುದಾಯಕ್ಕೆ ಸೇರಿದ್ದು, ದೂರದ ಸಂಬಂಧಿಗಳೆಂದು ಹೇಳಲಾಗಿದೆ. ಈ ಬಗ್ಗೆ ಸಂಶಯಪಟ್ಟ ತಾಯಿ, ತನ್ನ ಮಗನ ಸಾವು ಆಕಸ್ಮಿಕವಲ್ಲ, ಕೊಲೆ ನಡೆಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ ಬಾಲಕನ ಅಂತ್ಯ ಸಂಸ್ಕಾರವಾದ ನಂತರ ಶಾಂತಾ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಧಾರವಾಡ | ಆಟವಾಡಲು ಹೋದ ಮಗ, ಬಂದಿದ್ದು ಶವವಾಗಿ: ಹೂತಿದ್ದ ಶವ ಹೊರತೆಗೆಸಿದ್ದು ಯಾಕೆ?

ಅದರಂತೆ ನವೆಂಬರ್ 14ಕ್ಕೆ ಪೊಲೀಸರು ಯಮನೂರು ಸ್ಮಶಾನ ಭೂಮಿಗೆ ಬೇಟ್ಟಿ ಕೊಟ್ಟು ಹೂತಿದ್ದ ಶವವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ. ನವಲಗುಂದ ತಹಶೀಲ್ದಾರ್ ಸುಧೀರ್ ಸಾಹುಕಾರ್, ಪಿಎಸ್‌ಐ ಜನಾರ್ದನ ಭಟ್ರಳ್ಳಿ ನೇತೃತ್ವದಲ್ಲಿ ಶವ ಹೊರತೆಗೆಯುವ ಪ್ರಕ್ರಿಯೆಯನ್ನು ನಡೆಸಲಾಗಿದೆ.

ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮೃತ ಬಾಲಕ ಯಲ್ಲಪ್ಪನ ತಾಯಿ ಶಾಂತಾ ನ್ಯಾಯಕ್ಕಾಗಿ ಕಾಯುತ್ತಿದ್ದು, ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

ಈ ಕುರಿತು ಮೃತ ಬಾಲಕನ ತಾಯಿ ಶಾಂತಾ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಈ ಘಟನೆ ನಡೆದ ದಿವಸ ಮನೆಯಲ್ಲಿ ಯಾರೂ ಇರಲಿಲ್ಲ. ಅವತ್ತು ನನ್ನ ಮಗನನ್ನು ಅಂಗನವಾಡಿಯಿಂದ ಕರೆದುಕೊಂಡು ಬಂದ ನಂತರ ಈ ಘಟನೆ ಸಂಭವಿಸಿದೆ.‌ ಪಕ್ಕದ ಮನೆಯವರಿಗೂ ನಮಗೂ ಸುಮಾರು ವರ್ಷದಿಂದ ಜಗಳವಿದೆ. ಕಬ್ಬಿಣದ ಬಾಂಡ್ ಫಾರ್ಮ್ ನನ್ನ ಮಗನ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪಕ್ಕದ ಮನೆಯ ನಾಗಲಿಂಗ ಎಂಬುವವರು ನನ್ನ ಮಗನನ್ನು ಎತ್ತಿಕೊಂಡು ಬಂದು ಹೇಳಿದರು. ನಂತರ ಅವರು ಯಾರಿಗೂ ಕಾಣದೆ ನಾಲ್ಕೈದು ದಿನ ನಾಪತ್ತೆ ಆಗಿದ್ದರಿಂದ ನನಗೆ ಸಂಶಯ ಬಂದು, ತನಿಖೆಗೆ ಒತ್ತಾಯಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

IMG 20241115 071259

ಮುಂದುವರಿದು, “ಅವರೇ ಕೊಲೆ ಮಾಡಿದ್ದಾರೆ ಎಂದೂ ನಾನು ಹೇಳುವುದಿಲ್ಲ. ಏಕೆಂದರೆ ನಾನಂತೂ ಈ ಘಟನೆಯನ್ನು ಕಣ್ಣಾರೆ ಕಂಡಿಲ್ಲ. ಅವರಿಗೂ ನಮಗೂ ಮೊದಲೇ ವೈಷಮ್ಯವಿದ್ದ ಕಾರಣ ಪಕ್ಕದ ಮನೆಯವರ ಮೇಲೆ ಸಂಶಯ ಮೂಡಲು ಕಾರಣವಾಯಿತು. ಇನ್ನು ನೆರೆ ರಾಜ್ಯಕ್ಕೆ ದುಡಿಯಲು ಹೋಗಿರುವ ನನ್ನ ಪತಿಯೂ ಆ ಸಮಯದಲ್ಲಿ ಲ ಇರಲಿಲ್ಲ ಮತ್ತು ಈಗಲೂ ಬಂದಿಲ್ಲ. ಈ ಸಮಯ ನೋಡಿಕೊಂಡು ಈ ರೀತಿಯ ಕೃತ್ಯಕ್ಕೆ ಇಳಿದಿರಬಹುದು ಎಂಬ ಸಂಶಯವಿದೆ. ನಾನು ದೂರು ನೀಡಿದ ನಂತರ ಪೊಲೀಸರು ನಾಗಲಿಂಗ ಎಂಬಾತನನ್ನು ಬಂಧಿಸಿದ್ದಾರೆ. ನಾನು ಏನೂ ತಪ್ಪು ಮಾಡಿಲ್ಲವೆಂದು ಪೊಲೀಸರ ಮುಂದೆಯೂ ಅವರು ಹೇಳಿಕೊಂಡಿದ್ದಾರೆ. ತನಿಖೆ ಆಗಲಿ” ಎಂದು ತಿಳಿಸಿದ್ದಾರೆ.

