ಜಾಗತೀಕರಣದ ಪ್ರಭಾವದಿಂದ ಇಂದು ರಂಗಕಲೆ ಕ್ಷಿಣವಾಗುತ್ತಿದೆ. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ರಂಗಕಲೆಗೆ ಪ್ರೊತ್ಸಾಹ ಅಗತ್ಯವಾಗಿದೆ. ನಾಟಕಗಳಿಗೆ ಪ್ರೇಕ್ಷಕರೇ ಜೀವಾಳ ಎಂದು ಗಣ್ಯ ವ್ಯಾಪಾರಸ್ಥರಾದ ಶಿವಶಂಕರ ಹಂಪಣ್ಣವರ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಹತ್ತು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಉಳಿಸುವುದು ಬರೀ ಬಾಯಿ ಮಾತಿನಿಂದ ಹೇಳಿದರೆ ಸಾಲದು. ಅದು ನಮ್ಮ ಮನೆಯಿಂದಲೇ ಮೊದಲು ಪ್ರಾರಂಭವಾಗಬೇಕು. ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡ ಭಾಷೆ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು. ಎಲ್.ಕೆ.ಜಿ ಯಿಂದಲೇ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ಕೊಡಿಸಬೇಕು. ಇಂದು ಸರಕಾರಿ ಶಾಲೆಗಳು ನಿರಂತರವಾಗಿ ಮುಚ್ಚುವ ಸ್ಥಿತಿಯಲ್ಲಿದ್ದು ಅವುಗಳನ್ನು ಸಶಕ್ತಗೊಳಿಸಲು ಕ.ವಿ.ವ ಸಂಘ ಪ್ರಯತ್ನಿಸಬೇಕು ಎಂದು ಹೇಳಿದರು.
ರಂಗಕಲಾವಿದ ಡಾ. ಹಜರೇಸಾಬ ನದಾಪ ಸನ್ಮಾನ ಸ್ವೀಕರಿಸಿ ಮಾತನಾಡಿ, ನನಗೆ ಬಾಲ್ಯದಿಂದಲೇ ನನ್ನ ತಂದೆ ನಾಟಕಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಜೀವಿ ಕಲಾಬಲಗ ಹಾಗೂ ಜಾನಪದ ಕಲಾ ಬಳಗ ಎರಡು ಕಲಾ ಸಂಸ್ಥೆಗಳು ನನ್ನ ಕಲಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದ್ದರಿಂದ ನಾನು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ರಂಗಕಲಾವಿದೆ ದೇವಿಕಾರಾಣಿ ಜಗದೀಶ ಮಾತನಾಡಿ, ನನ್ನಂತಹ ಇತರ ಕಲಾವಿದರಿಗೂ ಕ.ವಿ.ವ ಸಂಘ ಗುರುತಿಸಿ ಸನ್ಮಾನಿಸಬೇಕೆಂದು ಹೇಳಿದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. ವೀರಣ್ಣ ಒಡ್ಡೀನ, ಕೆ. ಎಚ್. ನಾಯಕ, ಕಿರಣ ಸಿದ್ದಾಪೂರ, ಶಂಕರ ಗಟ್ನಟ್ಟಿ, ಬಸವರಾಜ ಮುರಗೋಡ, ಎನ್. ಆರ್. ಬಾಲಿಕಾಯಿ, ನಿಂಗಯ್ಯ ರಾಚಯ್ಯನವರ, ಈರಣ್ಣ ನವಲಗುಂದ, ಎಂ. ಸಿ. ಯಲಿಗಾರ, ಸಿ. ಎಸ್. ಪಾಟೀಲಕುಲಕರ್ಣಿ, ಎಲ್. ಆರ್. ಬೂದಿಹಾಳ, ಶ್ರೀಧರ ಗಸ್ತಿ, ರಾಮಚಂದ್ರ ಗೆದ್ದೆಣ್ಣವರ ಇದ್ದರು.
ಇದನ್ನೂ ಓದಿ ಧಾರವಾಡ | ನಾಟಕಗಳಿಗೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿ ಇದೆ: ಡಾ. ನಿತಿನಚಂದ್ರ ಹತ್ತಿಕಾಳ
ಕೊನೆಗೆ ಶಿವಮೊಗ್ಗದ ಕಲಾರೋಹಣ ಪ್ರಸ್ತುತಿಯ ಡಾ. ಗಜಾನನ ಶರ್ಮಾ ರಚನೆಯ ಬಿ. ಆರ್. ರೇಣುಕಪ್ಪ ನಿರ್ದೇಶನದ “ನನನ……. ನಮ್ ರಸ್ತೆ” ಹಾಸ್ಯ ಪ್ರಧಾನ ನಾಟಕ ಪ್ರದರ್ಶನಗೊಂಡಿತು.





