ಧಾರವಾಡ | ರಂಗಭೂಮಿ; ಜೀವನ ಶಿಕ್ಷಣವನ್ನು ನೀಡುವ ಒಂದು ಉತ್ತಮ ಮಾಧ್ಯಮ: ಡಾ. ಈಶ್ವರ ಉಳ್ಳಾಗಡ್ಡಿ

Date:

ರಂಗಭೂಮಿಯು ಜೀವನ ಶಿಕ್ಷಣವನ್ನು ನೀಡುವ ಒಂದು ಉತ್ತಮ ಮಾಧ್ಯಮ. ನಾಟಕವು ಸರ್ವರಿಗೂ ಜ್ಞಾನವನ್ನು ನೀಡುವ ಮೌಲ್ಯಾಧಾರಿತ ವಿಷಯವನ್ನು ಒಳಗೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಧಾರವಾಡದ ಡಯಟ್ ಆವರಣದಲ್ಲಿರುವ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಮತ್ತು ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನವು ರಂಗಾಯಣದ ಸಹಯೋಗದೊಂದಿಗೆ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ ಹಾಗೂ ‘ರಂಗ ರಶ್ಮಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಟಕವು ಸರ್ವರಿಗೂ ಶಿಕ್ಷಣವನ್ನು ನೀಡುವ ಚಟುವಟಿಕೆಪೂರಿತ ಮಾಧ್ಯಮವಾಗಿದೆ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರೂ ಹಾಗೂ ಸಮುದಾಯವೂ ಪಾಲ್ಗೊಳ್ಳುತ್ತದೆ. ಇಂಥಹ ಒಂದು ಮೌಲ್ಯಭರಿತ ಪಠ್ಯಾಧಾರಿತ ನಾಟಕೋತ್ಸವವನ್ನು ಸುದೀರ್ಘ 31ವರ್ಷ ನಡೆಸಿಕೊಂಡು ಬಂದಿರುವುದು ಪ್ರತಿಷ್ಠಾನದ ಹೆಗ್ಗಳಿಕೆ ಎಂದರು.

ಇದೇ ವೇಳೆ ಖ್ಯಾತ ರಂಗಕರ್ಮಿ ವೀಣಾ ಮೋಡಕ ಅವರಿಗೆ ‘ರಂಗರಶ್ಮಿ’ ಪ್ರಶಸ್ತಿ ಪ್ರದಾನ ಮಾಡಿದ ಧಾರವಾಡ ಆಕಾಶವಾಣಿ ಕಾರ್ಯಕ್ರಮದ ನಿರ್ದೇಶಕ ಶರಣಬಸವ ಚೋಳಿನ ಮಾತನಾಡಿ, ಬಾಲ್ಯದಿಂದ ಮುಪ್ಪಿನವರೆಗೂ ಪ್ರಿಯವಾದದ್ದು ನಾಟಕ. ಇದನ್ನು  ಶಿಕ್ಷಣಕ್ಕಾಗಿ ಬಳಸಿಕೊಂಡಿದ್ದು ಒಂದು ಹೊಸತನ ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರು ಕ್ರಿಯಾಶೀಲ ಶಿಕ್ಷಕರಾಗಿರುತ್ತಾರೆ. ಅಂತಹವರನ್ನು ಗುರುತಿಸಿ ಗೌರವಿಸುವುದಕ್ಕಾಗಿ ಈ ನಾಟಕೋತ್ಸವದ ಸಂಯೋಜಕರಾದ ಕೆ.ಎಚ್.ನಾಯಕ ತಮ್ಮ ಮಗಳು ದಿ.ರಶ್ಮಿ ನಾಯಕ ಅವರ ಸ್ಮರಣಾರ್ಥ ‘ರಂಗರಶ್ಮಿ’ ಪ್ರಶಸ್ತಿಯನ್ನು ಪ್ರತಿವರ್ಷ ಕೊಡಲು ಅನುವು ಮಾಡಿದ್ದು ಈ ಯೋಜನೆ ಒಂದು ಪ್ರೇರಕ ಶಕ್ತಿಯಾಗಿದೆ ಎಂದರು. ಪ್ರಥಮ ಪ್ರಶಸ್ತಿ ಸ್ವೀಕರಿಸಿದ ವೀಣಾ ಮೋಡಕ ಅವರನ್ನು ಅಭಿನಂದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾಟಕೋತ್ಸವ ಸಂಯೋಜಕ ಕೆ.ಎಚ್.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, 31 ವರ್ಷದವರೆಗೆ ನಿರಂತರವಾಗಿ ಪಠ್ಯಾಧಾರಿತ ನಾಟಕೋತ್ಸವವನ್ನು ದತ್ತಿ ದಾನಿಗಳ ನೆರವಿನಿಂದ ನಡೆಸುತ್ತಾ ಬಂದಿದ್ದೇವೆ. ನಮ್ಮ ಶಿಕ್ಷಕ ಸಮೂಹದ ಕೊಡುಗೆ ಅಪಾರವಾಗಿದೆ. ಅಂತಹ ಶಿಕ್ಷಕರಿಗೆ ರಂಗಭೂಮಿಯ ಮನ್ನಣೆ ಸಿಗಬೇಕೆಂದು ಈ ವರ್ಷದಿಂದ ‘ರಂಗರಶ್ಮಿ’ ಪ್ರಶಸ್ತಿಯನ್ನು ಪ್ರತಿಷ್ಠಾನ ನೀಡುತ್ತಿದೆ. ಇಷ್ಟು ದೀರ್ಘಾವಧಿ ನಾಟಕೋತ್ಸವವನ್ನು ನಡೆಸಿಕೊಂಡು ಬಂದಿರುವುದು ರಾಜ್ಯದಲ್ಲಿಯೇ ಧಾರವಾಡ ಡಯಟ್ ಸಂಸ್ಥೆಯ ಅಂಗಸಂಸ್ಥೆಯಾದ ಎರಡೂ ಪ್ರತಿಷ್ಠಾನಗಳ ಹೆಮ್ಮೆಯ ಸಂಗತಿ ಎಂದರು.

ಇದನ್ನೂ ಓದಿ ಮಡಿಕೇರಿ | ಬಸವಾದಿ ಶರಣರ ವಚನಗಳೇ ಸಂವಿಧಾನ ರಚನೆಗೆ ಮೂಲ ಆಧಾರವಾಯಿತು: ಕೆ.ಪಿ ಜಯಕುಮಾರ್

ಡಯಟ ಪ್ರಾಚಾರ್ಯ ಬಸವರಾಜ ನಾಲತ್ವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಚಿಕ್ಕಮಠ ಸ್ವಾಗತಿಸಿದರು. ಪ್ರತಿಷ್ಠಾನದ ಗೌರವ ನಿರ್ದೇಶಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತಾಲಯದ  ಆಡಳಿತ ವಿಭಾಗದ ಉಪನಿರ್ದೇಶಕ ಗಿರೀಶ ಪದಕಿ, ಶಿವಶಂಕರ ಹಿರೇಮಠ, ಸಿದ್ಧರಾಮ ಮನಹಳ್ಳಿ ಉಪಸ್ಥಿತರಿದ್ದರು. ರೋಹಿಣಿ ದಾನಿ ನಿರೂಪಿಸಿದರು. ಡಾ. ಕುಮದ್ವತಿ ಭರಮಗೌಡ್ರ ವಂದಿಸಿದರು.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...