ಮನೆಯ ಅಂಗಳದಿಂದ ಸ್ವಲ್ಪ ದೂರದಲ್ಲಿ ಆಟವಾಡಲು ಹೋದ ನನ್ನ ಮಗ ವಾಪಸ್ಸು ಮನೆಗೆ ಬಂದಿದ್ದು ಶವವಾಗಿ. ಇದ್ದ ಒಬ್ಬ ಮಗನು ಹೀಗಾದರೆ ಏನು ಮಾಡುವುದು? ಯಾವುದಕ್ಕೂ ತನಿಖೆ ನಡೆಯಲಿ, ವೈದ್ಯಕೀಯ ವರದಿ ಬಂದ ಮೇಲೆ ಸತ್ಯ ತಿಳಿಯುತ್ತದೆ. ಒಂದು ವೇಳೆ ಸಾವು ಆಕಸ್ಮಿಕವಲ್ಲ ಎಂದು ಸಾಬೀತಾದರೆ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಮಗನನ್ನು ಕಳೆದುಕೊಂಡ ತಾಯಿ ಶಾಂತಾ ತಮ್ಮ ನೋವು ತೋಡಿಕೊಂಡಿದ್ದಾರೆ.

ವೈದ್ಯಕೀಯ ವರದಿ ಬಂದನಂತರ ಕೊಲೆ ಎಂದು ಸಾಬೀತಾದರೆ ನ್ಯಾಯಕ್ಕಾಗಿ ಊರ ಹೆದ್ದಾರಿಯಲ್ಲಿ ಬೃಹತ್ ಧರಣಿ ಕುಳಿತುಕೊಳ್ಳುತ್ತೇವೆ. ಸದ್ಯ ತನಿಖೆ ನಡೆಯುತ್ತಿದೆ. ವರದಿಯ ನಂತರ ಸತ್ಯಾಸತ್ಯತೆ ತಿಳಿಯುತ್ತದೆ. ಈಗಲೇ ಯಾರ ಮೇಲೂ ನೇರ ಆರೋಪವನ್ನೂ ಮಾಡುವುದಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ನಾವ್ಯಾರೂ ಇರದಿದ್ದ ಕಾರಣಕ್ಕೆ ಸಾವಿನ ಬಗ್ಗೆ ತಿಳಿದುಕೊಳ್ಳಲು ದೂರು ಸಲ್ಲಿಸಲಾಗಿದೆ ಎನ್ನುತ್ತಾರೆ ಮೃತ ಬಾಲಕನ ಕುಟುಂಬಸ್ಥರು. ಮತ್ತು ಈ ಮೊದಲು ಅನೇಕ ಬಾರಿ ನಮ್ಮ ಕುಟುಂಬದ ಮೇಲೆ ಆ ಕುಟುಂಬವು ಹಲ್ಲೆ ಇತ್ಯಾದಿ ಧ್ವೇಷ ಕಾರುತ್ತಲೇ ಬಂದಿದೆ. ಜಗಳ ಸರ್ವೆ ಸಾಮಾನ್ಯವೆಂದು ನಾವೂ ಸುಮ್ಮನೆ ಕುಳಿತಿದ್ದೆವು. ಆದರೆ ಇಂತಹ ದೊಡ್ಡ ಅನಾಹುತ ಮಾಡುತ್ತಾರೆ ಎಂದು ನಮಗೆ ಕನಸಿನಲ್ಲಿಯೂ ಅನಿಸಿರಲಿಲ್ಲ ಎಂದು ದುಃಖ ವ್ಯಕ್ತಪಡಿಸುತ್ತಾರೆ.

ಈ ವರದಿ ಓದಿದ್ದೀರಾ? ಉತ್ತರ ಕನ್ನಡ | ಅನಾಥ ರಕ್ಷಕರ ಮೇಲೆ ಹಲ್ಲೆ, ಕೊಲೆ ಯತ್ನ : ತನಿಖೆಗೆ ಆಗ್ರಹ

ಇನ್ನು ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಮಾತನಾಡಿ, ಈಗಾಗಲೇ ಬಾಲಕನ‌ ಮೃತ ದೇಹವನ್ನು ಹೊರತೆಗೆದು ಪಂಚನಾಮೆ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ. ವರದಿ ಬರುವ ತನಕ ಕಾಯುತ್ತಿದ್ದೇವೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ವೈದ್ಯಕೀಯ ವರದಿಯ ನಂತರ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

ಈಗ ಬಾಲಕನ ಕುಟುಂಬಸ್ಥರು ಹಾಗೂ ಪೊಲೀಸರು ವೈದ್ಯಕೀಯ ವರದಿಯನ್ನು ಕಾಯುತ್ತಿದ್ದಾರೆ. ವರದಿಯಲ್ಲಿ ಏನಿರಲಿದೆ ಎಂಬುದು ಸದ್ಯ ಗ್ರಾಮಸ್ಥರನ್ನೂ ಕೂಡ ಕಾಯುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...